Sunday, June 1, 2025
Google search engine

Homeರಾಜ್ಯಸುದ್ದಿಜಾಲಗ್ಯಾರಂಟಿ ಯೋಜನೆಯಲ್ಲಿ ಯಳಂದೂರು ಶೇ. 99 ರಷ್ಟು ಪ್ರಗತಿ: ಪ್ರಭುಪ್ರಸಾದ್

ಗ್ಯಾರಂಟಿ ಯೋಜನೆಯಲ್ಲಿ ಯಳಂದೂರು ಶೇ. 99 ರಷ್ಟು ಪ್ರಗತಿ: ಪ್ರಭುಪ್ರಸಾದ್

ಯಳಂದೂರು: ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ನಮ್ಮ ಜಿಲ್ಲೆ ಇಡೀ ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದು ಚಾಮರಾಜನಗರ ಜಿಲ್ಲೆಯಲ್ಲಿ ಯಳಂದೂರು ಶೇ. ೯೯ ರಷ್ಟು ಪ್ರಗತಿ ಸಾಧಿಸುವ ಮೂಲಕ ಗಮನ ಸೆಳೆದಿದೆ ಎಂದು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಅಧ್ಯಕ್ಷ ಕಿನಕಹಳ್ಳಿ ಎಸ್. ಪ್ರಭುಪ್ರಸಾದ್ ತಿಳಿಸಿದರು.

ಅವರು ಶುಕ್ರವಾರ ಪಟ್ಟಣದಲ್ಲಿರುವ ತಮ್ಮ ಕಚೇರಿಯಲ್ಲಿ ನಡೆದ ಸದಸ್ಯರು ಹಾಗೂ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಮಾಹಿತಿ ನೀಡಿದರು. ನಮ್ಮ ತಾಲೂಕು ಚಿಕ್ಕ ತಾಲೂಕಾಗಿದೆ. ರಾಜ್ಯ ಸರ್ಕಾರ ೫ ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ನಾವು ಪ್ರಗತಿಯನ್ನು ಸಾಧಿಸಿದ್ದೇವೆ. ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ತಾಲೂಕಿನಲ್ಲಿ ೨೨,೪೯೯ ಮಂದಿ ಫಲಾನುಭವಿಗಳಿದ್ದಾರೆ.

ಇದರಲ್ಲಿ ೨೦,೪೩೯ ಮಂದಿಗೆ ಈಗಾಗಲೇ ಏಪ್ರಿಲ್ ತಿಂಗಳ ಹಣ ಜಮೆಯಾಗಿದ್ದು ಈ ಪ್ರಕ್ರಿಯೆ ನಡೆಯುತ್ತಿದ್ದು ಉಳಿದವರಿಗೂ ಶೀಘ್ರದಲ್ಲೇ ಹಣ ಬರಲಿದೆ. ಕೇವಲ ೫ ಮಂದಿಗೆ ಮಾತ್ರ ಎನ್‌ಪಿಸಿಐ ಇನ್‌ಆಕ್ಟಿವ್ ಆಗಿದೆ. ಇವರಿಗೆ ಇ ಕೆವೈಸಿ ಮಾಡಿಸಲು ಕ್ರಮ ವಹಿಸಲಾಗಿದೆ. ಗೃಹಜ್ಯೋತಿ ಯೋಜನೆಯಲ್ಲಿ ೧೯,೪೧೨ ಮಂದಿ ಅರ್ಹ ಗ್ರಾಹರಿದ್ದಾರೆ. ಇದರಲ್ಲಿ ಒಟ್ಟು ೧೯,೩೫೫ ಮಂದಿ ಈಗಾಗಲೇ ನೋಂದಣಿ ಮಾಡಿಸಿದ್ದು ಶೇ. ೯೯.೭೧ ರಷ್ಟು ಪ್ರಗತಿ ಸಾಧಿಸಲಾಗಿದೆ. ಯುವನಿಧಿ ಯೋಜನೆಯಡಿಯಲ್ಲಿ ಒಟ್ಟು ೩೧೧ ಮಂದಿ ಇದ್ದು ಇವರಿಗೆ ನಿರುದ್ಯೋಗ ಭತ್ಯೆಯನ್ನು ನೀಡಲಾಗುತ್ತಿದ್ದು ಕಳೆದ ಫೆಬ್ರವತಿ ಅಂತ್ಯಕ್ಕೆ ತಾಲೂಕಿನಲ್ಲಿ ಇದಕ್ಕಾಗಿ ೩೬,೨೮,೫೦೦ ರೂ.ಗಳನ್ನು ಪಾವತಿಸಲಾಗಿದೆ. ಅಲ್ಲದೆ ಅನ್ನಭಾಗ್ಯದಲ್ಲೂ ಶೇ. ೧೦೦ ರಷ್ಟು ಪ್ರಗತಿಯನ್ನು ಸಾಧಿಸಲಾಗಿದೆ. ಶಕ್ತಿ ಯೋಜನೆಯಡಿಯಲ್ಲಿ ಲಕ್ಷಾಂತರ ಮಂದಿ ಮಹಿಳೆಯರು ಕೆಸ್ಸಾರ್ಟಿಸಿ ಬಸ್‌ನಲ್ಲಿ ಸಂಚರಿಸಿದ್ದಾರೆ.

ಮೈಸೂರಿನಿಂದ ರಾತ್ರಿ ಹೊರಡುವ ಬಸ್ ನಿಂತಿದ್ದು ಇದಕ್ಕೆ ಮತ್ತೆ ಚಾಲನೆ ನೀಡುವಂತೆ ಸಂಬಂಧಪಟ್ಟ ಡಿಪೋ ಮ್ಯಾನೇಜರ್‌ಗೆ ಪತ್ರ ಬರೆಯಲಾಗಿದೆ. ಹೊನ್ನೂರು, ಕೆಸ್ತೂರು ದುಗ್ಗಹಟ್ಟಿ ಮಾರ್ಗವಾಗಿ ಕೊಳ್ಳೇಗಾಲದಿಂದ ಯಳಂದೂರಿಗೆ ಬಸ್ ಓಡಿಸುವಂತೆಯೂ ಪತ್ರ ಬರೆಯಲಾಗಿದೆ ಎಂದು ಮಾಹಿತಿ ನೀಡಿದರು.

ಸಮಿತಿಯ ಸದಸ್ಯರಾದ ಎಂ. ಶಿವಣ್ಣ, ನಂಜುಂಡಸ್ವಾಮಿ, ಭಾಗ್ಯ, ಅನಿತಾ, ಶಿವರಾಜು, ಕೆ. ವಿರೂಪಾಕ್ಷ, ವೈ.ಆರ್. ಮಂಜುನಾಥ, ವೈ.ಎಂ. ನಾಗಣ್ಣ, ಅಸ್ಲಂಪಾಷ, ಡಿ. ನಾಗರಾಜು, ಎನ್. ಮಹೇಶ್ ಇಒ ಹಾಗೂ ಸಮಿತಿಯ ಸದಸ್ಯ ಕಾರ್ಯದರ್ಶಿ ಉಮೇಶ್, ಸೆಸ್ಕ್‌ನ ಎಇಇ ಲಿಂಗರಾಜು, ಶಿಶುಅಭಿವೃದ್ಧಿ ಯೋಜನಾಧಿಕಾರಿಸಕಲೇಶ್ವರ್, ಆಹಾರ ನಿರೀಕ್ಷಕ ಬಿಸಲಯ್ಯ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

ಯಳಂದೂರು ಪಟ್ಟಣದ ಗ್ಯಾರಂಟಿ ಯೋಜನೆ ಅನುಷ್ಟಾನ ಸಮಿತಿಯ ಕಚೇರಿಯಲ್ಲಿ ಶುಕ್ರವಾರ ನಡೆದ ಅಧಿಕಾರಿಗಳು ಹಾಗೂ ಸಮಿತಿಯ ಸದಸ್ಯರ ಸಭೆಯಲ್ಲಿ ಅಧ್ಯಕ್ಷ ಕಿನಕಹಳ್ಳಿ ಪ್ರಭುಪ್ರಸಾದ್ ಮಾತನಾಡಿದರು. ಇಒ ಉಮೇಶ್ ಇದ್ದರು.

RELATED ARTICLES
- Advertisment -
Google search engine

Most Popular