ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಸಾಲಿಗ್ರಾಮ ತಾಲೂಕಿನ ಚನ್ನಂಗೆರೆ ಗ್ರಾಮದಲ್ಲಿ ಶ್ರೀ ಕೊಳ್ಳಿ ಮಲ್ಲಿಕಾರ್ಜುನ ಸ್ವಾಮಿ ದೇವರ ರಥೋತ್ಸವ ಸಾವಿರಾರು ಭಕ್ತಾಧಿಗಳ ಸಮ್ಮುಖದಲ್ಲಿ ಬಾರಿ ವಿಜೃಂಭಣೆಯಿಂದ ಮಂಗಳವಾರ ನಡೆಯಿತು. ಮಧ್ಯಾನ ೧.೩೦.ಕ್ಕೆ ನಡೆದ ರಥೋತ್ಸಕ್ಕೆ ಗ್ರಾಮದ ಮಲ್ಲಿಕಾರ್ಜುನ ಸ್ವಾಮಿ ದೇವಾಲಯದಿಂದ ಉತ್ಸಾಹ ಮೂರ್ತಿಯನ್ನು ಮೆರವಣಿಗೆ ಮೂಲಕ ಭಕ್ತಾಧಿಗಳು ಹೊತ್ತು ನಂತರ ರಥಕ್ಕೆ ಪ್ರತಿಷ್ಠಾಪನೆ ಮಾಡಲಾಯಿತು
ನಂತರ ದೇವಾಯಲದ ಅರ್ಚಕರಾದ ಸಿ.ಕೆ.ಮಲ್ಲಿಕಾರ್ಜುನ, ಸಿ.ಪಿ.ರಾಮಪ್ಪ ಮತ್ತು ಚಿಂದಬರ್ ಅವರು ದೇವರಿಗೆ ಪೂಜೆ ಸಲ್ಲಿಸಿ ಮಂಗಳಾರತಿ ಮಾಡಿದಾಗ ಹಾಜರಿದ್ದ ಸಾವಿರಾರು ಭಕ್ತಾಧಿಗಳು ಶ್ರೀ ಕೊಳ್ಳಿ ಮಲ್ಲಿಕಾರ್ಜುನ ದೇವರಿಗೆ ಬಾರಿ ಜಯಘೋಷ ಮೋಳಗಿಸಿ ಹಣ್ಣ- ಜವನ ಎಸೆದು ರಥವನ್ನು ಎಳೆದು ಚಪ್ಪಾಳೆ ತಟ್ಟಿ ಸಂಭ್ರಮಿಸಿದರು. ನವವಧುಗಳು ಮತ್ತು ಗ್ರಾಮಸ್ಥರು ರಥಕ್ಕೆ ಪೂಜೆ ಸಲ್ಲಿಸಿ ತಮ್ಮ ಇಷ್ಟಾರ್ಥ ಮತ್ತು ಮಳೆ ಬೆಳೆ ಅಗಲಿ ಗ್ರಾಮಕ್ಕೆ ಒಳಿತಾಗಲಿ ಎಂದು ಪ್ರಾರ್ಥಿಸಿದರು.
ರಥೋತ್ಸವದ ಹಿನ್ನಲೆಯಲ್ಲಿ ಹಾಕಲಾಗಿದ್ದ ಆಟಿಕೆ,ಮಿಠಾಯಿ ಸೇರಿದಂತೆ ಇನ್ನಿತರ ಅಂಗಡಿಗಳಿಗೆ ಭರ್ಜರಿ ವ್ಯಾಪಾರ ನಡೆಯಿತು
ರಥೋತ್ಸವಕ್ಕೆ ಮೈಸೂರು ಜಿಲ್ಲೆ ಅಲ್ಲದೇ ಹಾಸನ, ಮಂಡ್ಯ, ಕೊಡಗು ಸೇರಿದಂತೆ ಇನ್ನಿತರ ಜಿಲ್ಲೆಗಳಿಂದ ಭಕ್ತಾಧಿಗಳಿಗೆ ಮಜ್ಜಿಗೆ-ಪಾನಕ ವಿತರಿಸಲಾಯಿತು.
ರಥೋತ್ಸವದಲ್ಲಿ ಗ್ರಾಮದ ಯಜಮಾನರಾದ ಸಿ.ಬಿ.ಮಲ್ಲಿಕಾರ್ಜುನಾ, ಸಿ.ಕೆ.ಜಗದೀಶ್, ರಾಮೇಗೌಡ, ಶಂಕರೇಗೌಡ, ಗಂಗಾಧರ, ಬೋರೆಗೌಡ,ಸಿ.ಜಿ.ತಮ್ಮೇಗೌಡ,ಪುಟ್ಟರಾಜು,ರಾಮಶೆಟ್ಟಿ,ನಂಜುಂಡಶೆಟ್ಟಿ,ಸ್ವಾಮಿನಾಯ್ಕ,ರಾಮನಾಯ್ಕ,ನಂಜುಂಡಶೆಟ್ಟಿ,ಬಸವರಾಜು,ರಮೇಶ್ ಜೋಗಿ, ಶಂಕರ್ ನಾಯ್ಕ,ಮಲ್ಲಿಕಾರ್ಜುನ್,ಮಲ್ಲೇಶ್ ಚಾರ್, ಕಾಳಯ್ಯ, ಕರಿಯಯ್ಯ, ಲಕ್ಕಯ್ಯ, ನಿಂಗಯ್ಯ, ಮಲ್ಲೇಶ್, ಗವೀಗೌಡ,ತಮ್ಮಯ್ಯ ಶೆಟ್ಟಿ, ಸಿ.ಆರ್.ಪಿ.ಪ್ರಭು, ಚನ್ನಂಗರೆ ಸಹಕಾರ ಸಂಘದ ಕಾರ್ಯದರ್ಶಿ ಮಂಜುನಾಥ್ ಹಾಜರಿದ್ದರು.