ಮಂಡ್ಯ: ಮೇಲುಕೋಟೆ ಶ್ರೀ ವೈರಮುಡಿ ಬ್ರಹ್ಮೋತ್ಸವವು ಮಾ.೨೮ ರವರೆಗೆ ಜರುಗಲಿದ್ದು, ಮಾ.೨೧ ರಂದು ವಿಶ್ವವಿಖ್ಯಾತ ವೈರಮುಡಿ ಕಿರೀಟಧಾರಣಾ ಮಹೋತ್ಸವವು ಜರುಗಲಿದೆ.
ಮಾ.೨೦ ರಂದು ೩ ನೇ ತಿರುನಾಳ್- ನಾಗವಲ್ಲೀಮಹೋತ್ಸವ- ನರಂಧೋಳಿಕಾರೋಹಣ- ಚಂದ್ರಮಂಡಲವಾಹನ- ಪಡಿಯೇತ್ತ, ಮಾ.೨೧ ರಂದು ೪ ನೇ ತಿರುನಾಳ್ ಶ್ರೀ ವೈರಮುಡಿ ಕಿರೀಟಧಾರಣ ಮಹೋತ್ಸವ( ರಾತ್ರಿ ೮.೩೦ ರಿಂದ ಮುಂಜಾನೆ ೪.೦೦ ಗಂಟೆಯ ವರೆಗೆ) ಪಡಿಯೇತ್ತ, ೨೨ ರಂದು ೫ ನೇ ತಿರುನಾಳ್- ಪ್ರಹ್ಲಾದ ಪರಿಪಾಲನ- ಗರುಡವಾಹನ- ವಿಶೇಷ ಪಡಿಯೇತ್ತ, ಮಾ.೨೩ ರಂದು ೬ ನೇ ತಿರುನಾಳ್ – ಗಜೇಂದ್ರ ಮೋಕ್ಷ -ಆನೆವಸಂತ – ಕುದುರೆವಾಹನ- ಆನೆವಾಹನ -ವಿಶೇಷ ಪಡಿಯೇತ್ತ, ಮಾ.೨೪ ರಂದು ೭ನೇ ತಿರುನಾಳ್- ಶ್ರೀ ಮನ್ಮಹಾರೋಥೋತ್ಸವ, ಯಾತ್ರಾದಾನ, ರಥೋತ್ಸವ, ಶ್ರೀ ಚೆಲುವನಾರಾಯಣಸ್ವಾಮಿ ಮತ್ತು ಶ್ರೀ ರಾಮಾನುಜರಿಗೆ ಅಭಿಷೇಕ ಅಮ್ಮನವರ ಸನ್ನಿಧಿಯಲ್ಲಿ, ಬಂಗಾರ ಪಲ್ಲಕ್ಕಿ ಉತ್ಸವ, ಮಾ.೨೫ ರಂದು ೮ನೇ ತಿರುನಾಳ್- ಪಂಗುನ್ಯುತ್ತರಂ, ತೆಪ್ಪೋತ್ಸವ- ಡೋಲೋತ್ಸವ- ಕುದುರೆ ವಾಹನ- ಕಳ್ಳರಸುಲಿಗೆ, ಮಾ.೨೬ ರಂದು ೯ನೇ ತಿರುನಾಳ್- ಶ್ರೀ ನಾರಾಯಣಸ್ವಾಮಿ ಜಯಂತಿ, ಸಂಧಾನಸೇವೆ -ಚೂರ್ಣಅಭಿಷೇಕ- ಅವಬೃಥ – ಪಟ್ಟಾಭಿಷೇಕ -ಪುಷ್ಪಮಂಟಪರೋಹಣ (ಸಮರಭೂಪಾಲವಾಹನ)- ಪಡಿಮಾಲೆ – ಪೂರ್ಣಾಹುತಿ, ಶಾತ್ತುಮೊರೈ, ಕುಂಭಪ್ರೋಕ್ಷಣೆ, ಮಾ.೨೭ ರಂದು ೧೦ ನೇ ತಿರುನಾಳ್ -ಶ್ರೀ ನಾರಾಯಣಸ್ವಾಮಿಗೆ ಮಹಾಭಿಷೇಕ -ಪುಷ್ಪಯಾಗ- ಕತ್ತಲುಪ್ರದಕ್ಷಣೆ- ಹನುಮಂತವಾಹನ- ಉದ್ವಾಸನಪ್ರಬಂಧ, ೨೮ ರಂದು ಶ್ರೀ ಅಮ್ಮನವರಿಗೆ ಮತ್ತು ಶ್ರೀಯೋಗಾನರಸಿಂಹಸ್ವಾಮಿಗೆ ಮಹಾಭಿಷೇಕ- ಶೇರ್ತಿಸೇವೆ -ಕೊಡೈತಿರುನಾಳ್ ಉತ್ಸವ ಪ್ರಾರಂಭವಾಗುವುದು ಎಂದು ಪ್ರಕಟಣೆ ತಿಳಿಸಿದೆ.