ಮಂಗಳೂರು (ದಕ್ಷಿಣ ಕನ್ನಡ) : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿನ್ನೆಯೂ ಮಳೆಯಾಗಿತ್ತು. ಇಂದು & ನಾಳೆ ಎರಡು ದಿನಗಳ ಕಾಲ ಹವಾಮಾನ ಇಲಾಖೆಯು ರೆಡ್ ಅಲರ್ಟ್ ಘೋಷಿಸಿದೆ.
ಶುಕ್ರವಾರ ಮುಂಜಾನೆಯಿಂದಲೇ ಉತ್ತಮ ಮಳೆಯಾಗಿತ್ತು. ಹಗಲಿಡೀ ಮೋಡ ಕವಿದ ವಾತಾವರಣದ ನಡುವೆ ಮಳೆ ಸುರಿದಿದೆ. ಅಪರಾಹ್ನದ ವೇಳೆ ಕೆಲಕಾಲ ಬಿಸಿಲು ಕಾಣಿಸಿತ್ತು. ಇನ್ನು ಜಿಲ್ಲೆಯಲ್ಲಿ 4 ಮನೆಗಳಿಗೆ ಭಾಗಶಃ ಮತ್ತು 40 ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ಶನಿವಾರ ಮುಂಜಾನೆಯಿಂದಲೇ ಬಿರುಸಿನ ಮಳೆ ಸುರಿಯಿತು.