Saturday, June 7, 2025
Google search engine

Homeರಾಜ್ಯಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ನಾಳೆ ಬೆಂಗಳೂರಿನ ಈ ಮಾರ್ಗಗಳಲ್ಲಿ ವಾಹನಗಳ ಸಂಚಾರ ತಾತ್ಕಾಲಿಕ ನಿಷೇಧ

ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ನಾಳೆ ಬೆಂಗಳೂರಿನ ಈ ಮಾರ್ಗಗಳಲ್ಲಿ ವಾಹನಗಳ ಸಂಚಾರ ತಾತ್ಕಾಲಿಕ ನಿಷೇಧ

ಬೆಂಗಳೂರು: ನಾಳೆ(ಜೂನ್ 7) ಬಕ್ರೀದ್ ಹಬ್ಬವನ್ನು ಮುಸ್ಲಿಂ ಬಾಂಧವರು ಅದ್ಧೂರಿಯಾಗಿ ಆಚರಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಚಾಮರಾಜಪೇಟೆ ಪ್ರದೇಶದಲ್ಲಿ ಬಿಬಿಎಂಪಿ ಆಟದ ಮೈದಾನ ಮತ್ತು ಬಿಬಿ ಜಂಕ್ಷನ್‌ ನಲ್ಲಿ ಬೃಹತ್ ಸಾಮೂಹಿಕ ಪ್ರಾರ್ಥನೆ ನಡೆಯಲಿದ್ದು, ಮೈಸೂರು ರಸ್ತೆಯ ಬಿಜಿಎಸ್ ಪ್ಲೈಓವರ್‌ನಲ್ಲಿ ಬೆಳಿಗ್ಗೆ 8:00 ರಿಂದ ಪ್ರಾರ್ಥನೆ ಮುಗಿಯುವವರೆಗೆ ಎಲ್ಲ ಮಾದರಿಯ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.

ಚಾಮರಾಜಪೇಟೆ ಸಂಚಾರ ಪೊಲೀಸ್ ಠಾಣೆ ಟ್ವೀಟ್ ಮೂಲಕ ಈ ಮಾಹಿತಿ ಹಂಚಿಕೊಂಡಿದ್ದು, ಈ ಸಂದರ್ಭ ವಾಹನ ಸವಾರರು ಪರ್ಯಾಯ ಮಾರ್ಗ ಬಳಸುವಂತೆ ವಿನಂತಿಸಲಾಗಿದೆ. ಪ್ರತಿ ವರ್ಷದಂತೆ, ಮಸೀದಿ ಹಾಗೂ ಆಟದ ಮೈದಾನದಲ್ಲಿ ಸಾವಿರಾರು ಮಂದಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಲು ಸೇರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ.

ತಾತ್ಕಾಲಿಕ ನಿಷೇಧಗೊಂಡ ಭಾಗಗಳು:

  • ಮೈಸೂರು ರಸ್ತೆಯ ಟೋಲ್ ಗೇಟ್ ಜಂಕ್ಷನ್‌ನಿಂದ ಬಿಬಿ ಜಂಕ್ಷನ್, ಬಿಜಿಎಸ್ ಪ್ಲೈಓವರ್‌ ಮಾರ್ಗವಾಗಿ ಟೌನ್‌ಹಾಲ್ ವರೆಗೆ ಎಲ್ಲ ವಾಹನಗಳ ಸಂಚಾರ ನಿಷೇಧ.
  • ಟೌನ್‌ಹಾಲ್ ಕಡೆಯಿಂದ ಮೈಸೂರು ಕಡೆಗೆ ಬಿಜಿಎಸ್ ಪ್ಲೈಓವರ್ ಮಾರ್ಗವಾಗಿ ಸಂಚಾರ ನಿಷೇಧ.

ಪರ್ಯಾಯ ಮಾರ್ಗಗಳು:

  1. ಮೈಸೂರು ಕಡೆ → ಟೌನ್‌ಹಾಲ್ ಕಡೆ: ಬ್ಯಾಟರಾಯನಪುರ → ಕಿಮ್ಕೋ ಜಂಕ್ಷನ್ ಎಡ ತಿರುಗಿ → ವಿಜಯನಗರ ಮಾರ್ಗ.
  2. ಟೌನ್‌ಹಾಲ್ → ಮೈಸೂರು ಕಡೆ: ಬಿಜಿಎಸ್ ಪ್ಲೈಓವರ್ ಸರ್ವಿಸ್ ರಸ್ತೆ → ಭಾರಿ ವಾಹನಗಳು ವೆಟರ್ನರಿ ಜಂಕ್ಷನ್ ಬಲ ತಿರುಗಿ → ಗೂಡ್ಶೆಡ್ ರಸ್ತೆ → ಲಘು ವಾಹನಗಳು ಸಿರಸಿ ಜಂಕ್ಷನ್ ಬಲ ತಿರುಗಿ → ಜಿಜಿ ನಗರ → ಟ್ಯಾಕ್‌ಬಂಡ್ ರಸ್ತೆ → ಬಿನ್ನಿಮಿಲ್ ಜಂಕ್ಷನ್.
  3. ಬಸವನಗುಡಿ ಮತ್ತು ಚಾಮರಾಜಪೇಟೆ → ಮೆಜೆಸ್ಟಿಕ್: ಚಾಮರಾಜಪೇಟೆ 1ನೇ ಮುಖ್ಯರಸ್ತೆ → 6ನೇ ಅಡ್ಡರಸ್ತೆ → ಮೈಸೂರು ರಸ್ತೆ → ಸಿರ್ಸಿ ಸರ್ಕಲ್ → ಬಿನ್ನಿಮಿಲ್ ರಸ್ತೆ.

ಸಾರಿಗೆ ಅನುಕೂಲಕ್ಕಾಗಿ ಸಾರ್ವಜನಿಕರು ಸಂಚಾರ ಪೊಲೀಸರ ಸೂಚನೆ ಪಾಲಿಸಿ ಸಹಕರಿಸಬೇಕೆಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

RELATED ARTICLES
- Advertisment -
Google search engine

Most Popular