ಸುಳ್ಯ: ಕಾರೊಂದು ರಸ್ತೆ ಬದಿಯ ತಡೆಬೇಲಿಗೆ ಗುದ್ದಿದ ಪರಿಣಾಮ ಕಾರಿನ ಎದುರು ಭಾಗ ಸಂಪೂರ್ಣ ಹಾನಿಗೊಂಡ ಘಟನೆ ಸುಳ್ಯದ ಶ್ರೀರಾಮಪೇಟೆಯಲ್ಲಿ ನಡೆದಿದೆ.
ಬೆಂಗಳೂರಿನಿಂದ ಬಿ.ಸಿ ರೋಡ್ಗೆ ಹೋಗುವ ಸ್ಕೊಡ ಕಾರು ಚಾಲಕನ ನಿಯಂತ್ರಣ ತಪ್ಪಿ ತಡೆಬೇಲಿಗೆ ಗುದ್ದಿದ್ದು, ತಡೆಬೇಲಿ ಮುರಿದು ಕಾರು ಸೂಪರ್ ಮಾರ್ಕೆಟ್ ಎದುರು ಬಂದು ನಿಂತಿದೆ. ಅಂಗಡಿಯ ಬೋರ್ಡಿಗೂ ಹಾನಿಯಾಗಿದೆ. ಸವಾರರಿಗೆ ಸಣ್ಣಪುಟ್ಟ ಗಾಯಗಳಾಗಿರುವುದಾಗಿ ತಿಳಿದು ಬಂದಿದೆ.