Monday, June 9, 2025
Google search engine

Homeರಾಜಕೀಯಪ್ರಧಾನಿ ಮೋದಿ ಕೊಡುಗೆಗಳನ್ನು ನೋಡಿ ಕಾಂಗ್ರೆಸ್‌ಗೆ ಭಯ ಶುರುವಾಗಿದೆ: ಉಮೇಶ್ ಜಾಧವ್

ಪ್ರಧಾನಿ ಮೋದಿ ಕೊಡುಗೆಗಳನ್ನು ನೋಡಿ ಕಾಂಗ್ರೆಸ್‌ಗೆ ಭಯ ಶುರುವಾಗಿದೆ: ಉಮೇಶ್ ಜಾಧವ್

ಕಲಬರಗಿ: ಬ್ರಿಟಿಷ್ ಕಾನೂನು ಪದ್ಧತಿಯಲ್ಲಿದ್ದ ಐಪಿಸಿ ಕಾನೂನುಗಳ ತಿದ್ದುಪಡಿ ಮಾಡಿ ಭಾರತೀಯ ನ್ಯಾಯ ಸಂಹಿತೆ (ಬಿ.ಎನ್. ಎಸ್)ಜಾರಿ ಮಾಡಿರುವುದರಿಂದ ಬ್ರಿಟಿಷ್ ಗುಲಾಮತನದಿಂದ ಮುಕ್ತಗೊಳಿಸಿ ಭಾರತೀಯ ಸಂಸ್ಕೃತಿಯ ಮಾನಸಿಕತೆ ನಿರ್ಮಾಣ ಮಾಡಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಷಾ ನಿರ್ಧಾರ ಮಾಡಿರುವುದು ಐತಿಹಾಸಿಕ ಕ್ರಮ ಎಂದು ಲೋಕಸಭಾ ಸದಸ್ಯ ಡಾ. ಉಮೇಶ್ ಜಾಧವ್ ಹೇಳಿದರು.

ಕೇಂದ್ರ ಸರ್ಕಾರದಲ್ಲಿ ದಲಿತ ಮುಖಂಡ, ನಿವೃತ್ತ ಐಎಎಸ್ ಅಧಿಕಾರಿ ಅರ್ಜುನ್ ರಾಮ್ ಮೇಘಾವಾಲ್ ಎರಡನೇ ದಲಿತ ಕಾನೂನು ಮಂತ್ರಿಯಾಗಿ ಪ್ರಧಾನಿ ಮತ್ತು ಗೃಹ ಸಚಿವರ ದಕ್ಷಿಣ ನಾಯಕತ್ವದಲ್ಲಿ ಭಾರತೀಯ ನ್ಯಾಯ ಸಮಿತಿ ಜಾರಿಗೆ ತಂದರು ನನ್ನ ಹಿರಿಯ ಸಹೋದರ ಭೀಮ್ ಸಿಂಗ್ ಜಾಧವ್ ನ್ಯಾಯವಾದಿಗಳಾಗಿ ಜನಸೇವೆ ಮಾಡಿದ್ದು ಈಗ ನ್ಯಾಯವಾದಿಗಳ ಬೆಂಬಲ ಮತ್ತು ಆಶೀರ್ವಾದ ನಮ್ಮ ಮೇಲೆ ಇರಲಿ ಎಂದು ಜಾಧವ್ ಮನವಿ ಮಾಡಿದರು.

ಪ್ರಧಾನಿ ಮೋದಿ ಅವರು ೧೦ ವರ್ಷಗಳಲ್ಲಿ ದೇಶದಲ್ಲಿ ಹಾಗೂ ಕಲ್ಬುರ್ಗಿಗೆ ನೀಡಿದ ಕೊಡುಗೆಗಳನ್ನು ನೋಡಿ ಕಾಂಗ್ರೆಸ್ಸಿನಲ್ಲಿ ಮೋದಿ ಭಯ ಶುರುವಾಗಿದೆ ಎಂದರು. ಕಲ್ಬುರ್ಗಿಯಲ್ಲಿ ಹತ್ತು ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಮೆಗಾ ಜವಳಿ ಪಾರ್ಕ್ ಅಸ್ತಿತ್ವಕ್ಕೆ ಬರಲಿದ್ದು ಈ ಯೋಜನೆ ಜಾರಿಯಾಗದಿದ್ದರೆ ರಾಜೀನಾಮೆಗೂ ಸಿದ್ಧ ಎಂದು ಪಟ್ಟು ಹಿಡಿದ ಪರಿಣಾಮವಾಗಿ ಇನ್ನು ಆರು ತಿಂಗಳಲ್ಲಿ ಕೆಲಸ ಪ್ರಾರಂಭವಾಗಲಿದೆ. ೧೪೭೫ ಕೋಟಿ ರುಪಾಯಿ ವೆಚ್ಚದಲ್ಲಿ ಭಾರತ್ ಸಾಗರ್ ಮಾಲಾ ರಸ್ತೆ ೨೦೦ ಕೋಟಿ ರೂಪಾಯಿ ವೆಚ್ಚದಲ್ಲಿ ಅಮೃತ್ ಭಾರತ್ ರೈಲು ನಿಲ್ದಾಣ ಅಭಿವೃದ್ಧಿ ಯೋಜನೆ ಅಡಿ ವಾಡಿ ಶಹಾಬಾದ್ ಕಲಬುರ್ಗಿ ಹಾಗೂ ಸ್ಟೇಷನ್ ಗಾಣಗಾಪುರ ರೈಲು ನಿಲ್ದಾಣಗಳು ವಿಮಾನ ನಿಲ್ದಾಣ ಮಾದರಿಯಲ್ಲಿ ಅಭಿವೃದ್ಧಿಗೆ ಚಾಲನೆ ದೊರೆತಿದೆ. ಈ ಎಲ್ಲಾ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಕಾಂಗ್ರೆಸ್ಸಿಗೆ ಮೋದಿ ಭಯ ಈಗಲೇ ಪ್ರಾರಂಭವಾಗಿದೆ ಎಂದು ಹೇಳಿದರು.

RELATED ARTICLES
- Advertisment -
Google search engine

Most Popular