Saturday, June 28, 2025
Google search engine

Homeರಾಜ್ಯಸುದ್ದಿಜಾಲನಾಡಪ್ರಭು ಕೆಂಪೇಗೌಡರು ದೂರ ದೃಷ್ಟಿಯ ಹರಿಕಾರ: ಕೆ.ಗಣೇಶ್ ಗೌಡ

ನಾಡಪ್ರಭು ಕೆಂಪೇಗೌಡರು ದೂರ ದೃಷ್ಟಿಯ ಹರಿಕಾರ: ಕೆ.ಗಣೇಶ್ ಗೌಡ

ಹುಣಸೂರು: ನಾಡಪ್ರಭು ಕೆಂಪೇಗೌಡರು ದೂರ ದೃಷ್ಟಿಯ ಹರಿಕಾರ. ಆದ್ದರಿಂದಲೇ ಅವರು ನಿರ್ಮಿಸಿದ ಬೆಂಗಳೂರು ಇಂದು ವಿಶ್ವದ ಎತ್ತರಕ್ಕೆ ಬೆಳೆಯಲು ಸಾಧ್ಯವಾಗಿದೆ ಎಂದು ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಕೆ.ಗಣೇಶ್ ಗೌಡ ತಿಳಿಸಿದರು.

ನಗರದ ತಾಲೂಕು ಕಛೇರಿಯಲ್ಲಿ ತಾಲೂಕು ಆಡಳಿತ ಹಮ್ಮಿಕೊಂಡಿದ್ದ 516ನೇ ನಾಡಪ್ರಭು ಕೆಂಪೇಗೌಡರ ಜಯಂತಿಯಲ್ಲಿ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು, ಕೆಂಪೇಗೌಡರು ಚಿಕ್ಕ ವಯಸ್ಸಿನಲ್ಲೇ ನಾಯಕತ್ವ ಗುಣ, ಕತ್ತಿವರಸೆ, ಕುಸ್ತಿ, ಸಮಾಜದ ಏಳಿಗೆಗೆ ಬೇಕಾದ ಎಲ್ಲವನ್ನು ಕರಗತ ಮಾಡಿಕೊಂಡಿದ್ದ ಅವರೂ, ಸಂಪತ್ತು ಭರಿತ ನಾಡು ಕಟ್ಟುವ ಕನಸ್ಸು ಕಂಡಿದ್ದರು ಅದರಂತೆ ಒಂದು ನಗರಕ್ಕೆ ಬೇಕಾದ ಹಲವಾರು ಪೇಟೆಗಳ, ನಿರ್ಮಿಸಿ ಮನೆ ಮಾತಾದರು ಎಂದರು.

ಸತ್ಯ ಫೌಂಡೇಷನ್ ಅಧ್ಯಕ್ಷ ಸತ್ಯಪ್ಪ ಮಾತನಾಡಿ, ಇಡೀ ವಿಶ್ವೇವೆ ಬೆಂಗಳೂರನ್ನು ತಿರುಗಿ ನೋಡುವಂತೆ ಮಾಡಿದ್ದು ನಾಡಪ್ರಭು ಅವರು ನಿರ್ಮಿಸಿದ ನೂರಾರು ಕೆರೆಗಳು, ಅವರು ನೆಟ್ಟ ಗಿಡ-ಮರಗಳು ಹಸಿರ ಕ್ರಾಂತಿಯಾಗಬೇಕಿತ್ತು. ಆದರೆ ಭೂಗಳ್ಳರ ಪಾಲಾಗಿರುವುದು ನೋವಿನ ಸಂಗತಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತಹಶಿಲ್ದಾರ್ ಮoಜುನಾಥ್ ನಾಡಪ್ರಭು ಕೆಂಪೇಗೌಡರು ಮೈಸೂರು ದಸರಾ ಪ್ರಾರoಭವಾದ 1510 ನೇ ಇಸವಿಯಲ್ಲಿ ಯಲಹಂಕ ಮಹಾಸಂಸ್ಥಾನದಲ್ಲಿ ಜನಿಸಿದ ಅವರು, ವಿಜಯನಗರದ ಶ್ರೀ ಕೃಷ್ಣ ದೇವರಾಯ ಮತ್ತು ಅಚ್ಚುತರಾಯರ ವೈಭವದಲ್ಲಿ ಮಿಂದೆದ್ದ ಮೇರು ಪರ್ವತ ಎಂದರು.

ಕೆಂಪೇಗೌಡರನ್ನು ಬರಿ ಪದಗಳಿಂದ ಬಣ್ಣಿಸಲಾದು. ನಂಬಿಕೆಗೆ, ವಿಶ್ವಾಸಕ್ಕೆ ಅವರಿಗೆ ಅವರೇ ಸಾಟಿ, ಪ್ರತಿ ಕ್ಷಣ ಸಮಾಜ ಸೇವೆಗೆ ತಮ್ಮ‌ಕುಟುಂಬವನ್ನು ಮುಡುಪಾಗಿ ಇಟ್ಟಿದ್ದ ಪ್ರಭುಗಳು ಬೆಂಗಳೂರಿನ ನಾಲ್ಕು ದಿಕ್ಕಿಗೂ ಗೋಪುರ, ಎಲ್ಲಡೆ ಹೊಂಗೆ ಗಿಡ ,ಉದ್ಯಾನವನ, ರೈತರಿಗೆ, ಕೆರೆ, ಕಟ್ಟೆಗಳು, ಮನುಷ್ಯರ ಉತ್ತಮ ಬಾಳುವಿಕೆಯ ಭಕ್ತಿಗೆ ಅಗತ್ಯವಿದ್ದ ದೇವಾಯಗಳನ್ನು ನಿರ್ಮಿಸಿ ಭಾರತವೇ ಗುರುತ್ತಿಸುವ ಬೃಹತ್ ನಗರ ಸ್ಥಾಪನೆಗೆ ಕಾರಣರಾಗಿದ್ದಾರೆ. ಅವರ ಆದರ್ಶ ನಮಗೆ ಮಾದರಿ ಎಂದರು.

ಕಾರ್ಯಕ್ರಮದಲ್ಲಿ ಒಕ್ಕಲಿಗರ ಸಂಘದ ಕಾರ್ಯದರ್ಶಿ ಯೋಗಾನಂದ್ ಕುಮಾರ್, ದಲಿತ ಮುಖಂಡ ನಿಂಗರಾಜ ಮಲ್ಲಾಡಿ, ಖಾಲಿದ್, ಹೊನ್ನಪ್ಪ, ಗೋವಿಂದೇಗೌಡ, ಬಿಳಿಕೆರೆ ಪ್ರಸನ್ನ, ಹೊಸೂರು ಕುಮಾರ್, ಕುನ್ನೇಗೌಡ, ಡಿ.ಕುಮಾರ್, ಸೋಮನಹಖ್ಳಿ ಪ್ರಸನ್ನ, ಉಂಡವಾಡಿ ಚಂದ್ರೇಗೌಡ, ರಾಚಪ್ಪ, ಸತೀಶ್ಬಪಾಪಣ್ಣ, ಸಿಂಚನ ಕೃಷ್ಣಗೌಡ,ಹಾಗೂ ನಗರಸಭೆ ಪೌರಾಯುಕ್ತ ಮಾನಸ, ಕೃಷಿ ಇಲಾಖೆಯ ಅನಿಲ್ ಕುಮಾರ್, ತಹಶಿಲ್ದಾರ್ ಹನುಮಯ್ಯ, ಉಪತಹಶೀಲ್ದಾರ್ ಶ್ರೀ ಪಾದ, ಹರ್ಷಕುಮಾರ್, ಜಯರಾಂ ಇದ್ದರು

RELATED ARTICLES
- Advertisment -
Google search engine

Most Popular