Saturday, June 14, 2025
Google search engine

Homeರಾಜ್ಯಸುದ್ದಿಜಾಲಹೆಚ್ ಡಿ ಕೋಟೆ: ಪ್ಲಾಸ್ಟಿಕ್, ಗುಟ್ಕಾ ಮತ್ತು ಟೀ ಕಪ್ ಬಳಸುವ ವ್ಯಾಪಾರಸ್ಥರ ಮೇಲೆ ಅಧಿಕಾರಿಗಳಿಂದ...

ಹೆಚ್ ಡಿ ಕೋಟೆ: ಪ್ಲಾಸ್ಟಿಕ್, ಗುಟ್ಕಾ ಮತ್ತು ಟೀ ಕಪ್ ಬಳಸುವ ವ್ಯಾಪಾರಸ್ಥರ ಮೇಲೆ ಅಧಿಕಾರಿಗಳಿಂದ ದಾಳಿ ಪರಿಶೀಲನೆ

ವರದಿ: ಎಡತೊರೆ ಮಹೇಶ್

ಹೆಚ್ ಡಿ ಕೋಟೆ: ಪ್ಲಾಸ್ಟಿಕ್, ಗುಟ್ಕಾ ಪಾನ್ ಪರಗ್, ಪೇಪರ್ ಟೀ ಕಪ್ ಬಳಸುತ್ತಿರುವ ಟೀ ಅಂಗಡಿಗಳು, ಬೇಕರಿಗಳು, ಹೋಟಲ್ ಗಳಿಗೆ ಭೇಟಿ ನೀಡಿ ಇಂದು ಪರಿಶೀಲನೆ ಮಾಡಲಾಯಿತು. ಈ ಕುರಿತು ಹೆಚ್.ಡಿ.ಕೋಟೆ ಪಟ್ಟಣದ ಹೋಟೆಲ್ ಗಳಿಗೆ ಮತ್ತು ಬೀದಿಬದಿ ವ್ಯಾಪಾರಿಗಳ ಮಳಿಗೆಗಳಿಗೆ ತಾಲ್ಲೂಕು ಆಹಾರ ಸುರಕ್ಷತಾ ಧಿಕಾರಿಗಳಾದ ಡಾ”ರವಿಕುಮಾರ್,ಹಾಗೂ ಪುರಸಭೆ ಮುಖ್ಯಾಧಿಕಾರಿ ಸುರೇಶ್, ರವರು ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಂತರ ತಾಲ್ಲೂಕು ಆಹಾರ ಸುರಕ್ಷತಾಧಿಕಾರಿಗಳು ಮಾತನಾಡಿ ರಾಜ್ಯದಂತ‌ ಪ್ಲಾಸ್ಟಿಕ್ ಗಳನ್ನು ನಿಷೇಧ ಮಾಡಲಾಗಿದೆ ಯಾವುದೇ ಆಹಾರ ಪದಾರ್ಥಗಳಿಗೆ ಆಹಾರ ತಯಾರಿಸಲು ಹಾಗೂ ಆಹಾರವನ್ನು, ಪಾರ್ಸೆಲ್ ಕಟ್ಟಿಕೊಡಲು ಪ್ಲಾಸ್ಟಿಕ್ ಗಳನ್ನು ಬಳಸುವಂತಿಲ್ಲ, ಎಲ್ಲಾ ಹೋಟೆಲ್, ಕ್ಯಾಂಟೀನ್ ಮತ್ತು ಬೀದಿಬರಿ ವ್ಯಾಪಾರಿಗಳು, ಸಾರ್ವಜನಿಕರಿಗೆ ಶುದ್ಧವಾದ ಆಹಾರವನ್ನು ನೀಡಬೇಕು, ಆಹಾರವನ್ನು ತಯಾರಿಸಿದ ನಂತರ ಮುಚ್ಚಿಡಬೇಕು ಹಾಗೂ ಅಡುಗೆಮನೆಯನ್ನು ಸ್ವಚ್ಛತೆಯ ವಾಗಿ ಇಟ್ಟುಕೊಳ್ಳಬೇಕು, ಬೇಸಿಗೆ ಕಾಲ ವಾದರಿಂದ ಜನರಿಗೆ ಕುಡಿಯಲು ಕಡ್ಡಾಯವಾಗಿ ಬಿಸಿ. ನೀರನ್ನು ನೀಡಬೇಕೆಂದು ತಿಳಿಸಿದರು ನಂತರ ಇದೇ ಸಂದರ್ಭದಲ್ಲಿ ಹೋಟೆಲ್ ಮತ್ತು ಕ್ಯಾಂಟೀನ್ ,ಬೀದಿಬದಿ ವ್ಯಾಪಾರಿಗಳಿಗೆ ನೋಟಿಸ್ ನೀಡಿ ಇದೇ ಸಂದರ್ಭದಲ್ಲಿ ದೊರೆತ ಪ್ಲಾಸ್ಟಿಕ್, ಟೀ ಕಪ್, ತಂಬಾಕು ಪದಾರ್ಥಗಳ್ನು ವಶಪಡಿಕೊಂಡು, ದಂಡ ವಿಧಿಸಲಾಯಿತು.

ಇದೆ ಸಂರ್ಭದಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳು, ಹೆಚ್ ಡಿ ಕೋಟೆ/ ಸರಗೂರು ತಾಲ್ಲೂಕಿನ ಎಲ್ಲಾ ಟೀ ಅಂಗಡಿ, ಬೇಕರಿ, ಹೋಟಲ್ ಗಳಿಗೆ ಪ್ಲಾಸ್ಟಿಕ್ ಬಳಸಬರದು, ಟೀ ಮತ್ತು ಕಾಫಿ ಬಳಕೆಯಲ್ಲೂ ಸಹ ಪೇಪರ್ ಕಪ್ ಗಳನ್ನು ಬಳಸಬಾರದು, ಬಳಿಸಿದರೆ ಇಂದರಿಂದ ಗ್ರಾಹಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬಿರುತ್ತದೆ ಮತ್ತು ಕ್ಯಾನ್ಸರ್ ನಂತಹ ರೋಗಗಳು ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಮುಂದಿನ ದಿನಗಳಲ್ಲಿ ಬಳಸಿದವರ ಅಂಥವರ ಮೇಲೆ ನೋಟೀಸ್ ನೀಡಿ ದಂಡವಿಧಿಸಲಾಗುವುದು ಮತ್ತು ಎಲ್ಲಾ ಮಾಲೀಕರು ಕಡ್ಡಾಯವಾಗಿ FSSAI ಪರವಾನಿಗೆ ಪಡೆಯಲು ಸೂಚಿಸಿದರು.

ಇದೆ ಸಂಧರ್ಭದಲ್ಲಿ, ಪುರಸಭೆ ಆರೋಗ್ಯ ನಿರೀಕ್ಷಣಾಧಿಕಾರಿ ಹರೀಶ್, ಅರೋಗ್ಯ ಸಿಬ್ಬಂದಿಗಳಾದ ಅರಳಪ್ಪ, ಉಮೇಶ್, ಪ್ರತಾಪ್ ಮತ್ತು ಪುರಸಭೆಯ ಸಿಬ್ಬಂದಿವರ್ಗದವರು , ಸಾರ್ವಜನಿಕರು, ಇನ್ನಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular