Friday, May 30, 2025
Google search engine

Homeರಾಜ್ಯಯಾರು ಯಾರನ್ನ ಯಾವಾಗ ಖರೀದಿಸಿದಲು ಯತ್ನಿಸಿದರು? ಸಾಕ್ಷಿಗಳು ಇದ್ದರೆ ದೂರು ಕೊಡಿ : ಸಿಟಿ ರವಿ...

ಯಾರು ಯಾರನ್ನ ಯಾವಾಗ ಖರೀದಿಸಿದಲು ಯತ್ನಿಸಿದರು? ಸಾಕ್ಷಿಗಳು ಇದ್ದರೆ ದೂರು ಕೊಡಿ : ಸಿಟಿ ರವಿ ಕಿಡಿ

ಬೆಂಗಳೂರು : ಕಾಂಗ್ರೆಸ್ಸಿನ 50 ಶಾಸಕರಿಗೆ ಬಿಜೆಪಿ 50 ಕೋಟಿ ರೂಪಾಯಿ ಆಫರ್ ನೀಡಿದೆ ಎಂದು ಸಿಎಂ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಗಂಭೀರವಾದ ಆರೋಪ ಮಾಡಿದ್ದಾರೆ. ಈ ಒಂದು ಆರೋಪಕ್ಕೆ ಬಿಜೆಪಿ ಎಂಎಲ್ಸಿ ಸಿಟಿ ರವಿ ತಿರುಗೇಟು ನೀಡಿದ್ದು, ಶಾಸಕರನ್ನು ಖರೀದಿ ಮಾಡೋಕೆ ಅವರೇನು ಕುದುರೆಯೋ ಕತ್ತೆಯೋ ಅಥವಾ ದನಾನೋ ಎಂದು ಕಿಡಿಕರಿದ್ದಾರೆ.

ಯಾರು ಯಾರನ್ನ ಯಾವಾಗ ಖರೀದಿಸಿದಲು ಯತ್ನಿಸಿದರು? ಸಾಕ್ಷಿಗಳು ಇದ್ದರೆ ದೂರು ಕೊಡಿ ಸಿಎಂ ಸ್ಥಾನದ ಜವಾಬ್ದಾರಿ ಮರೆತು ಸಿದ್ದರಾಮಯ್ಯ ಆರೋಪಿಸುತ್ತಿದ್ದಾರೆ. ಬಿಜೆಪಿ ಮೇಲೆ ತಪ್ಪ ಅಭಿಪ್ರಾಯ ಮೂಡಿಸಲು ಷಡ್ಯಂತರ ನಡೆಸುತ್ತಿದ್ದಾರೆ. ನಿಮ್ಮ ಇತ್ತೀಚಿನ ನಡವಳಿಕೆ ನೋಡಿದಾಗ ದಿನತ್ಯ ಸುಳ್ಳು ಹೇಳುವುದು ನಿಮ್ಮ ರಾಜಕೀಯ ಬದುಕಿನ ಭಾಗ ಆಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಸುಳ್ಳು ಹೇಳದೇ ಇದ್ದರೆ ನಿಮಗೆ ತಿಂದ ಅನ್ನ ಜೀರ್ಣ ಆಗಲ್ಲ. ಸುಳಿನಿಂದಲೇ ನಿಮ್ಮ ರಾಜಕೀಯ ಬದುಕು ಪ್ರಾರಂಭವಾಗಿದೆ. ಸುಳಿನಿಂದಲೇ ನಿಮ್ಮ ದಿನಚರಿ ಮುಕ್ತಾಯ ಆಗುತ್ತದೆ ಅನಿಸುತ್ತದೆ. ನಮ್ಮ ಪಕ್ಷದ ಮೇಲೆ ಸುಳ್ಳು ಆರೋಪ ಮಾಡಿದ್ದೀರಿ. ನಿಮ್ಮ ಬಳಿ 137 ಶಾಸಕರು ಇದ್ದಾರೆ ಅಲುಗಾಡಿಸಲು ಆಗಲ್ಲ. ಹೊರಗಡೆಯಿಂದ ನಿಮ್ಮನ್ನು ಅಲುಗಾಡಿಸಲು ಯಾರಿಗೂ ಆಗಲ್ಲ. ನಿಮ್ಮ ಪಕ್ಷದಲ್ಲಿ ಯಾರಾದರೂ ಅಲುಗಾಡಿಸಬೇಕೆ ಹೊರತು, ಬೇರೆಯವರಿಂದ ಹಲುಗಾಡಿಸಲು ಸಾಧ್ಯವಿಲ್ಲ ಎಂದು ಸಿಟಿ ರವಿ ಹೇಳಿದರು.

RELATED ARTICLES
- Advertisment -
Google search engine

Most Popular