ಚಾಮರಾಜನಗರ: ಮಾನವ ಶ್ರೇಷ್ಠ ರೀತಿಯಲ್ಲಿ ಬದುಕಲು ಅಗತ್ಯವಾದ ಎಲ್ಲ ಸರಳ ಶ್ರೇಷ್ಠ ವಿಚಾರಧಾರೆಗಳನ್ನು ನೀಡಿರುವ ಸರ್ವಜ್ಞರ ಕೊಡುಗೆಯನ್ನು ಯಾರು ಮರೆಯಲು ಸಾಧ್ಯವಿಲ್ಲ. ಸರ್ವಜ್ಞರ ಚಿಂತನೆ ಮಾನವ ಬದುಕಿನ ಶ್ರೇಷ್ಠತೆಗೆ ಹಾಗೂ ಜೀವನ ಮೌಲ್ಯಗಳನ್ನು ಪ್ರೀತಿಸುವ ಮೂಲಕ ಸನ್ಮಾರ್ಗದಲ್ಲಿ ನಡೆಯಲು ದಾರಿದೀಪವಾಗಿದೆ ಎಂದು ಸಂಸ್ಕೃತಿ ಚಿಂತಕ ಸುರೇಶ್ ಎನ್ ಋಗ್ವೇದಿ ತಿಳಿಸಿದರು.
ಅವರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ನಡೆದ ಸರ್ವಜ್ಞ ಜಯಂತಿಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಸಾವಿರಕ್ಕೂ ಹೆಚ್ಚು ತ್ರಿಪದಿಗಳನ್ನು ರಚಿಸುವ ಮೂಲಕ ಪ್ರಾಸಬದ್ಧ, ಸರಳತೆಯ ಸಂದೇಶಗಳನ್ನು ನೀಡಿದವರು. ದೇವರು, ಧರ್ಮ ಆಧ್ಯಾತ್ಮ ನೀತಿ ಮೌಲ್ಯಗಳು , ಯೋಗ ತತ್ವ ,ಕಲೆ, ಶಿಕ್ಷಣ ಸಂಗೀತ ಸುಖ ದುಃಖ ಸ್ವರ್ಗ ನರಕ ಸಮಾಜದ ಸಮಾನತೆ ,ಮೌಡ್ಯ ಹಲವಾರು ಕ್ಷೇತ್ರಗಳ ವಿಷಯಗಳನ್ನು ಪರಿಪೂರ್ಣವಾಗಿ ತಿಳಿಸಿದವರು ಸರ್ವಜ್ಞರು ಎಂದರು.

16ನೇ ಶತಮಾನದಲ್ಲಿ ಕನ್ನಡ ಸಾಹಿತ್ಯಕ್ಕೆ ನೀಡಿರುವ ಕೊಡುಗೆಯನ್ನು ಅಧ್ಯಯನ ಮಾಡಬೇಕು. ಅವರ ಭಾಷಾ ಪ್ರಯೋಗ ಅನುಭವ ಚಿಂತನೆ, ಸತ್ಯವನ್ನು ನೇರವಾಗಿ ನುಡಿದ ಮಹಾ ತತ್ವಜ್ಞಾನಿ ಹಾಗೂ ದಾರ್ಶನಿಕರು ಸರ್ವಜ್ಞರು. ಎಲ್ಲವನ್ನು ತಿಳಿಸಿದ ಮಹಾಜ್ಞಾನಿಗಳು ಎಂದು ತಿಳಿಸಿ ಕನ್ನಡ ಸಾಹಿತ್ಯ ಪರಿಷತ್ತಿಗೆ ಹೊಸ ಸದಸ್ಯರಾಗಿ ಹಾಗೂ ತಮ್ಮ ದೂರವಾಣಿ ಸಂಖ್ಯೆಗಳನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿಯಲ್ಲಿ ನೋಂದಾಯಿಸಿ ಕಾರ್ಯಕ್ರಮಗಳ ವಿವರಗಳನ್ನು ಪಡೆಯುವಂತೆ ಎಲ್ಲ ಸದಸ್ಯರಿಗೆ ಋಗ್ವೇದಿ ಮನವಿ ಮಾಡಿದರು.
ಜನಪದ ಗಾಯಕರಾದ ಜೆ ಬಿ ಮಹೇಶ್ ರವರು ಸರ್ವಜ್ಞರು ತ್ರಿಪದಿಗಳನ್ನು ರಚಿಸಿ ಸಮಾಜದ ಅಂಕು ಡೊಂಕುಗಳನ್ನು ಸರಿಪಡಿಸುವ ದಿಕ್ಕಿನಲ್ಲಿ ಜನರಿಗೆ ಮನವರಿಕೆ ಮಾಡಿಕೊಟ್ಟರು . ಸರ್ವಜ್ಞರ ತ್ರಿಪದಿಗಳನ್ನು ವಾಚಿಸಿದರು.
ಕನ್ನಡ ಚಳುವಳಿಯ ಹೋರಾಟಗಾರ ರಾಜಗೋಪಾಲ್ ರವರು ಸರ್ವಜ್ಞರ ಭಾವಚಿತ್ರಕ್ಕೆ ಪುಷ್ಪವನ್ನು ಅರ್ಪಿಸಿ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕಲೆ ನಟರಾಜು, ರವಿಚಂದ್ರಪ್ರಸಾದ್, ಬಿಕೆ ಆರಾಧ್ಯ ಸರಸ್ವತಿ ,ಮೂರ್ತಿ, ಸ್ವಾಮಿ ಇದ್ದರು.