ಮೈಸೂರು: ಕೇಂದ್ರದ ಮೋದ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದ್ದು ವಸೂಲಿ ದಂದೆ ಸರ್ಕಾರವಾಗಿದೆ ಎಂದು ವರುಣಾ ಕ್ಷೇತ್ರದ ಮಾಜಿ ಶಾಸಕ ಹಾಗೂ ಆಶ್ರಯ ಸಮಿತಿ ಅಧ್ಯಕ್ಷ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ಚಾಮುಂಡೇಶ್ವರಿ ಕ್ಷೇತ್ರದ ಇಲವಾಲದಲ್ಲ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ್ ಪರವಾಗಿ ಶುಕ್ರವಾರ ಸಂಜೆ ಮತಯಾಚಿಸಿ ಮಾತನಾಡಿದ ಅವರು ಕೇಂದ್ರ ಸರ್ಕಾರ ಕೋವಿಡ್ ಸಮಯದಲ್ಲಿ ಮೋದಿ ಕೇರ್ ಫಂಡ್ ಎಂದು ಸಾರ್ವಜನಿಕರಿಂದ ಹಣವನ್ನು ಸಂಗ್ರಹ ಮಾಡಿ ಲೆಕ್ಕವನ್ನು ಕೊಡದೆ ಲಪಟಾಯಿಸಿದ್ದಾರೆ. ಮಾಧ್ಯಮದವರು ಹೋರಾಟಗಾರರು ಪ್ರಗತಿಪರರ ಮೇಲೆ ಸುಳ್ಳು ಮೊಕದ್ದಮೆಗಳನ್ನು ದಾಖಲಿಸಿ ಜೈಲಿಗೆ ಕಳುಹಿಸುತ್ತಿದ್ದಾರೆ. ಇಂತಹವರಿಗೆ ತಕ್ಕಪಾಠ ಕಲಿಸಲು ಈ ಬಾರಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವುದರೊಂದಿಗೆ ಎಂ. ಲಕ್ಷ್ಮಣ್ರವರನ್ನು ಆಯ್ಕೆ ಮಾಡಬೇಕೆಂದು ಮನವಿ ಮಾಡಿದರು.
ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ್ ಮಾತನಾಡಿ ದೇಶದಲ್ಲಿ ಸರ್ವಾಧಿಕಾರಿ ಸರ್ಕಾರ ನಡೆಯುತ್ತಿದೆ. ಬಿಜೆಪಿಯವರು ಜನರ ರಕ್ತವನ್ನು ಹೀರುವ ಕೆಲಸ ಮಾಡುತ್ತಿದ್ದಾರೆ. ದೇಶದ ಎಲ್ಲಾ ಸಂಸ್ಥೆಗಳನ್ನು ಖಾಸಗಿಕರಣ ಮಾಡುತ್ತಿದ್ದಾರೆ. ಇಂತಹವರಿಗೆ ತಕ್ಕಪಾಠ ಕಲಿಸಲು ಕಾಂಗ್ರೆಸ್ ಬೆಂಬಲಿಸಿ. ೪೭ ವರ್ಷದ ನಂತರ ಕಾಂಗ್ರೆಸ್ ಪಕ್ಷ ಒಕ್ಕಲಿಗರಿಗೆ ಟಿಕೆಟ್ ನೀಡಿದೆ. ನಾನು ಹುಟ್ಟುವಾಗ ಒಕ್ಕಲಿಗನಾಗಿ ಹುಟ್ಟಿದ್ದೇನೆ, ಬೆಳೆದ ನಂತರ ವಿಶ್ವಮಾನವನಾಗಿ ಬೆಳೆದಿದ್ದೇನೆ. ಆದ್ದರಿಂದ ನನಗೆ ಜಾತ್ಯಾತೀತವಾಗಿ, ಪಕ್ಷಾತೀತವಾಗಿ ಬೆಂಬಲಿಸಿ ಆಶೀರ್ವದಿಸಬೇಕೆಂದು ಮನವಿ ಮಾಡಿದರು.
ಸಭೆಯಲ್ಲಿ ಮುಡಾ ಮಾಜಿ ಅಧ್ಯಕ್ಷ ಹೆಚ್.ವಿ. ರಾಜೀವ್, ಮೈಮುಲ್ ಮಾಜಿ ಅಧ್ಯಕ್ಷ ಸಿದ್ದೇಗೌಡ, ಜಿ.ಪಂ. ಮಾಜಿ ಸದಸ್ಯ ರಾಕೇಶ್ ಪಾಪಣ್ಣ, ಬೀರಿಹುಂಡಿ ಬಸವಣ್ಣ, ಕೂರ್ಗಳ್ಳಿ ಮಹದೇವ್, ಅರುಣ್ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ. ಗುರುಸ್ವಾಮಿ, ಮುಖಂಡರಾದ ಕಾಮನಕೊಪ್ಪಲು ಕರೀಗೌಡ, ಕೃಷ್ಣಕುಮಾರ್ ಸಾಗರ್, ಡಾ ಪ್ರಕಾಶ್, ಭಾಗ್ಯ ಲೋಕೇಶ್, ರಾಮೇಗೌಡ, ಶಿವೇಗೌಡ, ವೈ.ಸಿ. ಸ್ವಾಮಿ, ಸ್ವಾಮೀಗೌಡ, ಜಿ.ಕೆ. ಬಸವಣ್ಣ, ಎಂ.ಪಿ. ರವಿಕುಮಾರ್, ಬಿ. ರವಿ, ಯಧುಕುಮಾರ್, ಶಿವಣ್ಣ, ರವಿ, ಸುರೇಶ್, ಹಾಜರಿದ್ದರು.