Sunday, June 8, 2025
Google search engine

Homeರಾಜಕೀಯಪ್ರಧಾನಿ ಮೊಮ್ಮಗ ಆಗಿದ್ದರು ತಪ್ಪು ಮಾಡಿದವರಿಗೆ ಶಿಕ್ಷೆಯಾಗಲೇಬೇಕು: ಸಿ ಎಸ್ ಪುಟ್ಟರಾಜು

ಪ್ರಧಾನಿ ಮೊಮ್ಮಗ ಆಗಿದ್ದರು ತಪ್ಪು ಮಾಡಿದವರಿಗೆ ಶಿಕ್ಷೆಯಾಗಲೇಬೇಕು: ಸಿ ಎಸ್ ಪುಟ್ಟರಾಜು

ಮಂಡ್ಯ: ಕಾನೂನಿನ ಚೌಕಟ್ಟಿನಲ್ಲಿ ಪ್ರಧಾನಿ ಮೊಮ್ಮಗ ಆಗಿದ್ದರು ತಪ್ಪು ಮಾಡಿದವರಿಗೆ ಶಿಕ್ಷೆಯಾಗಲೇ ಬೇಕು  ಎಂದು ಮಾಜಿ ಸಚಿವ ಸಿ ಎಸ್ ಪುಟ್ಟರಾಜು ಹೇಳಿದ್ದಾರೆ.

ಹಾಸನ ಪ್ರಜ್ವಲ್ ರೇವಣ್ಣರವರ ಪೆನ್ ಡ್ರೈವ್ ವಿಚಾರವಾಗಿ ಮಂಡ್ಯದಲ್ಲಿ  ಮಾತನಾಡಿದ ಅವರು, ಪ್ರಕರಣವನ್ನು ರಾಜ್ಯ ಸರ್ಕಾರ SIT ತನಿಖಾ ಸಂಸ್ಥೆಗೆ ನೀಡ್ದಿದಾರೆ. ಸತ್ಯ ಸತ್ಯತೆ ಶೀಘ್ರದಲ್ಲೇ ಹೊರ ಬೀಳಲಿದೆ. ನಮ್ಮ ಪಕ್ಷ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಡ್ಡಿ ಪಡಿಸುವುದಿಲ್ಲ.  ಎಸ್ ಐ ಟಿ ತನಿಖಾ ಸಂಸ್ಥೆಗೆ ಸಹಕಾರ ನೀಡುತ್ತೇವೆ ಎಂದರು.

ಅದರಂತೆ ಪ್ರಜ್ವಲ್ ರೇವಣ್ಣ ಅವರಿಗೆ ಪಕ್ಷದ ವತಿಯಿಂದ ಶಿಸ್ತಿನ ಕ್ರಮ ತೆಗೆದುಕೊಂಡಿದ್ದಾರೆ. ಯಾರು ತಪ್ಪು ಮಾಡಿದರು ತಪ್ಪೆ. ಪೆನ್ ಡ್ರೈವ್ ಗಳನ್ನು ಬೀದಿಯಲ್ಲಿ ಎಸದಿರುವುದು ತಪ್ಪೆ. SIT ಅವರು ಎಲ್ಲಾ ವಿಚಾರದಲ್ಲಿ ಕೂಲಂಕುಷವಾಗಿ ತನಿಖೆ ನಡೆಸಬೇಕು. ಮರ್ಯಾದಸ್ಥ ಮನೆಯ ಹೆಣ್ಣುಮಕ್ಕಳನ್ನ ಬೀದಿಗೆ ತಂದಿರುವುದು ತಪ್ಪು ಮೊದಲು ಅವರಿಗೆ ಶಿಕ್ಷೆಯಾಗಬೇಕು. ಯಾರೇ ಇರಲಿ ನ್ಯಾಯಯುತವಾಗಿ ತನಿಖೆಗೆ ಒತ್ತಾಯ ಮಾಡ್ತೇವೆ ಎಂದು ಹೇಳಿದರು.

ಡಿ ಕೆ ಶಿವಕುಮಾರ್ ಕಾರಣ ಅಂತ ಹೇಳಿದ್ದಾರೆ ಅವರೇ ಮಾಡ್ಸಿದ್ದಾರೆ ಅನ್ನೋ ಆರೋಪ ಇದೆ. ಇದು ನ್ಯಾಯಯುತವಾಗಿ ತನಿಖೆಯಾಗಲಿ ಯಾರೇ ಕೈವಾಡ ಇದ್ರು ಹೊರ ಬರುತ್ತದೆ. ದೇವೇಗೌಡ್ರು, ಕುಮಾರಣ್ಣ ಇರುವ ಪಕ್ಷ ಇದೇ ವಿಚಾರವಾಗಿ ಕೋರ್ ಕಮಿಟಿ ಸಭೆ ನಡೆದಿದೆ. ಎಲ್ಲಾ ತೀರ್ಮಾನವನ್ನು ನಮ್ಮ ಪಕ್ಷ ತೆಗೆದುಕೊಳ್ಳುತ್ತದೆ. ಇಂತವೆಲ್ಲವನ್ನು ದೇವೇಗೌಡ್ರು ಕುಟುಂಬ ನೋಡ್ಕೊಂಡು ಬಂದಿದೆ. ದೇವೇಗೌಡ್ರು ಇತಿಹಾಸ ಎಲ್ಲಾ ಪಕ್ಷದವರು ಅವರ ಗರಡಿಯಲ್ಲಿ ಕಲಿತು ಹೊರ ಬಂದಿದ್ದಾರೆ. ಸಿದ್ದರಾಮಯ್ಯ ಆದಿಯಾಗಿ ಮಹಾನ್ ನಾಯಕರು ಇದ್ದಾರೆ ಅವರೆಲ್ಲ ದೇವೇಗೌಡ್ರು ಕೈ ಕೆಳಗೆ ಕಲಿತು ಬಂದವರು. ದೇವೇಗೌಡ್ರು ನಡವಳಿಕೆ ಅವರಿಗೆ ಚೆನ್ನಾಗಿ ಗೊತ್ತಿದೆ ಅವರು ಹೇಳಿದ್ರೆ ಸಾಕು. ನಮ್ಮ ಮಕ್ಕಳು, ಮೊಮ್ಮಕ್ಕಳು ಮಾಡಿದ್ದನ್ನ ಈ ಟೆಕ್ನಾಲಜಿಯಲ್ಲಿ ನಾವು ಹೊಣೆ ಆಗೋಕಾಗುತ್ತಾ? ನಮ್ಮ ಮೊಮ್ಮಕ್ಕಳು ಇದ್ದಾರೆ ತಪ್ಪು ಮಾಡಿದ್ರೆ ಕಾನೂನಿನ ಚೌಕಟ್ಟಿನಲ್ಲಿ ಪ್ರಧಾನಿ ಮೊಮ್ಮಗ ಆಗಿದ್ದರು ತಪ್ಪು ಮಾಡಿದವರಿಗೆ ಶಿಕ್ಷೆಯಾಗಲೇ ಬೇಕು ಎಂದರು.

ಸಾವಿರಾರು ಹೆಣ್ಣು ಮಕ್ಕಳ ವಿಡಿಯೋ ಹರಿ ಬಿಟ್ಟವರಿಗೂ ಸೂಕ್ತ ತನಿಖೆ ನಡೆಸಿ ಕಾನೂನು ರೀತಿ ಕ್ರಮ ಜರುಗಿಸಿ. ಚುನಾವಣೆ ದೃಷ್ಟಿಯಿಂದ ಈ ರೀತಿಯ ಕೃತ್ಯ ಮಾಡಿದ್ದಾರೆ. ಇದು ಏನು ಚುನಾವಣೆಗೆ ವರ್ಕೌಟ್ ಆಗಿಲ್ಲ. ಜನರು ಅರ್ಥಮಾಡಿಕೊಂಡು ಆಶೀರ್ವಾದ ಮಾಡಿದ್ದಾರೆ ಎಂದು ತಿಳಿಸಿದರು.

RELATED ARTICLES
- Advertisment -
Google search engine

Most Popular