Wednesday, June 4, 2025
Google search engine

Homeರಾಜ್ಯಸುದ್ದಿಜಾಲಗ್ರಾಮೀಣ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಶಿಕ್ಷಕರ ಪಾತ್ರ ಮಹತ್ತರ: ಎಸ್. ವಸಂತಕುಮಾರ

ಗ್ರಾಮೀಣ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಶಿಕ್ಷಕರ ಪಾತ್ರ ಮಹತ್ತರ: ಎಸ್. ವಸಂತಕುಮಾರ

ವರದಿ:ವಿನಯ್ ದೊಡ್ಡಕೊಪ್ಪಲು

ಕೆ.ಅರ್.ನಗರ : ಗ್ರಾಮೀಣ ಭಾಗದಲ್ಲಿ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಶಿಕ್ಷಕರ ಪಾತ್ರ ಅಪಾರವಾಗಿದೆ ಎಂದು ಕುಪ್ಪಹಳ್ಳಿ ಕ್ಲಸ್ಟರ್ ನ ಸಂಪನ್ಮೂಲ ವ್ಯಕ್ತಿ ಎಸ್.ವಸಂತಕುಮಾರ ಹೇಳಿದರು. ಸಾಲಿಗ್ರಾಮ ತಾಲ್ಲೂಕಿನ ಕುಪ್ಪಹಳ್ಳಿ ಕ್ಲಸ್ಟರ್ ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಪ್ಪಹಳ್ಳಿ ಶಾಲೆಯ ಬಡ್ತಿ ಮುಖ್ಯ ಶಿಕ್ಷಕರಾದ ಭೇರ್ಯ ಕೃಷ್ಣೆಗೌಡ ರವರ ವಯೋನಿವೃತ್ತಿಯ ಬಿಳ್ಕೋಡುಗೆ ಮತ್ತು ಅಭಿನಂದನಾ ಕಾರ್ಯಕ್ರಮ ದಲ್ಲಿ ಮಾತನಾಡಿದರು.

ಶಿಕ್ಷಕರು ನಿವೃತ್ತಿ ನಂತರವೂ ಮಕ್ಕಳಿಗೆ ಜ್ಞಾನ ಹಂಚುವ ಕಾರ್ಯವನ್ನು ನಿರಂತರವಾಗಿ ಮಾಡಬೇಕು ಇದರಿಂದ ವಿದ್ಯಾರ್ಥಿಗಳ ನಡುವೆ ಉತ್ತಮ ಬಾಂದವ್ಯ ಏರ್ಪಡಲಿದೆ ಎಂದ ಅವರು ಸುಧೀರ್ಘ 31ವರ್ಷಗಳ ಕಾಲ ಶಾಲಾ ಶಿಕ್ಷಣ ಇಲಾಖೆಯಲ್ಲಿ ವಿವಿಧ ಸ್ತರಗಳಲ್ಲಿ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಭೇರ್ಯ ಕೃಷ್ಣೆಗೌಡ ರವರು ವೃತ್ತಿಯಲ್ಲಿ ಉತ್ತಮವಾದ ಪ್ರಮಾಣಿಕ ಸೇವೆ,ಸಾಮಾಜಿಕ ಕಾಳಜಿಕ ಅವಿಸ್ಮರಣೀಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮೇಲೂರು ಕ್ಲಸ್ಟರ್ ನ ಚಿಕ್ಕಕೊಪ್ಪಲು ಚಿಕ್ಕಕೊಪ್ಪಲು.ಎಸ್.ರಮೇಶ,ಭೇರ್ಯ ಕ್ಲಸ್ಟರ್ ನ ತಂದ್ರೆಕೊಪ್ಪಲು ರೇವಣ್ಣ, ಶಾಲಾ ಪ್ರಾಥಮಿಕ ಶಾಲಾ ಶಿಕ್ಷಕರಾದ ನಿರ್ದೇಶಕ ಪ್ರಸನ್ನಕುಮಾರ,ನೌಕರರ ಸಂಘದ ನಿರ್ದೇಶಕ ಬಿ.ಎಲ್.ಮಹದೇವ,ಕ್ಲಸ್ಟರ್ ನ ಶಿಕ್ಷಕರುಗಳಾದ ಪ್ರಕಾಶ್, ಪ್ರದೀಪಕುಮಾರ,ಕೋಮಲ, ಹೇಮಂತಕುಮಾರ,ಪಲ್ಲವಿ,ಸುಜಾತ,ಕೃಷ್ಣೆಗೌಡ,ರಾಘವೇಂದ್ರ,ಶಿವರಾಮ್,ಶ್ರುತಿ.ಎಲ್.ಶಿವಣ್ಣ,ಕುಮಾರಶಟ್ಟಸುಧಾಮಣಿ,ದಶರಥ,ಚಿಕ್ಕೆಗೌಡ,ಕವಿತ,ಮಂಜುನಾಥ,ಚಿತ್ರಶೇಖರ,ರಮೇಶ್,ಉಮೇಶ್,ಎಂ.ಎಸ್.ಜಲೇಂದ್ರ,ಭದ್ರಯ್ಯ, ಎಸ್.ಡಿ.ಎಂ.ಸಿ.ಅಧ್ಯಕ್ಷರಾದ ರವಿ ಗ್ರಾಮಸ್ಥರು, ಪೋಷಕರು ಸಾರ್ವಜನಿಕರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular