Saturday, May 31, 2025
Google search engine

Homeರಾಜ್ಯಮುಡಾ ಹಗರಣ: ತನಿಖಾಧಿಕಾರಿಯನ್ನು ಬದಲಾಯಿಸಲು ಸ್ನೇಹಮಯಿ ಕೃಷ್ಣ ಅರ್ಜಿ

ಮುಡಾ ಹಗರಣ: ತನಿಖಾಧಿಕಾರಿಯನ್ನು ಬದಲಾಯಿಸಲು ಸ್ನೇಹಮಯಿ ಕೃಷ್ಣ ಅರ್ಜಿ

ಮೈಸೂರು: ಮುಡಾ ಹಗರಣದ ತನಿಖೆಗೆ ಸಂಬಂಧಿಸಿದಂತೆ ತನಿಖಾಧಿಕಾರಿಯನ್ನು ಬದಲಾಯಿಸುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವೆನೆಂದು ದೂರುದಾರ ಸ್ನೇಹಮಯಿ ಕೃಷ್ಣ ತಿಳಿಸಿದ್ದಾರೆ.

ಜನಪ್ರತಿನಿಧಿ ನ್ಯಾಯಾಲಯದ ಆದೇಶದಂತೆ ಮೈಸೂರು ಲೋಕಾಯುಕ್ತರು ಅಂತಿಮ ವರದಿ ಸಲ್ಲಿಸಬೇಕಿದ್ದರೂ, ಇದು ಇನ್ನೂ ಮುಂದಕ್ಕೆ ಬಾಕಿಯಾಗಿದೆ. ಲೋಕಾಯುಕ್ತರು ವರದಿ ಸಲ್ಲಿಸಲು ಮತ್ತೆ ಕಾಲಾವಕಾಶ ಕೇಳುತ್ತಾರೆ ಎಂಬ ಶಂಕೆ ಇದೆ. ತನಿಖೆ ನಡೆಸುತ್ತಿರುವ ಎಸ್‌ಪಿ ಮೇಲೆ ಅನುಮಾನವಿದ್ದು, ನ್ಯಾಯಾಂಗ ವ್ಯವಸ್ಥೆಯ ಮೇಲಿನ ನಂಬಿಕೆಯಿಂದ ನಾನು ಈ ಕ್ರಮ ಕೈಗೊಳ್ಳುತ್ತಿದ್ದೇನೆ ಎಂದು ಅವರು ಹೇಳಿದರು.

ಮುಡಾಗೆ ನೀಡಿದ ಜಮೀನಿಗೆ ಪರಿಹಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ೧೪ ಸೈಟ್‌ಗಳನ್ನು ಅಕ್ರಮವಾಗಿ ನೀಡಲಾಗಿದೆ ಎಂಬ ಆರೋಪಗಳು ಕೇಳಿ ಬಂದಿತ್ತು. ಇದರಿಂದ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆ ಎದ್ದಿತ್ತು ಹಾಗೂ ಸೈಟ್‌ಗಳನ್ನು ಅವರು ಮುಡಾಗೆ ವಾಪಸ್ ಮಾಡಿದ್ದರು.

RELATED ARTICLES
- Advertisment -
Google search engine

Most Popular