Wednesday, June 18, 2025
Google search engine

Homeಸ್ಥಳೀಯಕಾರು ಬಾಡಿಗೆ ಪಡೆದು ಗಿರವಿ ಇಟ್ಟ ಕಿಡಿಗೇಡಿಗಳು:  ಮಾಲೀಕ ಆತ್ಮಹತ್ಯೆ

ಕಾರು ಬಾಡಿಗೆ ಪಡೆದು ಗಿರವಿ ಇಟ್ಟ ಕಿಡಿಗೇಡಿಗಳು:  ಮಾಲೀಕ ಆತ್ಮಹತ್ಯೆ

ಮೈಸೂರು: ಕಾರು ಬಾಡಿಗೆಗೆ ಪಡೆದ ಕೆಲವರು ಬಳಿಕ ಗಿರವಿ ಇಟ್ಟ ಹಿನ್ನೆಲೆಯಲ್ಲಿ ಮನನೊಂದ ವಾಹನದ ಮಾಲೀಕ ಡೆತ್ ನೋಟ್ ಬರೆದಿಟ್ಟು, ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರಿನ ರಾಜೀವ್ ನಗರದಲ್ಲಿ ನಡೆದಿದೆ.

ಮುಜಾಹಿದ್ ಪಾಷಾ ಆತ್ಮಹತ್ಯೆ ಮಾಡಿಕೊಂಡವರು.

ಕಾರು ಬಾಡಿಗೆ ಕೊಡುವ ವೃತ್ತಿ ಮಾಡುತ್ತಿದ್ದ ಮುಜಾಹಿದ್​ ಪಾಷಾ ತಮ್ಮ ಇನ್ನೋವಾ ಕಾರನ್ನು ಅಸ್ಗರ್ ಪಾಷಾ ಹಾಗೂ ಸಲ್ಲು ಎಂಬುವರಿಗೆ ಬಾಡಿಗೆಗೆ ಕೊಟ್ಟಿದ್ದರು. ಅಲ್ಲದೇ, ಸ್ವಲ್ಪ ಸಾಲದ ಹಣವನ್ನೂ ಸಹ ನೀಡಿದ್ದರು. ಆದರೆ, ಬಾಡಿಗೆಗೆ ಪಡೆದ ಕಾರನ್ನು ಅಸ್ಗರ್ ಪಾಷಾ ಹಾಗೂ ಸಲ್ಲು ಅವರು ಗಿರವಿ ಇಟ್ಟಿದ್ದಾರೆ. ಜೊತೆಗೆ ಸಾಲದ ಹಣವನ್ನೂ ಸಹ ಹಿಂದಿರುಗಿಸದೇ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಇದರಿಂದ ತೀವ್ರ ಮನನೊಂದ ಮುಜಾಹಿದ್ ಪಾಷಾ ಪತ್ನಿಯೊಂದಿಗೆ ತಮಗಾದ ಮೋಸದ ಬಗ್ಗೆ ಹೇಳಿಕೊಂಡಿದ್ದಾರೆ. ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಮಕ್ಕಳಿಗೆ ಬಟ್ಟೆ ತರುವಂತೆ ಪತ್ನಿಗೆ ಹಣ ಕೊಟ್ಟು ಕಳುಹಿಸಿದ ಮುಜಾಹಿದ್ ಪಾಷಾ, ತಮ್ಮ ಮನೆಯಲ್ಲಿಯೇ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪತಿಯ ಸಾವಿಗೆ ಅಸ್ಗರ್ ಪಾಷಾ ಹಾಗೂ ಸಲ್ಲು ಅವರೇ ಕಾರಣ ಎಂದು ಆರೋಪಿಸಿ ಪತ್ನಿ ಆಸ್ಮಾ ಉದಯಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

RELATED ARTICLES
- Advertisment -
Google search engine

Most Popular