ಮೈಸೂರು: ಭಾರತ ದೇಶಾದ್ಯಂತ ಬಿ.ಜೆ.ಪಿ ಪಕ್ಷ ಆಡಳಿತ ಚುಕ್ಕಾಣಿ ಹಿಡಿಯುವ ಏಕೈಕ ಉದ್ದೇಶದಿಂದ ಮತಕಳ್ಳತನದಂತಹ ಕೆಟ್ಟ ಪ್ರವೃತ್ತಿಯನ್ನು ಮಾಡುತ್ತಿದ್ದು ಸಂವಿಧಾನದ ಆಶಯಗಳನ್ನು ಬುಡಮೇಲು ಮಾಡಲು ವಿಫಲ ಪ್ರಯತ್ನಗಳನ್ನು ನಿರಂತರವಾಗಿ ನಡೆಸುತ್ತಿದೆ. ಅದರ ವಿರುದ್ಧ ನಮ್ಮ ರಾಷ್ಟ್ರೀಯ ನಾಯಕರಾದ ರಾಹುಲ್ ಗಾಂಧಿರವರು” ವೋಟ್ ಚೋರಿ”ವಿರುದ್ಧ ಅಭಿಯಾನ ಮಾಡುತ್ತಿದ್ದು ಕೆಪಿಸಿಸಿ ಮತ್ತು ಮೈಸೂರು ನಗರ ಕಾಂಗ್ರೆಸ್ ಸಮಿತಿಯ ಆದೇಶದ ಮೇರೆಗೆ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಕೃಷ್ಣರಾಜ ಮತ್ತು ದೇವರಾಜ ಅರಸು ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಶ್ರೀ ಎಂ.ಕೆ ಸೋಮಶೇಖರ್ ರವರ ನೇತೃತ್ವದಲ್ಲಿ ಮೈಸೂರಿನ ವಿದ್ಯಾರಣ್ಯಪುರಂನ ಚಾಮುಂಡಿವನ(ಸ್ಟೆರ್ಲಿಂಗ್ ಥಿಯೇಟರ್ ಬಳಿ) ಬಿಜೆಪಿಯ ಮತಕಳ್ಳತನದ ವಿರುದ್ಧ ಸಹಿ ಸಂಗ್ರಹ ಆಂದೋಲನ ನೆಡೆಸಲಾಯಿತು.
ಸಹಿ ಸಂಗ್ರಹ ಆಂದೋಲನದ ನೇತೃತ್ವವನ್ನು ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಶ್ರೀ ಎಂ ಕೆ ಸೋಮಶೇಖರ್ ರವರು ವಹಿಸಿದ್ದರು.
ಕೃಷ್ಣರಾಜ ವಿಧಾನಸಭಾ ಕ್ಷೇತ್ರವೂ ಮತಕಳ್ಳತನದಿಂದ ಹೊರತಾಗಿಲ್ಲ. ಕೃಷ್ಣರಾಜ ವಿಧಾನಸಭಾ ಕ್ಷೇತ್ರದಲ್ಲೂ ಸಹ 25ಸಾವಿರ ಕಳ್ಳಮತವನ್ನು ಬಿಜೆಪಿ ಸರ್ಕಾರ ಆಡಳಿತವಿದ್ದಾಗ ಸೇರಿಸಿದ್ದರು. ನಮ್ಮ ಕಾರ್ಯಕರ್ತರು ಮತದಾರರ ಅಂತಿಮ ಪಟ್ಟಿಯನ್ನು ಇಟ್ಟುಕೊಂಡು ಮನೆ ಮನೆ ಬಳಿಗೆ ತೆರಳಿ
ಸೂಕ್ಷ್ಮವಾಗಿ ಪರಿಶೀಲಿಸಿದಾಗ ಶ್ರೀರಾಂಪುರ, ಕುವೆಂಪುನಗರ, ವಿವೇಕಾನಂದರ, ಎಸ್.ಬಿ.ಎಂ ಬಡಾವಣೆ,ಜೆ.ಪಿ ನಗರ ಭಾಗದಲ್ಲಿ ಖಾಲಿ ನಿವೇಶನಗಳು, ವಾಸವಿಲ್ಲದ ಮನೆಗಳ ನಂಬರ್ ಗಳಲ್ಲಿ 10,15ಮತಗಳನ್ನು ಸೇರಿಸಿದ್ದರು. ಕೆಲವೊಂದು ಮನೆಗಳಿಗೆ ಸಂಬಂಧ ಇಲ್ಲದಂತಹ ಬಿಜೆಪಿ ಪರ ಇರುವಂತಹ ಮತಗಳನ್ನು ಸೇರಿಸಿದ್ದರು. ಅಂತಹ ಕಳ್ಳಮತಗಳನ್ನು ಸಾಕ್ಷಿ ಸಮೇತ ಹುಡುಕಿ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರೂ ಸಹ ಡಿಲೀಟ್ ಮಾಡಲಿಲ್ಲ. ಆ ರೀತಿ ಇನ್ನೂ ಸಹ ಸಾವಿರಾರು ಕಳ್ಳಮತಗಳು ಅಲ್ಲಲ್ಲಿ ಉಳಿದಿವೆ.ನಾವು ಈ ರೀತಿ ಪತ್ತೆ ಹಚ್ಚಿ ಡಿಲೀಟ್ ಮಾಡಿಸಲು ಪ್ರಯತ್ನಿಸಿದಾಗ ಬಿಜೆಪಿಯವರು ನಮ್ಮ ಮತವನ್ನು ತೆಗೆಯುತ್ತಿದ್ದಾರೆ ಎಂಬ ನಾಟಕವನ್ನು ಆ ಸಂದರ್ಭಲ್ಲಿ ಮಾಡುವ ಮೂಲಕ ಸಿಂಪತಿ ಗಿಟ್ಟಿಸುವ ಸಲುವಾಗಿ ಪ್ರಚಾರ ಪಡೆದಿದ್ದರು. ನಮ್ಮ ಕಾರ್ಯಕರ್ತರು ಪ್ರತೀ ಬೂತ್ ಗಳಲ್ಲಿಯೂ ಸಹ ಜಾಗೃತವಹಿಸಿ ಕಳ್ಳಮತ ಪತ್ತೆ ಹಚ್ಚಲು ಜಾಗೃತ ವಹಿಸುತ್ತಿದ್ದಾರೆ.
ಬಿಜೆಪಿ ನೇತೃತ್ವದ ಕೇಂದ್ರದ ಸರ್ಕಾರಕ್ಕೆ ಜನಪರ ಕಾಳಜಿ ಇಲ್ಲ, ಅಭಿವೃದ್ಧಿ ಬಗ್ಗೆ ಚಿಂತನೆಯೂ ಇಲ್ಲ,ಕೋಮು ಸಾಮರಸ್ಯವನ್ನು ಕದಡಿ ಧರ್ಮವನ್ನು ಒಡೆದು ಹಾಳುವುದೇ ಬಿಜೆಪಿ ಸರ್ಕಾರದ ಉದ್ದೇಶ.ಮತಕಳ್ಳತನದ ಮೂಲಕ ಬಿಜೆಪಿ ಪ್ರಜಾಪ್ರಭುತ್ವದ ಕಗ್ಗೋಲೆಗೆ ಕೈ ಹಾಕಿದೆ.ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮಾಡಿದಂತಹ ಅಧಿಕಾರ ದುರುಪಯೋಗ ಹಿಂದಿನ ಯಾವ ಸರ್ಕಾರಗಳು ಮಾಡಿಲ್ಲ.ಇಡಿ,ಸಿಬಿಐ ಅಂತಹ ಕೇಂದ್ರ ಸರ್ಕಾರದ ಅಧೀನ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವುದಲ್ಲದೆ ಪ್ರಸ್ತುತ ಮತಕಳ್ಳತನದಂತಹ ಸಂವಿಧಾನ ವಿರೋಧಿ ಚಟುವಟಿಕೆಗೆ ಕೈ ಹಾಕಿರುವುದು ನ್ಯಾಯಾಂಗ ವ್ಯವಸ್ಥೆಯನ್ನು ಹಾಳು ಗೆಡುವ ತಂತ್ರವಾಗಿದೆ. ಇದು ನಾಚಿಕೆಗೇಡಿನ ವಿಷಯ.ಇಂತಹ ವಿಷಯಗಳನ್ನು ನಮ್ಮ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕರಾದ ರಾಹುಲ್ ಗಾಂಧಿ ಅವರು ದೇಶಾದ್ಯಂತ ಹೋರಾಟ ಮಾಡಿದ್ದು ಸಾಕ್ಷಿ ಸಮೇತ ಜನರ ಮುಂದಿಟ್ಟಿದ್ದಾರೆ.
ಮುಂಬರುವ ನಗರ ಪಾಲಿಕೆ,ಬಿಬಿಎಂಪಿ,ಜಿಲ್ಲಾ, ತಾಲ್ಲೋಕು ಪಂಚಾಯತ್ ಚುನಾವಣೆಗಳಲ್ಲಿಯೂ ಸಹ ಮತಕಳ್ಳತನವನ್ನು ಮುಂದುವರೆಸುವ ಬಿಜೆಪಿ ತಂತ್ರಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಬಿಡುವುದಿಲ್ಲ. ಈಗಾಗಲೇ ದೇಶದಲ್ಲಿ ಪ್ರತೀ ವಿಧಾನಸಭಾ ಕ್ಷೇತ್ರದಲ್ಲಿ ಕನಿಷ್ಠ 5ರಿಂದ 10ಸಾವಿರ ಮತಕಳ್ಳತನ ಮಾಡಿದ್ದು ಅದು ಒಂದು ಲೋಕಸಭೆಗೆ 50ಸಾವಿರ ಮತಕಳ್ಳತನ ಮಾಡಿದೆ. ಆ ಮೂಲಕ ದೇಶದಲ್ಲೆಡೆ ಹಲವಾರು ಬಿಜೆಪಿ ಸಂಸದರ ಗೆಲುವಿಗೆ ಸಹಕಾರಿಯಾಗಿದೆ. ಇಂತಹ ಮತಕಳ್ಳತನವನ್ನು ತಡೆಗಟ್ಟಲು ಪ್ರತೀ ವಾರ್ಡ್, ಬೂತ್ ಗಳಲ್ಲಿಯೂ ಕಾಂಗ್ರೆಸ್ ಪಕ್ಷ ಸಕ್ರೀಯವಾಗಿ ಕೆಲಸ ನಿರ್ವಹಿಸಿ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕಿದೆ. ನಮ್ಮ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕರು, ಕೆಪಿಸಿಸಿ ಆದೇಶದ ಮೇರೆಗೆ ಕೃಷ್ಣರಾಜ ವಿಧಾನಸಭಾ ಕ್ಷೇತ್ರದಲ್ಲಿಯೂ ಸಹ ಇಂದು ಮತಕಳ್ಳತನದ ವಿರುದ್ಧ ಸಹಿ ಸಂಗ್ರಹಿಸುವ ಆಂದೋಲನಕ್ಕೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.
ಈ ವೇಳೆ ನಗರ ಕಾಂಗ್ರೆಸ್ ಅಧ್ಯಕ್ಷರಾದ ಆರ್.ಮೂರ್ತಿ,
ಕೃಷ್ಣರಾಜ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜಿ.ಸೋಮಶೇಖರ್, ದೇವರಾಜ ಅರಸು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಶ್ರೀಧರ್, ಮಾಜಿ ಮೂಡಾ ಅಧ್ಯಕ್ಷರಾದ ಹೆಚ್.ವಿ.ರಾಜೀವ್, ಮಾಜಿ ಮೇಯರ್ ಟಿ.ಬಿ.ಚಿಕ್ಕಣ್ಣ, ನಾರಾಯಣ್, ಮಾಜಿ ಉಪಮೇಯರ್ ಸಿದ್ದರಾಜು, ಆರ್.ಸಿ.ಜೋಗಿಮಹೇಶ್, ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಲತಾ ಚಿಕ್ಕಣ್ಣ, ಮಾಜಿ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ, ಲತಾಮೋಹನ್, ಕೆಪಿಸಿಸಿ ಮಾಜಿ ಸದಸ್ಯೆ ವೀಣಾ, ನಾಗರತ್ನ ಮಂಜುನಾಥ್, ಕಮಲ, ಮಲ್ಲಾಜಮ್ಮ, ಮಾಜಿ ನಗರ ಪಾಲಿಕೆ ಸದಸ್ಯರಾದ ಎಂ.ಸುನೀಲ್, ಜೆ.ಗೋಪಿ, ಶೋಭಾ ಸುನೀಲ್, ಆರ್.ಹೆಚ್.ಕುಮಾರ್, ನಿರಾಲ್ ಶಾ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಭವ್ಯ, ಇಂದಿರಾ, ಜ್ಯೋತಿ, ಲಕ್ಷ್ಮಿ, ಸರಸ್ವತಿ, ಮುಖಂಡರಾದ ಶಂಕರ್ ಬಾಸ್,ಆಶ್ರಯ ಸಮಿತಿ ಸದಸ್ಯರಾದ ಗುಣಶೇಖರ್, ಮಹ್ಮದ್ ಫಾರೂಖ್, ಸೋಮು ಕುರುಬಾರಳ್ಳಿ, ಮುಖಂಡರಾದ ವಿಶ್ವನಾಥ್, ವಿಜಯ್ ಕುಮಾರ್, ರವಿಶಂಕರ್ , ಡೈರಿ ವೆಂಕಟೇಶ್, ರಮೇಶ್ ರಾಮಪ್ಪ,ಜಗನ್ನಾಥ್ ಭೋವಿ, ಮಹೇಂದ್ರ ಗೌಡ, ಸಿದ್ಧರಾಮು, ಕೇಬಲ್ ಮಹದೇವು, ಹರವೆ ಸಿದ್ದು, ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ರಾಕೇಶ್, ನವೀನ್ ಎಂ.ಕೆಂಪಿ, ಲಖನ್, ಹೇಮಾ ಪುಟ್ಟಸ್ವಾಮಿ,ಹೇಮಂತ್ ಗೌಡ, ಮಲ್ಲೇಶ್ (ಮಲ್ಲ), ಟ್ರೇಡ್ ಕಾಂಗ್ರೆಸ್ ಅಧ್ಯಕ್ಷರಾದ ಮದನ್, ವಿದ್ಯಾರ್ಥಿ ಕಾಂಗ್ರೆಸ್ ಅಧ್ಯಕ್ಷರಾದ ಮನೋಜ್ ಪೈ, ರವೀಶ್, ಅರುಣ್ ಗಂಗಾಧರ್, ಅಜಯ್, ಕುಮಾರ್ (ಕುಮ್ಮಿ),ಕಲೀಂ ಷರೀಫ್ , ನಾಸೀರ್, ಯೋಗೇಶ್, ರೂಪೇಶ್,ಸೇವಾದಳ ಮೋಹನ್ ,ರವಿ ಕುರುಬಾರಳ್ಳಿ, ನವೀನ್ ಅಪ್ಪುಗೌಡ, ರಮೇಶ್,ಕಾಳೇಗೌಡ, ವಿವೇಕ್, ಚಿಕ್ಕಲಿಂಗು ಮತ್ತಿತರರು ಉಪಸ್ಥಿತರಿದ್ದರು.



                                    