ಚಂಡೀಗಢ: ಮುನ್ಸಿಪಲ್ ಕಾರ್ಪೊರೇಷನ್ನ ಮೂವರು ಆಮ್ ಆದ್ಮಿ ಪಕ್ಷದ ಕೌನ್ಸಿಲರ್ಗಳು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ಆಪ್ ಕೌನ್ಸಿಲರ್ಗಳಾದ ಪೂನಮ್ ದೇವಿ, ನೇಹಾ ಮುಸಾವತ್ ಹಾಗೂ ಗುರುಚರಣ್ ಕಾಲಾ ಇಂದು ಹೊಸದಿಲ್ಲಿಯಲ್ಲಿ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದರು. ಚುನಾವಣಾ ಅವ್ಯವಹಾರ ಹಾಗೂ ಅಕ್ರಮಗಳ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ನೂತನವಾಗಿ ಚುನಾಯಿತರಾಗಿರುವ ಮೇಯರ್ ಮನೋಜ್ ಸೋಂಕರ್ ತಮ್ಮ ಹುದ್ದೆಗೆ ರಾಜಿನಾಮೆ ನೀಡಿದ ಬೆನ್ನಿಗೇ ಈ ಬೆಳವಣಿಗೆ ಸಂಭವಿಸಿದೆ.
ಚಂಡೀಗಢ ಮಹಾನಗರ ಪಾಲಿಕೆಗೆ ಹೊಸದಾಗಿ ಚುನಾವಣೆ ನಡೆದಾಗ ತನ್ನದೇ ೧೭ ಕೌನ್ಸಿಲರ್ಗಳು, ಅಕಾಲಿ ದಳದ ಓರ್ವ ಕೌನ್ಸಿಲರ್ ಹಾಗೂ ಚಂಡೀಗಢ ಸಂಸದ ಕಿರೊನ್ ಖೇರ್ ಬಲ ಹೊಂದಿರುವ ಬಿಜೆಪಿಯು ಬಹುಮತಕ್ಕೆ ಅಗತ್ಯವಾದ ೧೯ ಸ್ಥಾನಗಳ ಗಡಿಯನ್ನು ಸುಲಭವಾಗಿ ದಾಟುವ ಸಾಧ್ಯತೆ ಇದೆ.