Friday, June 20, 2025
Google search engine

Homeರಾಜ್ಯಸುದ್ದಿಜಾಲ'ಮನೆ ಮನಗಳಲ್ಲಿ ಹಾರಲಿ ಕನ್ನಡ ಬಾವುಟ' ಜನಧ್ವನಿ ಫೌಂಡೇಶನ್ ಅಭಿಯಾನಕ್ಕೆ ಯದುವೀರ ಚಾಲನೆ

‘ಮನೆ ಮನಗಳಲ್ಲಿ ಹಾರಲಿ ಕನ್ನಡ ಬಾವುಟ’ ಜನಧ್ವನಿ ಫೌಂಡೇಶನ್ ಅಭಿಯಾನಕ್ಕೆ ಯದುವೀರ ಚಾಲನೆ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ. ನಗರ: ಕರ್ನಾಟಕವು ಏಕೀಕರವಾಗಿ ೫೦ ವರ್ಷಗಳನ್ನು ಪೂರೈಸಿದ ಹಿನ್ನಲೆಯಲ್ಲಿ ಕನ್ನಡ ಬಾವುಗಳನ್ನು ಹಂಚುವ ಮೂಲಕ ಮನೆ ಮನೆಯ ಮೇಲೆ ಕನ್ನಡ ಬಾವುಟ ಹಾರಿಸುವ ಮೂಲಕ ನವೆಂಬರ್ ೧ ರಂದು ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಬೇಕು ಎಂಬ ನಿಟ್ಟಿನಲ್ಲಿ ಜನಧ್ವನಿ ಫೌಂಡೇಶನ್ ನಿಂದ ಮಾಡುತ್ತಿರುವ ಮನೆ ಮನಗಳಲ್ಲಿ ಹಾರಲಿ ಕನ್ನಡ ಬಾವುಟ ಅಭಿಯಾನಕ್ಕೆ ಮೈಸೂರು ಸಂಸ್ಥಾನದ ಮಹಾರಾಜರು ಇಂದು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಇದೊಂದು ಒಳ್ಳೆಯ ರೀತಿಯ ಕಾರ್ಯಕ್ರಮ ಪ್ರತಿಯೊಬ್ಬರಲ್ಲೂ ಈ ರೀತಿ ಕನ್ನಡ ಪ್ರೇಮ ಮೂಡಿ ಬರಬೇಕು ಎಂದು ಹರ್ಷ ವ್ಯಕ್ತಪಡಿಸಿದರು ಇದೆ ಸಂದರ್ಭದಲ್ಲಿ ಮಾತನಾಡಿದ ಫೌಂಡೇಶನ್ ಅಧ್ಯಕ್ಷ ,ವಕೀಲ ಆಯರಹಳ್ಳಿ ಪ್ರವೀಣ್ ಕನ್ನಡ ನಮ್ಮ ಅಶ್ಮೀತೆ ಧ್ವಜ ಹಂಚುವ ಕಾರ್ಯಕ್ರಮ ಮಾಡುವುದು ನಮ್ಮ ಸಂಸ್ಥೆಯ ಕನಸು ಈ ಕನಸಿಗೆ ನಮ್ಮ ಮಹಾರಾಜರಿಂದ ಚಾಲನೆ ಸಿಕ್ಕಿರುವುದು ತುಂಬಾ ಖುಷಿ ತಂದಿದೆ ನಾವೆಲ್ಲರೂ ನವೆಂಬರ್ ೧ ಕನ್ನಡಿಗರಾಗದೆ ನಂಬರ್ ೧ ಕನ್ನಡಿಗರಾಗೋಣ ಸಾವಿರಾರು ವರ್ಷಗಳ ಇತಿಹಾಸವಿರುವ ನಮ್ಮ ಭಾಷೆಯನ್ನು ಉಳಿಸೋಣ ಎಂದರು ಇದೆ ವೇಳೆ ಯುವ ಮುಖಂಡರಾದ ಉಜ್ವಲ್ ಚಂದ್ರ , ಆಪ್ತ ಕಾರ್ಯದರ್ಶಿಗಳಾದ ಮಧು ರವರು ಉಪಸ್ಥಿತರಿದ್ದರು

RELATED ARTICLES
- Advertisment -
Google search engine

Most Popular