ಬೆಂಗಳೂರು: ರಾಜಕೀಯದಲ್ಲಿ ಯಾರು ಸನ್ಯಾಸಿಗಳಲ್ಲ ಎಂದು ಹೇಳಿದ ಶಾಸಕ ಲಕ್ಷ್ಮಣ್ ಸವದಿ, ಸಚಿವ ಸ್ಥಾನದ ಆಸೆಯನ್ನು ಬಹಿರಂಗಪಡಿಸಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವೇಳೆ, ಡಿಸೆಂಬರ್ನಲ್ಲಿ ಸಂಪುಟ ವಿಸ್ತರಣೆ ಆಗುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದರು. ಡಿಸೆಂಬರ್ ಬಂದಾಗ ಅದನ್ನ ಚರ್ಚೆ ಮಾಡೋಣ. ರಾಜಕಾರಣದಲ್ಲಿ ಯಾರು ಸನ್ಯಾಸಿಗಳಲ್ಲ. ನನ್ನಿಂದ ಕಾಂಗ್ರೆಸ್ಗೆ ಲಾಭ ಆಗಿದೆ. ಕಾಂಗ್ರೆಸ್ನಿಂದ ನನಗೂ ಲಾಭ ಆಗಿದೆ. ಸಚಿವ ಸಂಪುಟ ವಿಸ್ತರಣೆ ಬಗ್ಗೆ ನನಗೆ ಗೊತ್ತಿಲ್ಲ. ಸಿಎಂ ಅವರಿಗೆ ಕೇಳಿ ಎಂದಿದ್ದಾರೆ.
ರಾಜಕೀಯದಲ್ಲಿ ಎಲ್ಲರೂ ಅಪೇಕ್ಷಿತರೇ. ಎಲ್ಲರೂ ಏನಾದ್ರೂ ಆಗಬೇಕು, ಮಂತ್ರಿ, ಸಿಎಂ, ಆಗಬೇಕು ಅಂತ ಆಸೆ ಇದ್ದೇ ಇರುತ್ತದೆ. ನನಗೆ ಸಚಿವ ಸ್ಥಾನ ಕೊಟ್ಟರೆ ನಿಭಾಯಿಸುತ್ತೇನೆ. ಕಾಂಗ್ರೆಸ್ ಪಕ್ಷ ನನ್ನನ್ನ ಬಳಸಿಕೊಳ್ತಿದೆ. ಬಳಸಿಕೊಳ್ಳಬೇಕು ಎಂದು ಹೇಳ್ತೀನಿ ಅಂತ ಸಚಿವ ಸ್ಥಾನದ ಆಸೆ ಬಿಚ್ಚಿಟ್ಟಿದ್ದಾರೆ.
ಆರ್. ಅಶೋಕ್ ನೀಡಿದ “ನವೆಂಬರ್ನಲ್ಲಿ ಸಿಎಂ ಬದಲಾಗುತ್ತಾರೆ” ಎಂಬ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಸವದಿ, “ಅಶೋಕ್ ಅವರನ್ನು ಬಬಲಾದಿ ಮಠಕ್ಕೆ ಕಳಿಸಿ, ಭವಿಷ್ಯ ಕಲಿತು ಬನ್ನಿ ಎಂದು ಹೇಳಬೇಕು. ಅಲ್ಲಿ ಕಾಲಜ್ಞಾನ ಉಂಟು” ಎಂದು ಲೇವಡಿ ಮಾಡಿದ್ದಾರೆ.