Tuesday, March 3, 2026
Google search engine

Homeರಾಜಕೀಯಅಣ್ಣನ ಮಗನನ್ನೇ ಸಹಿಸಿಕೊಳ್ಳಲಿಲ್ಲ, ನಮ್ಮನ್ನು ಸಹಿಸಿಕೊಳ್ತಾರಾ? : ಶಾಸಕ ಕದಲೂರು ಉದಯ್

ಅಣ್ಣನ ಮಗನನ್ನೇ ಸಹಿಸಿಕೊಳ್ಳಲಿಲ್ಲ, ನಮ್ಮನ್ನು ಸಹಿಸಿಕೊಳ್ತಾರಾ? : ಶಾಸಕ ಕದಲೂರು ಉದಯ್

ಮಂಡ್ಯ : ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಜೈಲು ಸೇರಲು ಕೇಂದ್ರ ಸಚಿವ ಹೆಚ್​​.ಡಿ.ಕುಮಾರಸ್ವಾಮಿ ಕಾರಣ ಎಂದು ಕಾಂಗ್ರೆಸ್​ ಶಾಸಕ ಕದಲೂರು ಉದಯ್ ಸ್ಫೋಟಕ ಆರೋಪ ಮಾಡಿದ್ದಾರೆ.

ಅಣ್ಣನ ಮಗನನ್ನೇ ಸಹಿಸಿಕೊಳ್ಳಲಿಲ್ಲ, ನಮ್ಮನ್ನು ಸಹಿಸಿಕೊಳ್ತಾರಾ? ಇವರ ಮಗ ಗೆದ್ದಿಲ್ಲ ಅಂತಾ ಷಡ್ಯಂತ್ರ ಮಾಡಿ ಅಣ್ಣನ ಮಗನನ್ನೇ ಜೈಲಿಗೆ ಹಾಕಿಸಿದ್ರು. ಮಾಜಿ ಪ್ರಧಾನಿ ಹೆಚ್​.ಡಿ.ದೇವೇಗೌಡ ಅವರು ಮನಸ್ಸು ಮಾಡಿದರೇ ಬಿಡಿಸಬಹುದಿತ್ತು ಎಂದು ಮದ್ದೂರಿನಲ್ಲಿ ಕದಲೂರು ಉದಯ್ ಗಂಭೀರ ಆರೋಪ ಮಾಡಿದ್ದಾರೆ.

ಕೇಂದ್ರ ಸಚಿವ ಹೆಚ್​​.ಡಿ.ಕುಮಾರಸ್ವಾಮಿಗೆ ತಾಕತ್ತಿದ್ದರೆ ಮಂಡ್ಯಕ್ಕೆ ಕೈಗಾರಿಕೆ ತರಲಿ, ನಾನೇ 60-70 ಎಕರೆ ಜಮೀನು ಕೊಡುತ್ತೀನಿ. ಸರ್ಕಾರದ ಭಾಗವಾಗಿ ನಾವು ಜಾಗ ಕೊಡುತ್ತೇವೆ. ಮೊದಲು ಹೆಚ್​ಡಿ ಕುಮಾರಸ್ವಾಮಿ ಯಾವ ಕೈಗಾರಿಕೆ ತರುತ್ತಾರೆ ಅಂತಾ ಹೇಳಲಿ. ಅಭಿವೃದ್ಧಿ ಮಾಡಲು ಛಲ, ಆಸಕ್ತಿ ಬೇಕು. ರೈತರ ಕಷ್ಟ ತಿಳಿದಿರಬೇಕು. ಬರೀ ಭಾಷಣ, ಟಿವಿ ಮುಂದೆ ಹೇಳಿದರೆ ಅಭಿವೃದ್ಧಿ ಆಗುವುದಿಲ್ಲ. ಹೆಚ್.​ಡಿ.ಕುಮಾರಸ್ವಾಮಿ ಮೊದಲು ಪ್ರಾಮಾಣಿಕವಾಗಿ ಕೆಲಸ ಮಾಡಿ ತೋರಿಸಲಿ ಎಂದು ಕಿಡಿ ಕಾರಿದ್ದಾರೆ.

ಮುಂದುವರೆದು, ನಗರಸಭೆ ಸೇರ್ಪಡೆ ವಿರೋಧಿಸಿ ಗೆಜ್ಜಲಗೆರೆಯಲ್ಲಿ ಪ್ರತಿಭಟನೆ ಆಗುತ್ತಿದ್ದು, ನನ್ನ ವಿರುದ್ಧ ಪ್ರತಿಭಟನೆಗೆ ದುಡ್ಡು ಹಂಚಿಕೆ ಮಾಡುತ್ತಿದ್ದಾರೆ. ನನ್ನ ವೈಯಕ್ತಿಕ ವಿಚಾರ ಬಿಚ್ಚಿಡ್ತೀನಿ ಅಂತಾ ಹೆಚ್​ಡಿಕೆ ಹೇಳಿದ್ದಾರೆ, ನನಗೇನು ಮೂರು ಮದುವೆಯಾಗಿದೆಯಾ ಬಿಚ್ಚಿಡುವುದಕ್ಕೆ? ನಾನು ಹಳ್ಳಿ ರೈತನ ಮಗ.

ಅವರ ರೀತಿ ಯಾರ ಬಳಿಯೂ ಹೆಲಿಕಾಪ್ಟರ್ ಪಡೆದುಕೊಂಡಿಲ್ಲ. ಭೂಕಬಳಿಕೆ ಆರೋಪ ನನ್ನ ಮೇಲಿಲ್ಲ. ಹೋರಾಟಕ್ಕೆ ನಿತ್ಯ ಹಣಬೇಕು, ಅದಕ್ಕೆ ವಿಪಕ್ಷದವರು ಕೊಡುತ್ತಿದ್ದಾರೆ. ಹಳ್ಳಿ ಜನ ಸಾವಿರಾರು ಖರ್ಚು ಮಾಡಿ ಹೋರಾಟ ಮಾಡಲು ಆಗಲ್ಲ. ಇಷ್ಟು ದಿನ ಎಲ್ಲ ಒಕ್ಕಲಿಗರನ್ನ ಹಾಳು ಮಾಡಿದ್ರಿ. ಇನ್ಮುಂದೆ ಆದರೂ ಒಕ್ಕಲಿಗ ಯುವಕರು ಬೆಳೆಯಲು ಬಿಡಿ ಎಂದು ಶಾಸಕ ಕದಲೂರು ಉದಯ್ ವಾಗ್ದಾಳಿ ನಡೆಸಿದ್ದಾರೆ.

RELATED ARTICLES
- Advertisment -
Google search engine

Most Popular