ಚಾಮರಾಜನಗರ : ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟ ಪ್ರದೇಶದಲ್ಲಿ ಬುಧವಾರ ಸಂಜೆ ಸುಮಾರು ಒಂದು ಗಂಟೆಗಳ ಕಾಲ ಭಾರೀ ಮಳೆ ಸುರಿದ ಪರಿಣಾಮ, ಸಂಪೂರ್ಣ ಅರಣ್ಯ ಪ್ರದೇಶ ತಂಪಾಗಿದ್ದು ಪ್ರಕೃತಿ ಸೊಬಗು ಹೆಚ್ಚಾಗಿದೆ.
ಇತ್ತೀಚಿನ ಬಿಸಿಲಿನ ತಾಪದಿಂದ ಬಳಲುತ್ತಿದ್ದ ಪ್ರದೇಶಕ್ಕೆ ಈ ಮಳೆ ತಂಪೆರದಂತಾಗಿ, ಅರಣ್ಯದ ಸಸ್ಯಸಂಪತ್ತು ಚೈತನ್ಯಗೊಂಡಿದೆ. ಮಳೆಯ ಪರಿಣಾಮವಾಗಿ ಬೆಟ್ಟ ಪ್ರದೇಶದಲ್ಲಿ ಹಸಿರುಮಯ ವಾತಾವರಣ ಕಂಡುಬಂದಿದ್ದು, ಪ್ರವಾಸಿಗರು ಹಾಗೂ ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದಾರೆ.
ಮಳೆ ಸುರಿದ ಪರಿಣಾಮ ಕೆಲವೆಡೆ ಸಣ್ಣ ಮಟ್ಟಿನ ನೀರು ಹರಿವು ಕಾಣಿಸಿಕೊಂಡರೂ ಯಾವುದೇ ಅನಾಹುತಗಳ ಬಗ್ಗೆ ವರದಿಯಾಗಿಲ್ಲ.



