Friday, June 20, 2025
Google search engine

Homeಸ್ಥಳೀಯಅಲ್ಪಸಂಖ್ಯಾತರ ಮೀಸಲಾತಿ ಶೇ.15ಕ್ಕೆ ಏರಿಕೆ: ಕಾಂಗ್ರೆಸ್ ತುಷ್ಟಿಕರಣದಲ್ಲಿದೆ: ಹೇಮಾ ನಂದೀಶ್ ವಾಗ್ದಾಳಿ

ಅಲ್ಪಸಂಖ್ಯಾತರ ಮೀಸಲಾತಿ ಶೇ.15ಕ್ಕೆ ಏರಿಕೆ: ಕಾಂಗ್ರೆಸ್ ತುಷ್ಟಿಕರಣದಲ್ಲಿದೆ: ಹೇಮಾ ನಂದೀಶ್ ವಾಗ್ದಾಳಿ

ಮೈಸೂರು: ರಾಜ್ಯ ಕಾಂಗ್ರೆಸ್ ಸರ್ಕಾರ ವಸತಿ ಯೋಜನೆಯಲ್ಲಿ ಅಲ್ಪಸಂಖ್ಯಾತರರಿಗೆ ಈ ಹಿಂದೆ ಇದ್ದ ಶೇ. 10 ಮೀಸಲಾತಿಯನ್ನು ಈಗ ರಾಜ್ಯ ಸರ್ಕಾರವು ಶೇ. 15 ಕ್ಕೆ ಏರಿಸಿದೆ. ಸರ್ಕಾರ ಕೇವಲ ಅಲ್ಪಸಂಖ್ಯಾತರ ತುಷ್ಟಿಕರಣ ಮತ್ತು ಓಲೈಕೆಯಲ್ಲಿ ತೊಡಗಿದೆ ಎಂದು ಮೈಸೂರು ನಗರ ಬಿಜೆಪಿ ಉಪಾಧ್ಯಕ್ಷರಾದ ಹೇಮಾ ನಂದೀಶ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಹಿಂದೂ ಸಮಾಜದಲ್ಲಿ ಎಲ್ಲರೂ ಸ್ಥಿತಿವಂತರಿಲ್ಲ. ಈಗಲೂ ಸಹ ಒಂದು ತುತ್ತಿಗಾಗಿ ಪರದಾಡುವವರು ಸಾಕಷ್ಟು ಜನ ಇದ್ದಾರೆ. ಅದನ್ನು ಸರಕಾರ ಅರ್ಥ ಮಾಡಿಕೊಳ್ಳಬೇಕು ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗಿನಿಂದಲೂ ಪ್ರತಿಯೊಂದು ವಿಷಯದಲ್ಲೂ ಅಲ್ಪಸಂಖ್ಯಾತರ ಜಪ ಮಾಡುತ್ತಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಕಾಂಗ್ರೆಸ್ ಸರ್ಕಾರ ತಪ್ಪು ಮಾಡುತ್ತಿದೆ. ರಾಜ್ಯದಲ್ಲಿ ಒಂದು ತರ ತುಘಲಕ್ ಸರ್ಕಾರ ನಡೆಯುತ್ತಿದೆ. ನಿಮ್ಮ ಎಲ್ಲ ನಿರ್ಧಾರಗಳನ್ನು ರಾಜ್ಯದ ಜನ ಒಪ್ಪುವುದಿಲ್ಲ ಎನ್ನುವುದನ್ನು ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿ ಗಳು ತಿಳಿದುಕೊಳ್ಳಬೇಕು ಎಂದು ಹೇಳಿದರು.

RELATED ARTICLES
- Advertisment -
Google search engine

Most Popular