Friday, June 6, 2025
Google search engine

Homeರಾಜ್ಯಸುದ್ದಿಜಾಲಶುಶ್ರೂಶಕರು ಸೇವಾ ಮನೋಭಾವದಿಂದ ಕೆಲಸ ಮಾಡಿ: ಶೋಭಾ

ಶುಶ್ರೂಶಕರು ಸೇವಾ ಮನೋಭಾವದಿಂದ ಕೆಲಸ ಮಾಡಿ: ಶೋಭಾ

ಟಿ.ನರಸೀಪುರ: ನರ್ಸಿಂಗ್ ವಿದ್ಯಾರ್ಥಿಗಳು ಮಾನವೀಯತೆಗೆ ಮೊದಲು ಆದ್ಯತೆ ನೀಡಿ ಸೇವಾ ಮನೋಭಾವದಿಂದ ಕೆಲಸ ಮಾಡಬೇಕೆಂದು ಕ್ಷೇತ್ರಶಿಕ್ಷಣಾಧಿಕಾರಿ ಶೋಭಾ ಕರೆ ನೀಡಿದರು.

ಟಿ.ನರಸೀಪುರ ತಾಲ್ಲೂಕಿನ ಸೋಸಲೆಯಲ್ಲಿರುವ ಜ್ಞಾನೋದಯ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಲ್ಯಾಂಪ್ ಲೈಟಿಂಗ್ ಹಾಗೂ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಮೋಹನ್‌ರಾಜ್‌ರವರು ನರ್ಸಿಂಗ್ ಕಾಲೇಜು ಮಾಡಿರುವುದರಿಂದ ನಮ್ಮ ತಾಲ್ಲೂಕು ಹಾಗೂ ಬೇರೆ ಬೇರೆ ಕಡೆಯಿಂದ ಬರುವ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಪೋಷಕರು ತಮ್ಮ ಮಕ್ಕಳನ್ನು ಬೇರೆ ಮಕ್ಕಳೊಂದಿಗೆ ಹೋಲಿಕೆ ಮಾಡಬೇಡಿ, ಶಿಕ್ಷಕರೊಂದಿಗೆ ಕೈ ಜೋಡಿಸಿ ಮಕ್ಕಳು ಭವಿಷ್ಯವನ್ನು ರೂಪಿಸಿ ಉತ್ತಮ ನಾಗರೀಕರನ್ನಾಗಿ ಮಾಡಿರಿ ಎಂದರು.

ಅಪೊಲೋ ಬಿ.ಜಿ.ಎಸ್. ಆಸ್ಪತ್ರೆಯ ಉಪಾಧ್ಯಕ್ಷರಾದ ಭರತೇಶ್‌ರೆಡ್ಡಿ ಮಾತನಾಡಿ ನರ್ಸಿಂಗ್ ಮಾಡಿದ ಎಲ್ಲಾ ವಿದ್ಯಾರ್ಥಿಗಳಿಗೂ ಕೆಲಸ ಸಿಕ್ಕೇ ಸಿಗುತ್ತದೆ ವಿದೇಶಗಳಲ್ಲಿಯೂ ಬೇಡಿಕೆ ಇದ್ದು ಉತ್ತಮ ಭವಿಷ್ಯವಿರುವುದರಿಂದ ಚೆನ್ನಾಗಿ ಓದಿ ಜನರ ಸೇವೆ ಮಾಡಬೇಕು ಎಂದರು.

ಸಮಾರಂಭದಲ್ಲಿ ಗ್ರಾ.ಪಂ. ಅಧ್ಯಕ್ಷೆ ಚಾಂದನಿ.ಸಿ.ಜೆ, ಸಾಮುಯಲ್ ಪ್ರೇಮಕುಮಾರ್, ಅಮಿತ್ ನಿಗ್ಲಿ, ಗುಣಶೇಖರನ್, ಚಂದ್ರಮ್ಮ, ಮಾರುತ್ತ ಬಾಲ್ ಸಂಸ್ಥೆಯ ನಿರ್ದೇಶಕರಾದ ಡಾ. ಕೆ.ವಿಜಯಲಕ್ಷ್ಮಿ, ಪ್ರಾಂಶುಪಾಲರಾದ ಡಾ. ಪಿ. ಕ್ಲೆಮೆಂಟ್ ಅಧ್ಯಕ್ಷರಾದ ಎಸ್. ಮೋಹನ್‌ರಾಜ್, ಎಸ್ತರ್‌ರಾಜ್, ಉಪಸ್ಥಿತರಿದ್ದರು.ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

RELATED ARTICLES
- Advertisment -
Google search engine

Most Popular