Wednesday, June 10, 2026
Google search engine

Homeರಾಜಕೀಯಮೋದಿ-ದೇವೇಗೌಡರ ಬಾಂಧವ್ಯ ಮುಂದುವರಿಯಲಿದೆ : ವಿ.ಸೋಮಣ್ಣ

ಮೋದಿ-ದೇವೇಗೌಡರ ಬಾಂಧವ್ಯ ಮುಂದುವರಿಯಲಿದೆ : ವಿ.ಸೋಮಣ್ಣ

ಬೆಂಗಳೂರು : ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರಿಗೆ ರಾಜ್ಯಸಭಾ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಬಿಜೆಪಿಯನ್ನು ಟೀಕಿಸಿದ್ದ ಕಾಂಗ್ರೆಸ್ ನಾಯಕರಿಗೆ ಕೇಂದ್ರ ಸಚಿವ ವಿ.ಸೋಮಣ್ಣ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿದ ಕೇಂದ್ರ ಸಚಿವ ವಿ.ಸೋಮಣ್ಣ, ಕಾಂಗ್ರೆಸ್ ನವರು ಇದ್ದಾಗ ಹೆಚ್ ಡಿ ದೇವೇಗೌಡರನ್ನ ಸವಕಲು ನಾಣ್ಯ ಮಾಡಿದ್ದರು.  ಕುಮಾರಸ್ವಾಮಿಯವರನ್ನ ಯಾಕೆ ಸಿಎಂ ಸ್ಥಾನದಿಂದ ತೆಗೆದ್ರಿ? ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ನವರದ್ದು ಮೊಸಳೆ ಕಣ್ಣೀರು. ನೀವು ಏನೇ ಮಾಡಿದರೂ ಹೆಚ್ ಡಿ ದೇವೇಗೌಡರು ನಮ್ಮೆಲ್ಲರ ಮಾರ್ಗದರ್ಶಕರು.  ದೇವೇಗೌಡರು ದೇಶಕ್ಕೆ ಅವಶ್ಯಕತೆ ಎಂದು  ಪ್ರಧಾನಿ ಮೋದಿ ಅವರಿಗೆ ಮನವರಿಕೆಯಾಗಿದೆ ಮೋದಿ- ದೇವೇಗೌಡರ ಬಾಂಧವ್ಯದ ಸೇತುವೆ ನಾವ್ಯಾರು ನಿರೀಕ್ಷೆ ಮಾಡಲಾಗಲ್ಲ. ದೇವೇಗೌಡರು ಮೋದಿಯುವರ ಆತ್ಮೀಯತೆ ಮುಂದುವರೆಯುತ್ತೆ ಎಂದರು.

ಕೇಂದ್ರ ನೀತಿ ಆಯೋಗದ ಸಭೆಗೆ ಸಿದ್ದರಾಮಯ್ಯ ಹೋಗುತ್ತಿರಲಿಲ್ಲ.  ಡಿಕೆ ಶಿವಕುಮಾರ್ ಹೋಗುತ್ತಾರೆ ಎಂಬ ಮಾಹಿತಿ ನೋಡಿದೆ.  ಡಿಕೆ ಶಿವಕುಮಾರ್ ನಡೆ ಒಳ್ಳಯೆ ಬೆಳವಣಿಗೆ ಎಂದು ವಿ.ಸೋಮಣ್ಣ ತಿಳಿಸಿದರು.

RELATED ARTICLES
- Advertisment -
Google search engine

Most Popular