ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ನಾವು ಒಕ್ಕಲಿಗ ಸಮುದಾಯದವರು ಎನ್ನುವ ನೀವು ಇಲ್ಲಿವರೆಗೆ ಸಮುದಾಯದ ಯಾವುದೇ ಕಾರ್ಯಕರ್ತನನ್ನು ಬೆಳೆಸಲು ಮುಂದಾಗಿಲ್ಲ ಪ್ರತಿಯೊಬ್ಬರಿಗೂ ಅನ್ಯಾಯ ಮಾಡುತ್ತಲೇ ಬಂದಿದ್ದೀರಿ ಎಂದು ವಿಧಾನ ಪರಿಷತ್ ಮಾಜಿ ಉಪಸಭಾಪತಿ ಮರಿತಿಬ್ಬೇಗೌಡ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಕೆ.ಆರ್.ನಗರ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಪಕ್ಷದ ಒಕ್ಕಲಿಗ ಸಮುದಾಯದ ಮುಖಂಡರ ಸಭೆಯನ್ನು ಉದ್ದೇಶಿ ಮಾತನಾಡಿದ ಅವರು ತಮ್ಮ ಕುಟುಂಬದ ಉದ್ದಾರಕ್ಕಾಗಿ ಮಾತ್ರ ಶ್ರಮಿಸುತ್ತಿರುವ ಹೆಚ್.ಡಿ.ದೇವೆಗೌಡರು ಮತ್ತು ಕುಮಾರಸ್ವಾಮಿಯವರು ಯಾರನ್ನು ಬೆಳೆಸುತ್ತಿಲ್ಲಾ ಕೇವಲ ೨ ಸೀಟಿಗಾಗಿ ಬಿಜೆಪಿ ಜತೆ ಒಂದಾಣಿಕೆ ಮಾಡಿಕೊಂಡಿದ್ದಾರೆ. ಆ ಸೀಟುಗಳನ್ನು ಕೂಡ ಯಾರು ಎಲ್ಲಿ ನಿಲ್ಲಬೇಕುಬೆಂಬುದನ್ನ ಬಿಜೆಪಿಯವರೇ ತಿರ್ಮಾನಿಸಿದ್ದಾರೆ. ಮೂರು ಕ್ಷೇತ್ರದಲ್ಲೂ ಅಳಿಯ, ಮಗ, ಮೊಮ್ಮಗನಿಗೆ ಆಗಬೇಕೆ ಎಂದು ವ್ಯಂಗ್ಯವಾಡಿದರು.
ಕಳೆದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನಿಮಗೆ ಅಧಿಕಾರ ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಡಿ.ಕೆ.ಶಿವಕುಮಾರ್ ಸರ್ಕಾರ ಉಳಿಯಲು ಬಹಳ ಪ್ರಯತ್ನಿಸಿದರು ಕೂಡ ಅವರನ್ನು ಇಂದು ಜರಿಯುತ್ತಿದ್ದೀರಿ ಆದರೇ ಇದಾವುದನ್ನು ಒಕ್ಕಲಿಗರು ಮರೆತಿಲ್ಲಾ. ಸಮುದಾಯ ಅವರ ಬೆನ್ನಿಗೆ ನಿಂತಿದ್ದು. ಮೈಸೂರು ಭಾಗದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ೧೫ ಮಂದಿ ಒಕ್ಕಲಿಗರಿಗೆ ಕಾಂಗ್ರೆಸ್ನಲ್ಲಿ ಟಿಕೇಟ್ ಕೊಡಿಸಿದ್ದಾರೆ ಎಂದರು.
ಚುನಾವಣಾ ಪೂರ್ವದಲ್ಲಿ ಕೊಟ್ಟಂತಹ ವಚನದಂತೆ ನಡೆದುಕೊಂಡು ಗ್ಯಾರಂಟಿ ಯೋಜನೆಗಳ ಜಾರಿ ಮಾಡಿದೆ ಆದರೇ ಬಡವರು ಮತ್ತು ಮಹಿಳೆಯರಿಗೆ ಅನುಕೂಲವಾಗಿರುವ ಗ್ಯಾರಂಟಿ ಯೋಜನೆಗಳನ್ನು ಬಿಜೆಪಿಯ ಪ್ರಧಾನ ಮಂತ್ರಿಯಿಂದ ಹಿಡಿದು ಮತ್ತು ಜೆಡಿಎಸ್ ಮುಖಂಡರವರೆಗು ವಿರೋಧ ಮಾಡುತ್ತಿದ್ದಾರೆ. ಕೇಂದ್ರದ ಮೋದಿಯವರ ಬಿಜೆಪಿ ಸರ್ಕಾರ ೨೬ ಲಕ್ಷ ಕೋಟಿ ಶ್ರೀಮಂತರ ಸಾಲ ಮನ್ನ ಮಾಡಿ ಬಡವರ ವಿರೋಧಿಯಾಗಿದೆ ಎಂದರು. ವಿದೇಶದಿಂದ ಕಪ್ಪು ಹಣ ತರುತ್ತೇವೆ ಪ್ರತಿಯೊಬ್ಬರ ಖಾತೆಗು ೧೫ ಲಕ್ಷ ಹಾಕುತ್ತೇವೆ, ಯುವಕರಿಗೆ ಉದ್ಯೋಗ ಸೃಷ್ಟಿ ಮಾಡುತ್ತೇ. ರೈತರ ಸಾಲ ಮನ್ನಾಮಾಡುತ್ತೇವೆ ಎಂದು ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಒಬ್ಬರ ಖಾತೆಗು ೧ರೂಪಾಯಿ ಹಾಕಿಲ್ಲಾ ಎಂದು ತಿಳಿಸಿದರು.
ಕೇಂದ್ರ ಸರ್ಕಾರ ಜಿಎಸ್ಟಿಯ ರಾಜ್ಯದ ಪಾಲನ್ನು ಕೂಡದೇ, ಬರ ಪರಿಹಾರ ನಿಧಿಯನ್ನು ಕೊಡದೆ ರೈತರಿಗೆ ಅನ್ಯಾಯವ್ಯಸಗುತ್ತಿದೆ. ಸಿಲಿಂಡರ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಪ್ರತಿನಿತ್ಯ ಜಾತಿ ಸಂಘರ್ಷ, ಧರ್ಮ ಸಂಘರ್ಷ, ದೇವರುಗಳ ಹೆಸರಲ್ಲಿ, ಶಾಲಾ ಮಕ್ಕಳ ಹೆಸರಲ್ಲಿ ದಂದೆ ಗಲಾಟೆ, ಗೊಂದಲ, ಭ್ರಷ್ಟಚಾರ ನಡೆಸಿದರು ಎಂದು ಹೇಳಿದರು.
ನಾವು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಒಂದು ಕುಟುಂಬದ ಒಬ್ಬ ಮಹಿಳೆಗೆ ಒಂದು ವರ್ಷಕ್ಕೆ ೧ ಲಕ್ಷ ರೂಪಾಯಿಗಳನ್ನು ನೀಡುವ ಗ್ಯಾರಂಟಿ ಯೋಜನೆ ಸೇರಿ ೨೫ ಭರವಸೆಗಳನ್ನು ಪ್ರನಾಳಿಕೆಯಲ್ಲಿ ನೀಡಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನ ಬದಲಾಯಿಸುತ್ತೇವೆ ಎನ್ನುತ್ತಿರುವ ಬಿಜೆಪಿಯವರು ಶೇಕಡ ೮೪ ರಷ್ಟು ಇರುವ ಸಮಾಜಗಳಿಗೆ ಅನ್ಯಾಯ ಮಾಡುತ್ತಿದೆ ಎಂದು ದೂರಿದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡ್ಯ, ಮೈಸೂರು, ಚಾಮರಾಜನಗರ ಭಾಗದ ಜನರ ಅನುಕೂಲಕ್ಕಾಗಿ ಮಂಡ್ಯದಲ್ಲಿ ಕೃಷಿ ವಿಶ್ವ ವಿದ್ಯಾನಿಲಯ, ಸಕ್ಕರೆ ಕಾರ್ಖಾನೆ ೫೦ ಕೋಟಿ, ಜತೆಗೆ ಹೊಸ ಸಕ್ಕರೆ ಕಾರ್ಖಾನೆ ಪ್ರಾರಂಭ, ೨ ಸಾವಿರ ಕೋಟಿ ನೀರಾವರಿಗೆ ಬಜೆಟ್ನಲ್ಲಿ ಇಟ್ಟಿದ್ದಾರೆ. ಆದ್ದರಿಂದ ಜಾತಿ ರಾಜಕಾರಣ ಬಿಟ್ಟು ಕೆಲಸ ಮಾಡಿ ಜಾತಿಯಿಂದ ಯಾರು ಉದ್ದಾರ ಆಗಲ್ಲಾ ಸರ್ಕಾರ ನೀಡುವ ಶಾಸ್ವತ ಯೋಜನೆಗಳಿಂದ ನಾವು ಅಭಿವೃದ್ದಿ ಯಾಗುತ್ತೇವೆ. ನಮ್ಮ ಬದುಕು ಸುದಾರಣೆಯಾಗುವಂತಹ ಕೆಲಸವನ್ನ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದರು.
ಶಾಸಕ ಡಿ.ರವಿಶಂಕರ್ ಮಾತನಾಡಿ ಒಕ್ಕಲಿಗ ಸಮುದಾಯ ಇಲ್ಲಿಯವರೆಗೆ ಯಾರನ್ನು ಬೆಂಬಲಿಸಿದ್ದಾರೋ ಅವರೇ ಚುನಾಯಿತರಾಗಿದ್ದಾರೆ. ಅದೇ ರೀತಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ನನ್ನ ಪರವಾಗಿ ಮನೆ ಮಗನೆಂದು ಹೆಚ್ಚು ಮತ ನೀಡಿದ್ದೀರಿ. ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ನನಗೆ ನೀಡಿದ ಮತಕ್ಕಿಂತ ಸ್ಟಾರ್ ಚಂದ್ರುರವರಿಗೆ ಹೆಚ್ಚು ಮತ ನೀಡಿ ಲೋಕಸಭೆಗೆ ಆಯ್ಕೆ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರ ಕೈ ಬಲಪಡಿಸೋಣ ಎಂದು ಕೋರಿದರು.

ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ ಮಾತನಾಡಿ ನಾನು ಒಕ್ಕಲಿಗ ಸಮುದಾಯದವನು ನಾನು ಕೂಡ ನಿಮ್ಮ ಸೇವೆ ಮಾಡುವ ಉದ್ದೇಶದಿಂದ ಸಾರ್ವಜನಿಕ ಸೇವೆಗೆ ಬಂದಿದ್ದೇನೆಯೇ ವರತು ದುಡ್ಡು ಮಾಡಲಲ್ಲಾ. ಆದ್ದರಿಂದ ನನಗೆ ಮತ ನೀಡಿ ಆಯ್ಕೆ ಮಾಡುವ ಮೂಲಕ ನಿಮ್ಮ ಸೇವೆ ಮಾಡುವ ಅವಕಾಶವನ್ನು ಕಲ್ಪಿಸಿಕೊಡಿ ಎಂದು ಮನವಿ ಮಾಡಿದರು.
ಶಾಸಕ ದಿನೇಶ್ ಗೂಳಿಗೌಡ, ಕೆಪಿಸಿಸಿ ಕಾರ್ಯಕಾರಣಿ ಸದಸ್ಯ ದೊಡ್ಡಸ್ವಾಮೇಗೌಡ, ಮಾಜಿ ಸದಸ್ಯ ಎಸ್.ಪಿ.ತಮ್ಮಯ್ಯ, ಪುರಸಭಾ ಸದಸ್ಯ ಕೆ.ಜಿ.ಸುಬ್ರಮಣ್ಯ, ತಾಪಂ ಮಾಜಿ ಅಧ್ಯಕ್ಷ ಬೋರೆ ನಾಗರಾಜ್, ಮಾಜಿ ಸದಸ್ಯರಾದ ಗೋವಿಂದೇಗೌಡ, ಡಿ.ನಟರಾಜ್, ಎಪಿಎಂಸಿ ಮಾಜಿ ಉಪಾಧ್ಯಕ್ಷ ಹೆಚ್.ಹೆಚ್.ನಾಗೇಂದ್ರ, ಒಕ್ಕಲಿಗ ಸಂಘದ ಉಪಾಧ್ಯಕ್ಷ ಪರಶುರಾಮ, ಮುಖಂಡರಾದ ಎಸ್.ಪಿ.ತಮ್ಮಯ್ಯ, ಚಿಕ್ಕಹನಸೋಗೆ ಪಾಲಕ್ಷ, ಸಾಲಿಗ್ರಾಮ ಸಂದೇಶ್, ಜಯಂತ್, ಮಿರ್ಲೆ ನಂದೀಶ್,ಪೂರ್ಣಚಂದ್ರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಉದಯಶಂಕರ್, ಎಂ.ಎಸ್.ಮಹದೇವ್, ನಗರಾಧ್ಯಕ್ಷ ಎಂ.ಜೆ.ರಮೇಶ್, ವಕ್ತಾರ ಸೈಯದ್ ಜಾಬೀರ್ ಇನ್ನಿತರರು ಹಾಜರಿದ್ದರು.