ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಸರ್ಕಾರಿ ನೌಕರರು ಕೆಲಸದಲ್ಲಿ ಹುದ್ದೆ ತಾರತಮ್ಯ ಇಲ್ಲದೇ ಎಲ್ಲರು ಒಂದೇ ಎನ್ನುವ ಗೌರವದೊಂದಿಗೆ ಕೆಲಸ ಮಾಡಿದರೇ ಜನಸಾಮಾನ್ಯರಿಗೆ ಉತ್ತಮ ಸೇವೆ ಒದಗಿಸಬಹದು ಎಂದು ಕೆ.ಆರ್.ನಗರ ತಾಲೂಕು ಆಡಳಿತ ಮುಖ್ಯ ಪಶುವೈದ್ಯಾಧಿಕಾರಿ ಡಾ.ಬಿ.ಮಂಜುನಾಥ್ ಹೇಳಿದರು.
ಸಾಲಿಗ್ರಾಮ ತಾಲೂಕಿನ ಹೊಸೂರು ಪಶು ಚಿಕಿತ್ಸಾಲಯದಲ್ಲಿ 20 ವರ್ಷಗಳ ಸೇವೆ ಸಲ್ಲಿಸಿ ನಿವೃತ್ತಿಯಾದ ಡಿ.ಗ್ರೂಪ್ ನೌಕರ ಹೆಬ್ಬಾಳು ಎಚ್,ಎಸ್. ಸೋಮಶೇಖರ್ ಅವರಿಗೆ ಏರ್ಪಡಿಸಿದ್ದ ಬಿಳ್ಗೋಡಿಗೆ ಮತ್ತು ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರಿ ನೌಕರರು ಎಂದ ಮೇಲೆ ನಿವೃತ್ತಿ ಎಂಬುದು ಸರ್ವೆ ಸಾಮಾನ್ಯವಾಗಿದ್ದು ವೃತ್ತಿಯಲ್ಲಿ ಯಾವುದೇ ದಬ್ಬಾಳಿಕೆ ಇಲ್ಲದೇ ಜನಸಾಮಾನ್ಯರು ಮತ್ತು ರೈತರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡಬೇಕು ಇದರಿಂದ ಅಂತಹ ನೌಕರರ ಹೆಸರು ಜನಮಾಸದಲ್ಲಿ ಉಳಿಯಲು ಸಾಧ್ಯವಾಗಲಿದ್ದು ಇಂತ ಕೆಲಸ ನಿರ್ವಹಿಸಿ ನಿವೃತ್ತಿಯಾದ ಸೋಮಶೇಖರ್ ಇತರರಿಗೆ ಮಾದರಿ ಎಂದರು.
ಕೆ.ಆರ್.ನಗರ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಹೊಸೂರು.ಎ.ಕುಚೇಲ್ ಮಾತನಾಡಿ ಸರ್ಕಾರಿ ನೌಕರರು ನಿವೃತ್ತಿಯಾದ ಬಳಿಕ ಅವರನ್ನು ಗೌರವಿಸುವ ಕೆಲಸ ಮಾಡುವುದರಿಂದ ನೌಕರರ ವೃತ್ತಿ ಗೌರವ ಸಿಗಲು ಸಾಧ್ಯವಾಗಲಿದ್ದು ಈ ನಿಟ್ಟಿನಲ್ಲಿ ಯಾವುದೇ ಕಪ್ಪು ಚುಕ್ಕಿ ಇಲ್ಲದೇ ಕೆಲಸ ನಿರ್ವಹಿಸಿದ ಸೋಮಶೇಖರ್ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಹೆಬ್ಬಾಳು ಗ್ರಾ.ಪಂ.ಮಾಜಿ ಉಪಾಧ್ಯಕ್ಷೆ ಎಚ್.ಪಿ.ಜಯಂತಿ ಕೆ.ಆರ್.ನಗರ ಸಂಚಾರಿ ಪಶು ವೈಧ್ಯ ಎಚ್.ಪಿ.ಹರೀಶ್, ಹೊಸೂರು ಪಶು ಚಿಕಿತ್ಸಾಲಯದ ಡಾ. ಎಂ.ಪಿ.ಸಂಜಯ್ ಮೂಲೆಪೆಟ್ಲು , ಕೆ.ಸಿ.ರಾಮು, ನವೀನ್, ಸಂತೋಷ್, ಕೃಷ್ಣರಾವ್, ವಿನಯ್, ಪ್ರಭುಲಿಂಗು, ಸುರೇಂದ್ರ, ರಶ್ಮಿ, ಶಶಾಂಕ್, ಪಶು ವೈದ್ಯಕೀಯಪರೀಕ್ಷರಾದ ಎಸ್.ಎಸ್.ಅಪ್ಪಾಜಿಗೌಡ, ಎಚ್.ಜೆ.ಸಿದ್ದರಾಜು, ರೇವಣ್ಣ , ಕೃಷ್ಣಸ್ವಾಮಿ,
ಎಲ್.ನಾಗರಾಜು, ಎ.ಸಿ ಸುರೇಶ್ ಅಡಗೂರು, ಸತೀಶ್, ಚಿಕ್ಕೇಗೌಡ, ಮಂಜುನಾಥ್, ಗೋವಿಂದರಾಜು, ಬಿ.ಸುರೇಶ್, ಸಂದೇಶ್, ಶಶಿಕುಮಾರ್, ರಂಗಣ್ಣಗೌಡ,ಮದನ್ ಕುಮಾರ್, ವಿಶಕಂಠೇಗೌಡ, ಪೃಥ್ವಿ,
ನಿವೃತ್ತ ಪಶು ನಿರೀಕ್ಷಕ ಎಚ್.ಜೆ.ಶಿವಪ್ಪ, ಸಿಬ್ಬಂದಿಗಳಾದ ಸಿ.ಮಂಜುನಾಥ್, ಋಷಿಕುಮಾರ್, ಪ್ರತಾಪ್, ಮಹೇಶ್, ಪ್ರದೀಪ, ಪಶು ಶಖಿಯರಾದ ಜಯಶ್ರೀ, ಶೋಭ,ಮಹದೇವಿ, ಜ್ಯೋತಿ ಸೇರಿದಂತೆ ಮತ್ತಿತರರು ಹಾಜರಿದ್ದರು.