ಮಂಡ್ಯ : ಹೊಸ ವರ್ಷದ ಸಂಭ್ರಮಾಚರಣೆ ಹಿನ್ನಲೆ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣ ಶ್ರೀರಂಗಪಟ್ಟಣ, ಪಾಂಡವಪುರ, ಮಳವಳ್ಳಿ, ಕೆ.ಆರ್.ಎಸ್, ಹಿನ್ನೀರು, ಸಂಗಂ, ಕಾವೇರಿ ನದಿ ತೀರವಾದ ಬಲಮುರಿ, ಹೇಮಾವತಿ ಚೆಕ್ ಡ್ಯಾಂ ಸೇರಿ ಅರಣ್ಯ ಪ್ರದೇಶವಾದ ಕರಿಘಟ್ಟ, ಮೇಲುಕೋಟೆ, ಬಸವನಬೆಟ್ಟ ಸೇರಿದಂತೆ ತಾಲೂಕಿನ ಹಲವು ಪ್ರವಾಸಿ ತಾಣಗಳಿಗೆ ನಿರ್ಬಂಧಿಸಲಾಗಿದೆ ಎಂದು ಮಂಡ್ಯ ಎಸ್ಪಿ ಎನ್.ಯತೀಶ್ ತಿಳಿಸಿದರು.

ಇಂದು ಬೆಳಿಗ್ಗೆ ೬ ಗಂಟೆಯಿಂದ ನಾಳೆ ಬೆಳಿಗ್ಗೆ ೬ ಗಂಟೆವರೆಗೂ ಪ್ರವೇಶ ನಿರ್ಬಂಧ. ಅರೆಕೆರೆ ವ್ಯಾಪ್ತಿಯ ಕಾವೇರಿ ಬೋರೆದೇವರ ದೇವಸ್ಥಾನ, ಮಂಡ್ಯ ಕೊಪ್ಪಲು, ಪಕ್ಷಿದಾಮ ಕ್ಕೂ ನಿಷೇಧ. ಮುನ್ನೆಚ್ಚರಿಕಾ ಕ್ರಮವಾಗಿ ಆ ಸ್ಥಳಗಳಲ್ಲಿ ೧೪೪ ಸೆಕ್ಷನ್ ನಿಷೇಧಾಜ್ಞೆ ಜಾರಿ. ನಿಷೇಧ ಸ್ಥಳಗಳಲ್ಲಿ ಹೆಚ್ಚಿನ ಜನ ಸೇರುವುದು ,ಹೊಸ ವರ್ಷದ ಸಂಭ್ರಮಾಚರಣೆ ಮಾಡಲು ನಿರ್ಬಂಧ. ಪ್ರವಾಸಿ ತಾಣಗಳಲ್ಲಿ ಹೆಚ್ಚಿನ ಪೊಲೀಸರ ನಿಯೋಜನೆ ಮಾಡಲಾಗಿದೆ. ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರು ಕಾನೂನು ಕ್ರಮ. ನಿರ್ಬಂಧ ಆದೇಶ ಉಲ್ಲಂಘಿಸಿದವರ ವಿರುದ್ದ ಪೊಲೀಸ್ ಇಲಾಖೆಯಿಂದ ಕಾನೂನು ಕ್ರಮದ ಎಚ್ಚರಿಕೆ. ಮಂಡ್ಯ ಎಸ್ಪಿ ಎನ್.ಯತೀಶ್ ತಿಳಿಸಿದರು.
