Wednesday, May 27, 2026
Google search engine

Homeಕ್ರೀಡೆರಾಷ್ಟ್ರೀಯ ಸೈಕ್ಲಿಂಗ್ ತರಬೇತುದಾರರಾಗಿ ಮೈಸೂರಿನ ಲೋಕೇಶ್ ಆಯ್ಕೆ

ರಾಷ್ಟ್ರೀಯ ಸೈಕ್ಲಿಂಗ್ ತರಬೇತುದಾರರಾಗಿ ಮೈಸೂರಿನ ಲೋಕೇಶ್ ಆಯ್ಕೆ

ಮೈಸೂರು: ಮೈಸೂರಿನ ಲೋಕೇಶ್ ಅವರನ್ನು ರಾಷ್ಟ್ರೀಯ ಸೈಕ್ಲಿಂಗ್ ತರಬೇತುದಾರರಾಗಿ ಆಯ್ಕೆ ಮಾಡಲಾಗಿದೆ.

ಅಂತರರಾಷ್ಟ್ರೀಯ ಸೈಕ್ಲಿಸ್ಟ್ ಮತ್ತು ಏಕಲವ್ಯ ಪ್ರಶಸ್ತಿ ಪುರಸ್ಕೃತ ಲೋಕೇಶ್ ನರಸಿಂಹಾಚಾರ್ ಅವರನ್ನು ರಾಷ್ಟ್ರೀಯ ಸೈಕ್ಲಿಂಗ್ ತಂಡದ ತರಬೇತುದಾರ ಆಗಿ ಆಯ್ಕೆ ಮಾಡಲಾಗಿದೆ. ಜೂನ್ 23 ರಿಂದ 26 ರವರೆಗೆ ಉಜ್ಬೇಕಿಸ್ತಾನ್‌ ನ ರಾಜಧಾನಿ ತಾಷ್ಕೆಂಟ್‌ ನಲ್ಲಿ ನಡೆಯಲಿರುವ ಏಷ್ಯನ್ ಮೌಂಟೇನ್ ಬೈಕ್ ಸೈಕ್ಲಿಂಗ್ ಚಾಂಪಿಯನ್‌ ಶಿಪ್‌ ನಲ್ಲಿ ಭಾರತವನ್ನು ಪ್ರತಿನಿಧಿಸುವ 19 ಸದಸ್ಯರ ಸೈಕ್ಲಿಂಗ್ ತಂಡವು ಭಾಗವಹಿಸಲಿದೆ.

ಅವರ ಸಾಧನೆಯನ್ನು ಮೆಚ್ಚಿ, ಇತ್ತೀಚೆಗೆ ಸಾರ್ವಜನಿಕ ಗ್ರಂಥಾಲಯಗಳ ಉಪ ನಿರ್ದೇಶಕರು ಮತ್ತು ಮೈಸೂರು ಜಿಲ್ಲಾ ಹವ್ಯಾಸಿ ಸೈಕ್ಲಿಂಗ್ ಸಂಘದ ಉಪಾಧ್ಯಕ್ಷ ಬಿ ಮಂಜುನಾಥ್ ಮತ್ತು ಮೈಸೂರು ಅಥ್ಲೀಟ್ಸ್ ಕ್ಲಬ್‌ ನ ಇತರ ಸದಸ್ಯರು ಅವರನ್ನು ಸನ್ಮಾನಿಸಿದರು.

ರಮೇಶ್ ನರಸಯ್ಯ, ದೀಪಕ್ ಪಠಂಗೆ, ಮುತ್ತುಕುಮಾರ್, ವೀಣಾ ಅಶೋಕ್, ಫಹ್ರಿಯಾಲ್ ಲೋಕೇಶ್, ಸಂತೋಷ್, ವೇಣುಗೋಪಾಲ್, ಶೋಯೆಬ್, ಗಣೇಶ್, ಅಶೋಕ್, ವೇದಮೂರ್ತಿ, ಸುನಿಲ್ ಮತ್ತು ಗುರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular