Tuesday, June 17, 2025
Google search engine

Homeರಾಜ್ಯಸುದ್ದಿಜಾಲವಿಶ್ವ ಪರಿಸರ ದಿನಾಚರಣೆ: ಮೂಕಾಂಬಿಕಾ ಸಮೃದ್ದಿ ಬಡಾವಣೆಯಲ್ಲಿ ಗಿಡ ನೆಡುವ ಕಾರ್ಯಕ್ರಮ

ವಿಶ್ವ ಪರಿಸರ ದಿನಾಚರಣೆ: ಮೂಕಾಂಬಿಕಾ ಸಮೃದ್ದಿ ಬಡಾವಣೆಯಲ್ಲಿ ಗಿಡ ನೆಡುವ ಕಾರ್ಯಕ್ರಮ

ಮೈಸೂರು: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಮೂಕಾಂಬಿಕಾ ಸಮೃದ್ದಿ ಬಡಾವಣೆ ನಿವಾಸಿಗಳ ಹಿತರಕ್ಷಣ ಸಮಿತಿ, ಸಂತೃಪ್ತಿ ಕುಟುಂಬ ಹಾಗೂ ಶ್ರೀರಾಂಪುರ ಪಟ್ಟಣ ಪಂಚಾಯಿತಿ ಸಂಯುಕ್ತಾಶ್ರಯದಲ್ಲಿ ಮೂಕಾಂಬಿಕಾ ಸಮೃದ್ದಿ ಬಡಾವಣೆಯಲ್ಲಿ ಗಿಡಗಳನ್ನು ನೆಡುವ ಕಾರ್ಯಕ್ರಮ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮೂಕಾಂಬಿಕಾ ಸಮೃದ್ದಿ ಬಡಾವಣೆಯ ನಿವಾಸಿಗಳ ಹಿತರಕ್ಷಣ ಸಮಿತಿಯ ಕಾರ್ಯದರ್ಶಿ ಪುನೀತ್ ಜಿ ಕೂಡ್ಲೂರು ಪರಿಸರ ರಕ್ಷಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ ಪರಿಸರದ ನಾಶದಿಂದ ಆದ ಪರಿಣಾಮ ನಾವು ಈಗಾಗಲೇ ಅನುಭವಿಸಿದ್ದೇವೆ ಬಿಸಿಲಿನ ತಾಪಮಾನ ಏರಿಕೆಯಿಂದ ಪರಿಸರ ಈಗಾಗಲೇ ನಮಗೆ ಪಾಠ ಕಲಿಸಿದೆ ಮಳೆ‌ ಮತ್ತು ಮರ ಎರಡು ಪರಸ್ಪರ ಅವಲಂಬಿಗಳು ಮೂರು ದಿಂದ ಮಳೆ‌ ಹಾಗೂ ಮಳೆಯಿಂದ ಮರ ಗಿಡ. ಗಿಡಗಳನ್ನು ನೆಟ್ಟು ಮರಗಳನ್ನು ಬೆಳಿಸಿದರೆ ಮಳೆ ಸಮಯಕ್ಕೆ ಸರಿಯಾಗಿ ಬರುತ್ತದೆ ಇಲ್ಲದಿದ್ದರೆ ಮಳೆ ಇಲ್ಲದೆ ಪರೆದಾಡುವ ಸ್ಥಿತಿ ಬರುತ್ತದೆ.‌ ಮಳೆ‌ ಇದ್ದರೆ ಬೆಳೆ , ಬೆಳೆ ಇದ್ದರೆ ಇಳೆ, ಇಳೆ‌ ಇದ್ದರೆ ಈ ಜೀವಕುಲ ಎಲ್ಲದಕ್ಕೂ ಮೂಲವೇ ಪ್ರಕೃತಿ ಅದರ ಜವಾಬ್ದಾರಿ ನಮ್ಮದು ಎಂದು ತಿಳಿಸಿದರು.‌

ಈ ಸಂದರ್ಭದಲ್ಲಿ ಮಾತನಾಡಿದ ಸಸ್ಯಶಾಸ್ತ್ರ ತಜ್ಞರಾದ ಪ್ರೊ ಮಹೇಶಪ್ಪ, ಪರಿಸರ ಎನ್ನುವುದು ನಮಗೆ ತಾಯಿಯ ಸಮಾನ, ತಾಯಿಯನ್ನು ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ, ಸಸ್ಯಗಳ ಪ್ರಭೇದಗಳನ್ನು ಅರಿತು ಅದರ ಉಪಯೋಗ ತಿಳಿದರೆ ನಾವು ಆಸ್ಪತ್ರೆಯ ಮುಖ ನೋಡುವುದೇ ಬೇಡ ಎಲ್ಲಾ ಬಗೆಯ ಔಷಧಗಳನ್ನು ನಾವು ಗಿಡಗಳಿಂದಲೇ ಪಡೆಯಬಹುದು ನಮ್ಮ ನಮ್ಮ ಮನೆಗಳಲ್ಲಿ ಒಂದಷ್ಟು ಗಿಡಗಳಿಗೂ ನಾವು ಜಾಗವನ್ನು ಮೀಸಲಿಡಬೇಕು. ಹೂವಿನ ಗಿಡ, ಔಷದಿ ಗಿಡ, ಹೆಣ್ಣಿನ ಗಿಡಗಳನ್ನು ನೆಟ್ಟು ಪೋಷಿಸುವ ಮನಸ್ಥಿತಿ ಬೆಳಿಸಿಕೊಳ್ಳಬೇಕು ಇದರಿಂದ ನಮಗೂ, ಪ್ರಾಣಿ ಪಕ್ಷಿಗಳಿಗೂ ಪರಿಸರಕ್ಕೂ ಅನುಕೂಲ. ಉದ್ಯಾನವನಗಳಲ್ಲಿ, ರಸ್ತೆ ಬದಿಗಳಲ್ಲಿ ಹೆಚ್ಚು ಗಿಡಗಳನ್ನು ನೆಡಬೇಕು ನೆಟ್ಟು ಪೋಷಿಸಬೇಕು ಇದರಿಂದ ಜಾಗವೂ ಸುಂದರವಾಗಿ ಕಾಣುತ್ತದೆ ಹಾಗೂ ಆಮ್ಲಜನಕದ ಉತ್ಪಾದನೆಯು ಹೆಚ್ಚುತ್ತದೆ ಎಂದು ತಿಳಿಸಿದರು.

ಸಂತೃಪ್ತಿ ಕುಟುಂಬದ ಶಿವಕುಮಾರ್ ಮಗನ ಜನ್ಮದಿನಾಚರಣೆ ಅಂಗವಾಗಿ ಒಂದು ಗಿಡ ನೆಟ್ಟೆವು ಅದರಿಂದ ಪ್ರೇರಿತರಾಗಿ ಮತ್ತಷ್ಟು ಗಿಡಗಳನ್ನು ಸಂತೃಪ್ತಿ ಕುಟುಂಬದಿಂದ ಮೈಸೂರಿನಾದ್ಯಂತ ಹಲವಾರು ಗಿಡಗಳನ್ನು ನೆಟ್ಟು ಅದನ್ನು ಪೋಷಿಸುವ ಜವಾಬ್ದಾರಿ ಸ್ಥಳಿಯ ನಿವಾಸಿಗಳಿಗೆ ನೀಡುತ್ತಿದ್ದೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮೂಕಾಂಬಿಕಾ ಸಮೃದ್ದಿ ಬಡಾವಣೆಯ ನಿವಾಸಿಗಳ ಹಿತರಕ್ಷಣ ಸಮಿತಿ ಅಧ್ಯಕ್ಷರಾದ ಶ್ರೀಯುತ ಕೆ.ಆರ್.ಗಣೇಶ್, ಉಪಾಧ್ಯಕ್ಷ ರಾಮಕೃಷ್ಣ, ಕಾರ್ಯದರ್ಶಿ ಪುನೀತ್ ಜಿ, ನಿರ್ದೇಶಕರಾದ ಮಹೇಶಪ್ಪ, ರಾಜಶೇಖರ ಆರಾಧ್ಯ, ಸಂತೃಪ್ತಿ ಕುಟುಂಬದ ಮೂರ್ತಿ, ಶಿವಕುಮಾರ್, ಮಮತ, ನೀತು,  ಲೋಕೇಶ್ ಶ್ರೀರಾಂಪುರ ಪಟ್ಟಣ ಪಂಚಾಯಿತಿ ಆರೋಗ್ಯಾಧಿಕಾರಿ ಪರಮೇಶ್ವರ್ ಹಾಜರಿದ್ದರು.

RELATED ARTICLES
- Advertisment -
Google search engine

Most Popular