ಚಾಮರಾಜನಗರ: ನಿರೋಗಿಯಾಗಿ, ಆತ್ಮ ಸುಖ ಹಾಗೂ ಸಾಕ್ಷಾತ್ಕಾರ ಪಡೆಯಲು ಉತ್ಕೃಷ್ಟವಾದ ಜ್ಞಾನವೇ ಯೋಗ. ಯೋಗದಿಂದ ಅಧ್ಯಾತ್ಮಿಕ ಶಕ್ತಿಯ ಜಾಗೃತಿಯಾಗಿ ಮನಸ್ಸು ಮತ್ತು ದೇಹ ನಿಯಂತ್ರಣ ಕೊಳಪಟ್ಟು ಉತ್ತುಂಗ ಆರೋಗ್ಯ,ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಸಾಧ್ಯ ಎಂದು ಸಂಸ್ಕೃತಿ ಚಿಂತಕ, ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತ ಸುರೇಶ್ ಎನ್ ಋಗ್ವೇದಿ ತಿಳಿಸಿದರು.
ಅವರು ಜೈಹಿಂದ್ ಪ್ರತಿಷ್ಠಾನ ಹಾಗು ಋಗ್ವೇದಿ ಯೂತ್ ಕ್ಲಬ್, ಜಿಲ್ಲಾ ಯುವ ಸಂಘಟನೆಗಳ ಒಕ್ಕೂಟ ಜೈಹಿಂದ್ ಕಟ್ಟೆಯಲ್ಲಿ ಹಮ್ಮಿಕೊಂಡಿದ್ದ ಅಂತರ ರಾಷ್ಟ್ರೀಯ ಯೋಗ ದಿನದಲ್ಲಿ ಯೋಗ ಜಾಗೃತಿ, ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯೋಗದ ಅಭ್ಯಾಸದಿಂದ ಬದುಕಿನ ಸೌಂದರ್ಯವನ್ನು ಅರಿ ಯಬಹುದು. ಪ್ರಾಣಾಯಾಮ ಯೋಗ ಧ್ಯಾನದಿಂದ ನಿರ್ದಿಷ್ಟ ನಿರ್ನಾಳ ಗ್ರಂಥಿಗಳ ಶ್ರಾವಗಳನ್ನು ನಿಯಮಿತಗೊಳಿಸಿ ವಿಶೇಷವಾಗಿ ಯುವಕರ ವಿದ್ಯಾರ್ಥಿಗಳ ಹಾಗೂ ಮಕ್ಕಳ ವರ್ತನೆಗಳನ್ನು ಅರ್ಥ ಮಾಡಿಕೊಂಡು ಪರಿವರ್ತಿಸುವಂತಹ ಪ್ರಭಾವಿ ಮಾರ್ಗ ಯೋಗದಲ್ಲಿದೆ ಯೋಗದಿಂದ ಯುವಶಕ್ತಿ ಜಾಗೃತಿ ಮಕ್ಕಳಲ್ಲಿ ಏಕಾಗ್ರತೆ ಗುಣಶೀಲ ವರ್ತನೆ ಉತ್ತಮ ಸಂಸ್ಕಾರ ಹಾಗೂ ನಡವಳಿಕೆಗಳ ಸಂಜೀವಿನಿ ಯೋಗವಾಗಿದೆ. ಇಡೀ ಪ್ರಪಂಚದಲ್ಲಿ ಇಂದು ಯೋಗಜಾಕೃತಿ ಭಾರತದಿಂದ ಆಗಿದ್ದು ಭಾರತವು ಯೋಗದ ಮೂಲಕ ವಿಶ್ವಕ್ಕೆ ಅಮೂಲ್ಯವಾದ ಕೊಡುಗೆಯನ್ನು ನೀಡಿ ಸಮಸ್ತ ಮಾನವ ಕಲ್ಯಾಣಕ್ಕೆ ಶ್ರಮಿಸುತ್ತಿದೆ ಯೋಗವು ನಮ್ಮೆಲ್ಲರ ಉಸಿರಾಗಿ ಪ್ರತಿನಿತ್ಯ ಅಭ್ಯಾಸ ಮೂಲಕ ಸಮಾಜದ ಪರಿವರ್ತನೆಯನ್ನು ಮಾಡಬಹುದು. ಯೋಗವು ಸೂಪರ್ ವರ್ತನೆಯನ್ನು ಉಂಟು ಮಾಡಿ ತನ್ನ ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಂಡು ಉತ್ತಮ ಕಾರ್ಯಗಳನ್ನು ನೆರವೇರಿಸಲು ಸಮಾಜ ಮುಖಿಯಾಗಿ ಅರ್ಪಿಸಿಕೊಳ್ಳಲು ಅವಕಾಶ ನೀಡುತ್ತದೆ. ಯುವಕರು ಹಾಗೂ ವಿದ್ಯಾರ್ಥಿಗಳು ಬಾಲ್ಯದಿಂದಲೂ ಯೋಗದ ಅಭ್ಯಾಸ ಹಾಗೂ ಸಂತೋಷದಿಂದ ಪಾಲ್ಗೊಳ್ಳುವ ಸ್ಪೂರ್ತಿಯನ್ನು ಬೆಳೆಸಿಕೊಳ್ಳಿ ಆಧುನಿಕ ವ್ಯವಸ್ಥೆಯ ದುಷ್ಟ ಚಟಗಳಿಗೆ ಬಲಿಯಾಗದೆ ಯೋಗವನ್ನು ಅಭ್ಯಾಸ ಮಾಡಿ ಯೋಗದಿಂದ ಧರ್ಮ, ಧರ್ಮದಿಂದ ದೇಶ,ದೇಶಗಳಿಂದ ವಿಶ್ವ ಪ್ರಬಲವಾಗುವುದು. ಭಾರತೀಯ ಯೋಗವನ್ನು ಜಾಗೃತಗೊಳಿಸೋಣ. ಸಾಧ್ಯವಾದಷ್ಟು ಅಭ್ಯಾಸ ಮಾಡೋಣ ಎಂದು ಋಗ್ವೇದಿ ತಿಳಿಸಿದರು.
ಜಿಲ್ಲಾ ಯುವ ಸಂಘಟನೆಗಳ ಒಕ್ಕೂಟದ ಕಾರ್ಯದರ್ಶಿಯಾದ ದೊಡ್ಡಮೋಳೆ ಸುರೇಶ್ ಮಾತನಾಡಿ, ನಗರಗಳಿಗೆ ಸೀಮಿತವಾಗಿದ್ದ ಯೋಗವು ಇಂದು ಹಳ್ಳಿ ಹಳ್ಳಿ ಗಳಲ್ಲೂ ಪ್ರಚಾರವಾಗಿ, ಕಲಿಯುವ ಮನಸ್ಸು ಮೂಡಿದೆ. ಯುವಕರಿಗೆ ಯೋಗ ಅಭ್ಯಾಸ ಬಹಳ ಪರಿಣಾಮಕಾರಿಯಾಗಿ ಪ್ರಭಾವ ಬೀರುತ್ತದೆ. ಶಿಕ್ಷಣ, ಆರೋಗ್ಯ,ಉತ್ತಮ ಆಹಾರದ ಸಮತೋಲನ ಸಾಧ್ಯವಾಗುತ್ತದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾದ ಶಿವಸ್ವಾಮಿ ರವರು ಯೋಗ ಜಾಗೃತಿ ದಿನದ ಉದ್ಘಾಟನೆಯನ್ನು ನೆರವೇರಿಸಿ, ಯುವ ಸಂಘಟನೆ, ಋಗ್ವೇದಿ ಯೂತ್ ಕ್ಲಬ್ .ಹಮ್ಮಿಕೊಂಡಿರುವ ಭಾರತೀಯ ಯೋಗದ ಕೊಡುಗೆಗಳ ಹಾಗು ಮಹತ್ತ್ವದ ಕುರಿತು ಅರಿವು ಹಾಗು ಜಾಗೃತಿ ಮೂಡಿಸುವ ಕಾರ್ಯಕ್ರಮ ಯಶಸ್ವಿಯಾಗಲಿ ಎಂದರು.
ಯುವಿ ಸಂಘಟನೆಗಳ ರವಿ, ಮುರುಗೇಶ, ಮಂಜುನಾಥ್,ಪ್ರಕಾಶ, ಮಹಾದೇವ, ನಂಜುಂಡಸ್ವಾಮಿ, ಶ್ರಾವ್ಯ ಋಗ್ವೇದಿ, ಗಣೇಶ,ಶ್ರೀನಿವಾಸ್ ರಕ್ಷಿತ್,ಉಪಸ್ಥಿತರಿದ್ದರು.