ಮೈಸೂರು: ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದುಅಧಿಕಾರಕ್ಕೆ ಬಂದತಕ್ಷಣಎಲ್ಲಾ ಭರವಸೆಗಳನ್ನು ಈಡೇರಿಸಿರುವುದರಿಂದ ಪ್ರತಿಯೊಬ್ಬರೂಕಾಂಗ್ರೆಸ್ ಪಕ್ಷದಅಭ್ಯರ್ಥಿ ಸುನಿಲ್ಬೋಸ್ರವರನ್ನು ಬೆಂಬಲಿಸಬೇಕೆಂದು ವರುಣಾಕ್ಷೇತ್ರದ ಮಾಜಿ ಶಾಸಕರು ಹಾಗು ಆಶ್ರಯ ಸಮಿತಿಯಅಧ್ಯಕ್ಷರಾದಡಾ. ಯತೀಂದ್ರ ಸಿದ್ಧರಾಮಯ್ಯನವರು ಹೇಳಿದರು.
ವರುಣಾಕ್ಷೇತ್ರದ ಬಿಳಿಗೆರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಾಮರಾಜನಗರ ಲೋಕ ಸಭಾಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುನಿಲ್ಭೋಸ್ ಪರವಾಗಿ ಮತಯಾಚಿಸಿ ಮಾತನಾಡಿದಅವರು ಬಿ.ಜೆ.ಪಿ ಸರ್ಕಾರಕರ್ನಾಟಕಕ್ಕೆಅನ್ಯಾಯವನ್ನೆ ಮಾಡಿಕೊಂಡು ಬರುತ್ತಿದೆ. ತೆರಿಗೆಯ ಪಾಲನ್ನುಕೊಡುತ್ತಿಲ. ಬರ ಪರಿಹಾರ ನೀಡುತ್ತಿಲ. ಇಷ್ಟೆಲ್ಲಾಅನ್ಯಾಯವಾಗುತ್ತಿದ್ದರೂ ಸಹ ೨೬ಜನ ಬಿ.ಜೆ.ಪಿ ಸಂಸದರು ಮೋದಿ ಮುಂದೆಧೈರ್ಯವಾಗಿ ಮಾತನಾಡುವುದಿಲ್ಲ, ಬಿ.ಜೆ.ಪಿಯ ಆಡಳಿತದ ವೈಪಲ್ಯಗಳನ್ನು ಯಾವ ಟಿ.ವಿ ಯವರೂಸಹ ಚರ್ಚೆ ಮಾಡುತ್ತಿಲ್ಲ. ೨೫ಲಕ್ಷಕೋಟಿ ಶ್ರೀಮಂತರ ಸಾಲವನ್ನು ಮನ್ನಾ ಮಾಡುವ ಬಿ.ಜೆ.ಪಿ ಸರ್ಕಾರರೈತರ ಸಾಲ ಮನ್ನಾ ಮಾಡುತ್ತಿಲ್ಲ, ಬಡವರ ವಿರೋಧಿ ನೀತಿಅನುಸರಿಸುತ್ತಿರುವ ಬಿ.ಜೆ.ಪಿ ಸರ್ಕಾರವನ್ನು ತೊಲಗಿಸಿಕಾಂಗ್ರೆಸ್ ಸರ್ಕಾರವನ್ನುಅಧಿಕಾರಕ್ಕೆತರಲು ನಮ್ಮಅಭ್ಯರ್ಥಿ ಸುನಿಲ್ಭೋಸ್ರವರನ್ನುಆಯ್ಕೆ ಮಾಡಬೇಕೆಂದು ಮನವಿ ಮಾಡಿದರು.
ಚಾಮರಾಜ ನಗರ ಲೋಕಸಭಾಕ್ಷೇತ್ರದಕಾಂಗ್ರೆಸ್ಅಭ್ಯರ್ಥಿ ಸುನಿಲ್ಭೋಸ್ ಮಾತನಾಡಿಕಾಂಗ್ರೆಸ್ ಸರ್ಕಾರ ಮಹಿಳೆಯರ ಸ್ವಾವಲಂಬಿ ಬದುಕಿಗೆ ಅನುಕೂಲ ಮಾಡಿಕೊಟ್ಟಿದೆ, ಸಿದ್ಧರಾಮಯ್ಯನವರು ಯಾರೂಕೂಡ ಹಸಿದು ಮಲಗಬಾರದುಎಂದುಅನ್ನಭಾಗ್ಯ ನೀಡಿದ್ದಾರೆ. ಸಿದ್ಧರಾಮಯ್ಯನವರು ಮತ್ತುಡಾ. ಯತೀಂದ್ರರವರನ್ನು ಗೆಲ್ಲಿಸಿದಂತೆ ಹೆಚ್ಚಿನ ಮತಗಳನ್ನು ನನಗೆ ನೀಡಿ ನಿಮ್ಮ ಮನೆಯ ಮಗನೆಂದು ತಿಳಿದು ಆಶೀರ್ವದಿಸಬೇಕೆಂದು ಮನವಿ ಮಾಡಿದರು.
ಸಭೆಯಲ್ಲಿ ಮಾಜಿ ಸಂಸದ ಕಾಗಲವಾಡಿ ಶಿವಣ್ಣ, ವಿಧಾನಪರಿಷತ್ ಮಾಜಿ ಸದಸ್ಯ ಮರಿತಿಬ್ಬೇಗೌಡ, ಎಸ್.ಸಿ.ಬಸವರಾಜು, ಲತಾಸಿದ್ದಶೆಟ್ಟಿ, ರಂಗಸ್ವಾಮಿ, ಮಂಜುಳಾ ಮಂಜುನಾಥ್, ಮಾರ್ಬಳ್ಳಿಕುಮಾರ್, ಗ್ರಾ ಪಂ ಅಧ್ಯಕ್ಷಕುಮಾರ್ ಹಾಜರಿದ್ದರು.