Saturday, June 28, 2025
Google search engine

Homeಕಾಡು-ಮೇಡುಮಲೆಮಹದೇಶ್ವರ ವನ್ಯಧಾಮದಲ್ಲಿ ಐದು ಹುಲಿಗಳ ಸಾವಿಗೆ ವಿಷಪ್ರಾಶನವೇ ಕಾರಣ: ಇಬ್ಬರ ಬಂಧನ

ಮಲೆಮಹದೇಶ್ವರ ವನ್ಯಧಾಮದಲ್ಲಿ ಐದು ಹುಲಿಗಳ ಸಾವಿಗೆ ವಿಷಪ್ರಾಶನವೇ ಕಾರಣ: ಇಬ್ಬರ ಬಂಧನ

ಚಾಮರಾಜನಗರ: ಚಾಮರಾಜನಗರದ ಮಲೆಮಹದೇಶ್ವರ ವನ್ಯಧಾಮದಲ್ಲಿ ಐದು ಹುಲಿಗಳ ಸಾವಿಗೆ ಕಾರಣವಾಗಿರುವ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮಾದ ಅಲಿಯಾಸ್ ಮಾದುರಾಜು ಮತ್ತು ನಾಗರಾಜ್ ಬಂಧಿತರು.

ಮಾದುರಾಜುಗೆ ಸೇರಿದ ಹಸು ಒಂದು ಹುಲಿಗೆ ಬಲಿಯಾಗಿ ಸಾವನ್ನಪ್ಪಿತ್ತು. ತನ್ನ ನೋವನ್ನು ನಾಗರಾಜ್ ಬಳಿ ಹಂಚಿಕೊಂಡು ಇಬ್ಬರೂ ಹಿಂದೇಟು ಹೂಡಿದ್ದರು. ಕ್ರಿಮಿನಾಶಕ ಬಳಸಿ ಹುಲಿಗಳನ್ನು ಕೊಲ್ಲಲು ಯೋಜನೆ ರೂಪಿಸಿದರು. ನಾಗರಾಜ್, ಹಸುಗೆ ವಿಷ ಹಾಕಿ ಬಿಟ್ಟಿದ್ದು, ಹುಲಿ ಮರಿಗಳು ವಿಷಪೂರಿತ ಮಾಂಸ ಸೇವಿಸಿ ಸತ್ತಿವೆ. ವಿಚಾರಣೆ ವೇಳೆ ಆರೋಪಿಗಳು ತಪ್ಪು ಒಪ್ಪಿಕೊಳ್ಳುತ್ತಿದ್ದಾರೆ. ಅವರು ಮಾಡಿದ ಕೃತ್ಯದಿಂದ ವನ್ಯಜೀವಿ ಸಂರಕ್ಷಣೆಗೆ ದೊಡ್ಡ ಹಾನಿಯಾಗಿದೆ.

RELATED ARTICLES
- Advertisment -
Google search engine

Most Popular