Friday, June 20, 2025
Google search engine

Homeರಾಜ್ಯಮಾವಿಗೆ ಬೆಂಬೆಲ ಬೆಲೆ ಘೋಷಿಸಲು ಸಚಿವ ಕೆ.ಹೆಚ್‌. ಮುನಿಯಪ್ಪ ಒತ್ತಾಯ

ಮಾವಿಗೆ ಬೆಂಬೆಲ ಬೆಲೆ ಘೋಷಿಸಲು ಸಚಿವ ಕೆ.ಹೆಚ್‌. ಮುನಿಯಪ್ಪ ಒತ್ತಾಯ

ಬೆಂಗಳೂರು: ಮಾವು ಬೆಳೆಗಾರರಿಗೆ ನಿಗದಿತ ಬೆಂಬಲ ಬೆಲೆ ಘೋಷಿಸಬೇಕು ಎಂದು ಸಚಿವ ಕೆ.ಹೆಚ್‌. ಮುನಿಯಪ್ಪ ಅವರು ಸಚಿವ ಸಂಪುಟ ಸಭೆಯಲ್ಲಿ ಒತ್ತಾಯಿಸಿದರು. ಶ್ರೀನಿವಾಸಪುರ ತಾಲ್ಲೂಕಿನ ಮಾವು ಹಣ್ಣು ಖ್ಯಾತಿಯಾಗಿದ್ದು, ರೈತರು ಬೆಲೆ ಇಲ್ಲದೆ ಕಂಗಾಲಾಗಿದ್ದಾರೆ.

ಆಂಧ್ರಪ್ರದೇಶವು ತೋತಾಪುರಿ ಮಾವಿಗೆ ನಿರ್ಬಂಧ ಹಾಕಿರುವ ಕಾರಣ ಪರಿಸ್ಥಿತಿ ಮತ್ತಷ್ಟು ಸಂಕೀರ್ಣವಾಗಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಂಧ್ರ ಮುಖ್ಯಮಂತ್ರಿಗೆ ಪತ್ರ ಬರೆದು ಚರ್ಚೆ ಮಾಡಿದ್ದಾರೆ. ರೈತರಿಗೆ ಬೆಂಬಲ ನೀಡಲು ಬೆಂಬೆಲ ಬೆಲೆ ಘೋಷಿಸುವ ಅಗತ್ಯವಿದೆ ಎಂದು ಸಚಿವರು ಒತ್ತಾಯಿಸಿದರು. ಈ ಸಭೆಯಲ್ಲಿ ಭೈರತಿ ಸುರೇಶ್‌, ಎಂ.ಸಿ. ಸುಧಾಕರ್‌ ಹಾಗೂ ಕೃಷ್ಣ ಬೈರೇಗೌಡ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular