ಬೆಂಗಳೂರು: ತಮ್ಮ ಕುಟುಂಬದ ಸಮಸ್ಯೆ ಬಗೆಹರಿಸಿಕೊಡಿ ಎಂದು ಮಾಜಿ ಸಚಿವ ಹಾಗೂ ಚನ್ನಪಟ್ಟಣ ಕ್ಷೇತ್ರದ ಕಾಂಗ್ರೆಸ್ ಶಾಸಕ ಸಿ.ಪಿ.ಯೋಗೇಶ್ವರ್ ಅವರ ಪುತ್ರಿ ಹಾಗೂ ಪತ್ನಿ, ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರಿಗೆ ದೂರು ನೀಡಲಾಗಿದೆ.
ಬುಧವಾರ ನಗರದ ಕೆಪಿಸಿಸಿ ಕಚೇರಿಗೆ ಖುದ್ದು ಭೇಟಿ ಮಾಡಿದ ಯೋಗೇಶ್ವರ್ ಪುತ್ರಿ ನಿಶಾ ಹಾಗೂ ಮೊದಲನೇ ಪತ್ನಿ ಮಾಳವಿಕಾ ಸೋಲಂಕಿ ಅವರು, ನಮ್ಮ ತಂದೆ ಯೋಗೇಶ್ವರ್ ಅವರು ಅತ್ಯಂತ ಪ್ರಭಾವಶಾಲಿ. ಹೆಣ್ಣು ಮಕ್ಕಳಾದ ನಮಗೆ ಕಷ್ಟಗಳನ್ನು ಎದುರಿಸಲು ಸಾಧ್ಯವಾಗುತ್ತಿಲ್ಲ. ಕೋರ್ಟ್ನಲ್ಲಿಯೂ ಹೋರಾಟ ಮಾಡಬಹುದಾಗಿದೆ. ಹೀಗಾಗಿ ನಮ್ಮ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು ಎಂದು ಕೋರಿದರು.
ಶಾಸಕ ಯೋಗೇಶ್ವರ್ ಪುತ್ರಿ ನಿಶಾ, ಪತ್ನಿ ಮಾಳವಿಕಾ ಸೋಲಂಕಿ ಅವರ ದೂರನ್ನು ಸಮಾಧಾನ ಚಿತ್ತರಾಗಿ ಆಲಿಸಿದ ರಣದೀಪ್ ಸಿಂಗ್ ಸುರ್ಜೇವಾಲ ಅವರು, `ನಿಮ್ಮ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸುತ್ತೇನೆ’ ಎಂದು ಭರವಸೆ ನೀಡಿದ್ದಾರೆ.