ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಸೆಕ್ಷನ್ ಸೆವೆಂಟೀನ್ ಅಧಿಕಾರಿಗಳ ತಂಡ ಅನಿರೀಕ್ಷಿತವಾಗಿ ದಾಳಿ ನಡೆಸಿ ಕೆ.ಆರ್.ನಗರದ ಮೀನಾಕ್ಷಿ ಬ್ಲಾಕಿನ ಶ್ರೀ ಕಾಳಿಕಾಂಬ ವುಡ್ ವರ್ಕ್ಸ್ ನಲ್ಲಿ ಮರಗೆಲಸ ಮಾಡುತ್ತಿದ್ದ ಒಂಬತ್ತನೇ ತರಗತಿಯ ೧೫ ವರ್ಷದ ಬಾಲಕಾರ್ಮಿಕರನ್ನು ರಕ್ಷಣೆ ಮಾಡುವ ಜೊತೆಗೆ ಮೈಸೂರಿನ ಬಾಲಕರ ಬಾಲ ಮಂದಿರಕ್ಕೆ ಕಳಿಸಿ ದೂರನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಕೆ.ಆರ್.ನಗರ ಪಟ್ಟಣದ ಮೀನಾಕ್ಷಿ ಬ್ಲಾಕಿನ ಶ್ರೀ ಕಾಳಿಕಾಂಬ ವುಡ್ ವರ್ಕ್ಸ್ ಗೆ ತಹಸಿಲ್ದಾರ್ ಪೂರ್ಣಿಮಾ ರವರ ಅನುಮತಿಯೊಂದಿಗೆ ಕಾರ್ಮಿಕ ಇಲಾಖೆಯ ಕಾರ್ಮಿಕ ನಿರೀಕ್ಷಕರಾದ ಗೋವಿಂದರಾಜ್ ಮೈಸೂರ್ ಬಾಲಕಾರ್ಮಿಕರ ಯೋಜನಾ ನಿರ್ದೇಶಕರಾದ ಮಲ್ಲಿಕಾರ್ಜುನ್ ನೇತೃತ್ವದಲ್ಲಿ ದಾಳಿ ನಡೆಸಿದ ತಂಡ ಬಾಲಕನನ್ನು ರಕ್ಷಿಸುವ ಜೊತೆಗೆ ಬಾಲಕಾರ್ಮಿಕನನ್ನು ಕೆಲಸಕ್ಕೆ ಸೇರಿಸಿಕೊಂಡ ಇಬ್ಬರ ವಿರುದ್ಧ ದೂರನ್ನು ದಾಖಲಿಸಲಾಗಿದೆ. ಬಾಲಕಾರ್ಮಿಕ ಕೆ ಎಂ ಗಗನ್ ಎಂಬುವರಾಗಿದ್ದು ಈತ ತಂದೆ ತಾಯಿಯಿಂದ ದೂರವಿದ್ದು ತನ್ನ ಅಜ್ಜಿ ಅನ್ನಪೂರ್ಣ ಆಶ್ರಯದಲ್ಲಿದ್ದು ಪಟ್ಟಣದ ಬಾಲಕರ ಪ್ರೌಢಶಾಲೆಯಲ್ಲಿ ೯ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿರುವ ಬಾಲಕ ಪಟ್ಟಣದಲ್ಲಿಯೇ ವಾಸವಾಗಿದ್ದಾನೆ ಎಂದು ತಿಳಿದುಬಂದಿದೆ.
ರಕ್ಷಣೆ ಮಾಡಿದ ಬಾಲಕಾರ್ಮಿಕನನ್ನು ಮೈಸೂರಿನ ಇಎಸ್ಐ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಿ ಮೈಸೂರಿನ ವಿಜಯನಗರ ಬಾಲಕರ ಬಾಲ ಮಂದಿರಕ್ಕೆ ಬಿಡಲಾಗಿದೆ ಎಂದು ತಿಳಿಸಿದ ಕಾರ್ಮಿಕ ಇಲಾಖೆಯ ಕಾರ್ಮಿಕ ನಿರೀಕ್ಷಕರಾದ ಗೋವಿಂದರಾಜು ಕೆ ಆರ್ ನಗರ ಮತ್ತು ಸಾಲಿಗ್ರಾಮ ತಾಲೂಕುಗಳಲ್ಲಿ ಯಾವುದೇ ಮಾಹಿತಿ ನೀಡದೆ ಸೆಕ್ಷನ್ ಸೆವೆಂಟೀನ್ ಅಧಿಕಾರಿಗಳ ತಂಡ ಯಾವುದೇ ಸಂದರ್ಭದಲ್ಲಿ ಅನಿರೀಕ್ಷಿತ ಬೇಟೆ ನೀಡಲಾಗುತ್ತದೆ ಆದ್ದರಿಂದ ಯಾವುದೇ ಉದ್ಯಮ ಹೋಟೆಲ್ ಅಂಗಡಿ ಸೇರಿದಂತೆ ಇನ್ನಿತರ ಕಡೆಗಳಲ್ಲಿ ೧೮ ವರ್ಷಕ್ಕಿಂತ ಕೆಳಗಿನ ಬಾಲಕರನ್ನು ಕೆಲಸಕ್ಕೆ ಸೇರಿಸಿಕೊಂಡರೆ ಅಪರಾಧ ಅಂತಹ ಕೆಲಸವನ್ನು ಮಾಡಬೇಡಿ ಎಂದು ಮನವಿ ಮಾಡಿದರು.
ಓದುವ ಸಮಯದಲ್ಲಿ ಯಾವುದೋ ಒತ್ತಡಕ್ಕೆ ಮಣಿದು ಅಥವಾ ಹಣದ ಆಸೆಗಾಗಿ ಬಾಲಕರು ಉದ್ಯೋಗ ಹುಡುಕುತ್ತಾರೆ ಅಂತ ಸಮಯದಲ್ಲಿ ಬಂದ ಬಾಲಕರಿಗೆ ಬುದ್ಧಿ ಹೇಳುವ ಜೊತೆಗೆ ಅವರ ಪೋಷಕರಿಗೆ ತಿಳಿಹೇಳಿ ಇಲ್ಲದಿದ್ದರೆ ಕಾರ್ಮಿಕ ಇಲಾಖೆಯ ಗಮನಕ್ಕೆ ತನ್ನಿ ಎಂದು ಮನವಿ ಮಾಡಿದರು. ಬಾಲಕಾರ್ಮಿಕನನ್ನು ರಕ್ಷಣೆ ಮಾಡುತ್ತಿದ್ದ ವೇಳೆ ಅಧಿಕಾರಿಗಳ ಮೇಲೆ ಮುಗಿಬಿದ್ದ ಸಾರ್ವಜನಿಕರು ಯಾವುದೇ ಕಾರಣಕ್ಕೂ ಬಾಲಕನನ್ನು ರಕ್ಷಿಸಲು ಬಿಡುವುದಿಲ್ಲ ಅವನು ಇಲ್ಲಿ ಕೆಲಸವನ್ನೇ ಮಾಡುತ್ತಿಲ್ಲ ಎಂದು ತಡೆ ಒಡ್ಡಲು ಮುಂದಾದರು ಅದಕ್ಕೆ ಸಮಂಜಸ ನೀಡಿದ ಅಧಿಕಾರಿಗಳ ತಂಡ ಕಾನೂನು ರೀತಿ ಹಾಗೂ ಮೇಲಧಿಕಾರಿಗಳ ಆದೇಶದ ಮೇರೆಗೆ ದಾಳಿ ನಡೆಸಲಾಗಿದೆ ತನಿಖೆ ನಡೆಸಿ ಬಾಲಕನನ್ನು ಬಿಡಲಾಗುವುದು ಎಂದು ಸಮಂಜಸ ನೀಡಿ ಬಾಲಕಾರ್ಮಿಕರ ಜೊತೆ ಜಾಗ ಖಾಲಿ ಮಾಡಿದರು.
ದಾಳಿ ವೇಳೆ ಬಿಸಿಎಂ ಇಲಾಖೆಯ ಮಹೇಶ್ ಪುರಸಭಾ ಇಂಜಿನಿಯರ್ ಆದ ರಾಜೇಂದ್ರ ಪೊಲೀಸ್ ಪೇದೆ ಹರೀಶ್ ಕಾರ್ಮಿಕ ಇಲಾಖೆಯ ಚಂದ್ರಕಾಂತ್ ಸೇರಿದಂತೆ ಇನ್ನಿತರರು ಹಾಜರಿದ್ದರು.