ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ತಾಯಿಯ ಮಡಿಲಲ್ಲಿ ಕಲಿತ ಶಿಕ್ಷಣ ಮಕ್ಕಳ ಬದುಕಿನಲ್ಲಿ ಧೀರ್ಘಕಾಲ ಉಳಿಯುತ್ತದೆ ಎಂದು ಕುಪ್ಪಹಳ್ಳಿ ಕ್ಲಸ್ಟರ್ ನ ಸಂಪನ್ಮೂಲ ವ್ಯಕ್ತಿ ಎಸ್.ವಸಂತಕುಮಾರ ತಿಳಿಸಿದರು. ಸಾಲಿಗ್ರಾಮ ತಾಲ್ಲೂಕಿನ ಕುಪ್ಪಹಳ್ಳಿ ಕ್ಲಸ್ಟರ್ ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಪ್ಪಹಳ್ಳಿ ಶಾಲೆಯಲ್ಲಿ ಆಯೋಜಿಸಿದ
ಒಂದನೇ ತರಗತಿಯ ಮಕ್ಕಳಿಗೆ “ಅಕ್ಕಿಯ ಮೇಲೆ ಅಕ್ಷರ ಅಭ್ಯಾಸ ಮತ್ತು ಸ್ವಾಗತ” ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿದರು.
ಕಳೆದ ಮಾರ್ಚಿ ಮತ್ತು ಏಪ್ರಿಲ್ ತಿಂಗಳಲ್ಲಿ ನೆಡೆಸಿದ ಶಾಲಾ ಮಕ್ಕಳ ದಾಖಲಾತಿ ಆಂದೋಲನ ಮತ್ತು ಶಾಲಾ ಶಿಕ್ಷಕರ ಮನೆ ಭೇಟಿ ಕಾರ್ಯಕ್ರಮ ಮತ್ತು ಇಲಾಖೆಯ ನಿರಂತರ ಪರಿಶ್ರಮದ ಫಲವಾಗಿ ಕುಪ್ಪಹಳ್ಳಿ ಸರ್ಕಾರಿ ಶಾಲೆಯಲ್ಲಿ ಕಳೆದ ಬಾರಿಗಿಂತ ಈ ವರ್ಷ ಹೆಚ್ಚು ಮಕ್ಕಳು ಸರ್ಕಾರಿ ಶಾಲೆಗೆ ದಾಖಲಾಗಿವೆ ಎಂದು ತಿಳಿಸಿದರು
ನೂತನವಾಗಿ ಒಂದನೇ ತರಗತಿಗೆ ದಾಖಲಾದ ಮಕ್ಕಳಿಗೆ “ಅಕ್ಕಿಯ ಮೇಲೆ ಅಕ್ಷರ ಅಭ್ಯಾಸ” ಎಂಬ ಪವಿತ್ರವಾದ ನೂತನ ಕಾರ್ಯಕ್ರಮವನ್ನು ಆಯೋಜಿಸಿ ವಿದ್ಯಾದೇವಿ ತಾಯಿ ಶಾರದಾಂಭೆಯ ಪೂಜೆಯೊಂದಿಗೆ,
ಒಂದನೇ ತರಗತಿ ಮಕ್ಕಳನ್ನು ತಾಯಿಯ ಮಡಿಲಲ್ಲಿ ಕೂರಿಸಿ, ಅಕ್ಕಿಯ ಮೇಲೆ ಅ.A.1 ಎಂದು ಮೂರು ಬಾರಿ ಅಕ್ಷರ ಅಭ್ಯಾಸ ಮಾಡಿಸಿ,ಮಕ್ಕಳನ್ನು ಶಾಲೆಗೆ ಅಧಿಕೃತವಾಗಿ ಸ್ವಾಗತಿಸಲಾಯಿತು.
ಕಾರ್ಯಕ್ರಮದಲ್ಲಿ ಒಂದನೇ ತರಗತಿಯ ಮಕ್ಕಳ ತಾಯಂದಿರಾದಪುಟ್ಟಗೌರಿ, ಅಶ್ವಿನಿ,
ವೀಣಾ, ಸವಿತ, ಪಲ್ಲವಿ, ಸುನೀತಾ, ಶೋಭಾ, ಕಾವ್ಯ, ಶಾಲೆಯ ಎಸ್.ಡಿ.ಎಂ.ಸಿ.ಅಧ್ಯಕ್ಷ ಪ್ರಕಾಶ್, ಶಾಲೆಯ ಪ್ರಭಾರೆ ಮುಖ್ಯ ಶಿಕ್ಷಕರಾದ ವಿ.ಎಸ್ ಹೇಮಂತಕುಮಾರ, ಪಲ್ಲವಿ, ನಂದಿನಿ, ಪ್ರದೀಪ್ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.