ಬೆಂಗಳೂರು: ಖ್ಯಾತ ಜ್ಯೋತಿಷಿ ಡಾ. ಸುರೇಂದ್ರ ಕುಮಾರ್ ಜೈನ್ ಶುಕ್ರವಾರ ಸಂಜೆ ಶ್ವಾಸಕೋಶದ ತೊಂದರೆಯಿಂದ ಇಹಲೋಕ ತ್ಯಜಿಸಿದ್ದಾರೆ.
೬೭ ವರ್ಷ ವಯಸ್ಸಿನ ಜೋತಿಷ್ಯ ತಜ್ಞರನ್ನು ಮಾರ್ಚ್ ೧೮ ರಂದು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಏಪ್ರಿಲ್ ಎರಡನೇ ವಾರದಲ್ಲಿ ಮೊದಲು ಡಿಸ್ಚಾರ್ಜ್ ಆಗಿದ್ದರು. ಆದಾಗ್ಯೂ, ನಾಲ್ಕು ದಿನಗಳ ಹಿಂದೆ ಮತ್ತೆ ಅಸ್ವಸ್ಥರಾದ ನಂತರ ಅವರನ್ನು ಮಹಾವೀರ್ ಜೈನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಾಜಕಾರಣಿಗಳಿಂದ ನಟರವರೆಗಿನ ಅವರ ಭವಿಷ್ಯವಾಣಿಗಳಿಗೆ ಅಪಾರ ಅನುಯಾಯಿಗಳಿದ್ದಾರೆ. ಅವರೊಂದಿಗೆ ಸಂಪರ್ಕದಲ್ಲಿರುವ ಪ್ರತಿಯೊಬ್ಬರೂ ಜೈನ್ ಅವರೊಂದಿಗೆ ವೈಯಕ್ತಿಕ ಬಾಂಧವ್ಯ ಹೊಂದಿದ್ದರು. ಮಾಜಿ ಪ್ರಧಾನಿ ಎಚ್ಡಿ ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ಎಸ್ಎಂ ಕೃಷ್ಣ, ಬಿಎಸ್ ಯಡಿಯೂರಪ್ಪ ಮತ್ತು ಎನ್ ಧರಂ ಸಿಂಗ್, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಧರ್ಮಸ್ಥಳದ ವೀರೇಂದ್ರ ಹೆಗಡೆ ಎಲ್ಲರೂ ಅವರ ಭವಿಷ್ಯವನ್ನು ನಿಖರವಾಗಿ ಪರಿಗಣಿಸಿರುವಂತಹವರು.
ಜೈನ್ ಅವರು ತಮ್ಮ ಕೆಲಸದ ಮೂಲಕ ಅನೇಕರ ಜೀವನವನ್ನು ರೂಪಿಸಿದ್ದಾರೆ. ಸಕಾರಾತ್ಮಕತೆಯನ್ನು ಹರಡಿದ್ದು, ಅವರ ಸಂಪರ್ಕಕ್ಕೆ ಬಂದವರಿಗೆ ನೆರವಾಗಿದ್ದಾರೆ. ಅವರೊಂದಿಗೆ ಇದ್ದವರು ಅವರನ್ನು “ಮಾರ್ಗದರ್ಶಕ ಶಕ್ತಿ” ಮತ್ತು “ಎಲ್ಲರನ್ನು ನಗುವಂತೆ ಮಾಡಿದವರು ಎಂದು ವಿವರಿಸುತ್ತಾರೆ. ಜೈನ್ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಅವರ ಅನೇಕ ಅನುಯಾಯಿಗಳು ಅಂತಿಮ ನಮನ ಸಲ್ಲಿಸಲು ಆಸ್ಪತ್ರೆಗೆ ದೌಡಾಯಿಸಿದರು.