Friday, June 27, 2025
Google search engine

Homeಸ್ಥಳೀಯದಾನದ ಮಹತ್ವ ತಿಳಿಸುವ ರಂಜಾನ್ ಹಬ್ಬ: ಮೂಳೆ ತಜ್ಞ ಡಾ.ಮೆಹಬೂಬ್‌ಖಾನ್

ದಾನದ ಮಹತ್ವ ತಿಳಿಸುವ ರಂಜಾನ್ ಹಬ್ಬ: ಮೂಳೆ ತಜ್ಞ ಡಾ.ಮೆಹಬೂಬ್‌ಖಾನ್

ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ರಂಜಾನ್ ಹಬ್ಬದ ಸಮಯದಲ್ಲಿ ಮುಸ್ಲಿಂ ಭಾಂದವರು ಕಠಿಣ ಉಪವಾಸ ಮಾಡುವುದರ ಜತೆಗೆ ತಮ್ಮ ಸಂಪಾಧನೆಯ ಅಲ್ಪ ಭಾಗವನ್ನು ಬಡವರಿಗೆ ದಾನ ಮಾಡಬೇಕು ಎಂದು ಖ್ಯಾತ ಮೂಳೆ ತಜ್ಞ ಡಾ.ಮೆಹಬೂಬ್‌ಖಾನ್ ಹೇಳಿದರು.

ಕೆ.ಆರ್.ನಗರ ಪಟ್ಟಣದ ಮುಸ್ಲಿಂದ ಬಡಾವಣೆಯಲ್ಲಿ ರಂಜಾನ್ ಅಂಗವಾಗಿ ಮುಸ್ಲಿಂ ಬಾಂದವರಿಗೆ ವೈಯುಕ್ತಿಕವಾಗಿ ಆಹಾರ ಪದಾರ್ಥಗಳನ್ನು ವಿತರಿಸಿ ಮಾತನಾಡಿದ ಅವರು ಇಂತಹ ಉತ್ತಮ ಕೆಲಸ ಮಾಡುವುದರಿಂದ ಬದುಕು ಸಾರ್ಥಕವಾಗಲಿದೆ ಎಂದರು. ನಾನು ಕಳೆದ ೪೦ ವರ್ಷಗಳಿಂದ ಈ ಕೆಲಸ ಮಾಡುತ್ತಿದ್ದು ಇದನ್ನು ನಿರಂತರವಾಗಿ ಮಾಡುವುದರ ಜತೆಗೆ ಭವಿಷ್ಯದಲ್ಲಿ ನನ್ನ ಮಕ್ಕಳು ನಿರಂತರವಾಗಿ ಮುಂದುವರಿಸಿಕೊಂಡು ಹೋಗುವಂತೆ ಹೇಳುತ್ತೇನೆಂದ ಅವರು ಉಳ್ಳವರು ಬಡವರ ನೆರವಿಗೆ ದಾವಿಸುವುದು ಅತ್ಯಂತ ಪುಣ್ಯದ ಕಾರ್ಯವೆಂದು ತಿಳಿಸಿದರು.
ಈ ಸಂದರ್ಭದಲ್ಲಿ ೫೦೦ ಮಂದಿ ಮುಸ್ಲಿಂ ಭಾಂದವರಿಗೆ ಅಕ್ಕಿ ಸೇರಿದಂತೆ ಇತರ ಆಹಾರ ಪದಾರ್ಥಗಳನ್ನು ಉಚಿತವಾಗಿ ವಿತರಣೆ ಮಾಡಿದ ಅವರು ಸರ್ವರಿಗೂ ರಂಜಾನ್ ಹಬ್ಬದ ಶುಭಾಶಯ ಕೋರಿದರು.

ಪುರಸಭೆ ಮಾಜಿ ಸದಸ್ಯ ಅಸ್ಲಾಂ, ಮುಸ್ಲಿಂ ಮುಖಂಡರಾದ ವಸೀಂ, ಏಜಾಸ್, ಶಕೀರ್, ಸನಾ, ಎಂಜಾಸ್, ಇಸ್ಮಾಯಿಲ್ ಮತ್ತಿತರರು ಇದ್ದರು.

ನಾನು ಯಾರ ಪರವು ಚುನಾವಣಾ ಪ್ರಚಾರ ಮಾಡುವುದಿಲ್ಲ: ಏ.೨೬ ರಂದು ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ನಾನು ಯಾರ ಪರವು ಚುನಾವಣಾ ಪ್ರಚಾರ ಮಾಡುವುದಿಲ್ಲಾ ಮತ್ತು ಬೆಂಬಲವನ್ನು ನೀಡುವುದಿಲ್ಲಾ ಎಂದು ಸಮಾಜ ಸೇವಕರು ಆದ ಖ್ಯಾತ ಮೂಳೆ ತಜ್ಞ ಡಾ.ಮೆಹಬೂಬ್‌ಖಾನ್ ತಿಳಿಸಿದರು.

ಕೆ.ಆರ್.ನಗರ ಪಟ್ಣಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾನು ಸುಮಾರು ಮೂರು ದಶಕಗಳ ಕಾಲ ಕಾಂಗ್ರೆಸ್ ಕಟ್ಟಾಳಾಗಿ ಕೆಲಸ ಮಾಡಿದ್ದು ಆನಂತರ ನಮ್ಮ ನಾಯಕರಾದ ಹೆಚ್.ವಿಶ್ವನಾಥ್ ಅವರ ಜತೆ ಜೆಡಿಎಸ್ ಸೇರಿದೆ ಆದರೆ ನನಗೆ ಯಾವ ಪಕ್ಷಗಳಿಂದಲೂ ಉತ್ತಮ ರಾಜಕೀಯ ಸ್ಥಾನ ಮಾನ ದೊರೆತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಸ್ತುತ ಎಲ್ಲಾ ಪಕ್ಷಗಳಲ್ಲಿಯೂ ಜಾತಿ ಮತ್ತು ಪಕ್ಷ ರಾಜಕಾರಣ ನಡೆಯುತ್ತಿದ್ದು ಪ್ರಾಮಾಣಿಕರಿಗೆ ಬೆಲೆ ಇಲ್ಲವಾಗಿದ್ದು ಇದಕ್ಕಾಗಿ ನಾನು ಯಾರನ್ನು ದೂರುವುದಿಲ್ಲ ಎಂದರಲ್ಲದೆ ನನ್ನ ವೈಯುಕ್ತಿಕ ಕೆಲಸ ನೋಡಿಕೊಂಡು ರಾಜಕೀಯದಿಂದ ದೂರವಿದ್ದು ನೆಮ್ಮದಿಯಾಗಿರುತ್ತೇನೆಂದು ಪ್ರಕಟಿಸಿದರು.

ಪ್ರಾಮಾಣಿಕ ರಾಜಕಾರಣ ಮಾಡುವವರಿಗೆ ಅಧಿಕಾರ ಮತ್ತು ಗೌರವ ಸಿಗುವುದಾಗಿದ್ದರೆ ಇಂದು ಎನ್.ಆರ್.ಕ್ಷೇತ್ರದ ಶಾಸಕರಾಗಿರುವ ತನ್ವೀರ್ ಸೇಠ್ ಅವರು ಮಂತ್ರಿಯಾಗಿರಬೇಕಿತ್ತು ಆದರೆ ಈಗ ಏನಾಗುತ್ತಿದೆ ಎಂದು ಪ್ರಶ್ನಿಸಿದ ಅವರು ಅಂತಹವರಿಗೆ ಬೆಲೆ ಇಲ್ಲವಾದ ಮೇಲೆ ನಮ್ಮನ್ನು ಕೇಳುವವರು ಯಾರು ಎಂದು ಮಾರ್ಮಿಕವಾಗಿ ನುಡಿದರು.

RELATED ARTICLES
- Advertisment -
Google search engine

Most Popular