ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಸಮಾನ ಮನಸ್ಕರ ಪ್ರಗತಿ ಪರವೇದಿಕೆಯ ವತಿಯಿಂದ ತಾಲೂಕು ಸರ್ಕಾರಿ ನೌಕರರ ನಿರ್ದೇಶಕ ಸ್ಥಾನಗಳಿಗೆ ಮಾ,೨೮ ರಂದು ನಡೆಯುವ ಚುನಾವಣೆಗೆ ಪ್ರಾಥಮಿಕ ಶಾಲಾ ಶಿಕ್ಷಕರ ವಿಭಾಗದಿಂದ ಸ್ಪರ್ದಿಸಿರುವ ನಾಲ್ಕು ಮಂದಿ ಅಭ್ಯರ್ಥಿಗಳು ಜಯಗಳಿಸುವುದು ನಿಶ್ಚಿತ ಎಂದು ತಾಲೂಕು ಸಾಮರಸ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಟಿ.ಪುರುಷೋತ್ತಮ ಭರವಸೆ ವ್ಯಕ್ತಪಡಿಸಿದರು.
ಕೆ.ಆರ್.ನಗರ ಪಟ್ಟಣದ ವಿನಾಯಕ ಬಡಾವಣೆಯಲ್ಲಿ ಮತದಾರ ಶಿಕ್ಷಕರ ಮನೆ ಮನೆಗೆ ತೆರಳಿ ವೇದಿಕೆಯ ಬೆಂಬಲದಿಂದ ನಿರ್ದೇಶಕ ಸ್ಥಾನಗಳಿಗೆ ಸ್ಪರ್ದಿಸಿರುವ ಅಭ್ಯರ್ಥಿಗಳಾದ ಒಂಟಿಮನೆನಾಗರಾಜು, ರಾಜಶೇಖರ, ಬಿ.ಎಲ್.ಮಹದೇವ ಮತ್ತು ಹೆಚ್.ಟಿ.ಪಾಂಡು ಅವರ ಪರವಾಗಿ ಮತ ಯಾಚಿಸಿ ಮಾತನಾಡಿದರು. ನಾವು ಪ್ರಚಾರ ಮಾಡಲು ಹೋದಾಗ ಶಿಕ್ಷಕ ಬಾಂದವರು ನಮಗೆ ಪೂರ್ಣ ಬೆಂಬಲ ನೀಡುತ್ತಿದ್ದು ಚುನಾಯಿತರಾದ ನಂತರ ಉತ್ತಮವಾಗಿ ಕೆಲಸ ಮಾಡುವಂತೆ ಮಾರ್ಗದರ್ಶನ ನೀಡುತ್ತಿರುವುದು ಇದು ಗೆಲುವಿನ ಉತ್ಸಾಹ ಹೆಚ್ಚಿಸಿದೆ ಎಂದರು.
ನಮ್ಮ ತಂಡದ ಬೆಂಬಲಿತರು ಚುನಾವಣೆಯಲ್ಲಿ ಆಯ್ಕೆಯಾದ ನಂತರ ಶಿಕ್ಷಕರ ಹಿತ ಕಾಯುವ ಕೆಲಸ ನಿರ್ವಹಿಸಲು ಈಗಾಗಲೇ ಕಾರ್ಯ ಯೋಜನೆ ಹಾಕಿಕೊಂಡಿದ್ದು ಅದರಂತೆ ಎಲ್ಲರ ಮಾರ್ಗದರ್ಶನದಲ್ಲಿ ನಡೆಯಲಿದ್ದಾರೆ ಎಂದು ತಿಳಿಸಿದರು. ಸಮಾನ ಮನಸ್ಕರ ಪ್ರಗತಿ ಪರ ವೇದಿಕೆ ಅಧ್ಯಕ್ಷ ಸಿ.ಎನ್.ಪ್ರಭು ಮಾತನಾಡಿ ನಮ್ಮ ವೇದಿಕೆಯ ಮೇಲೆ ಶಿಕ್ಷಕ ಬಾಂಧವರು ಅಪಾರ ವಿಶ್ವಾಸವಿಟ್ಟು ನಾವಣೆಯಲ್ಲಿ ಬೆಂಬಲಿಸಲಿದ್ದು ನಾಲ್ಕು ಮಂದಿ ನಿರ್ದೇಶಕರಾಗಿ ಆಯ್ಕೆಯಾಗುವುದು ನಿಶ್ಚಿತವಾಗಿದೆ ಎಂದು ಭವಿಷ್ಯ ನುಡಿದರು.
ಆನಂತರ ವೇದಿಕೆಯ ಪದಾಧಿಕಾರಿಗಳು, ನಿರ್ದೇಶಕ ಸ್ಥಾನದ ಆಕಾಂಕ್ಷಿಗಳು ಮತ್ತು ಅವರ ಬೆಂಬಲಿತ ಶಿಕ್ಷಕರು ಪಟ್ಟಣದ ಶಿಕ್ಷಕ ಮತದಾರರ ಮನೆ ಮನೆಗೆ ತೆರಳಿ ಬೆಂಬಲ ಕೋರಿದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ಎನ್.ಸಿ.ರಾಮಪ್ರಸಾದ್, ಮುರುಳಿಧರ, ಕೆ.ಎಸ್.ಕೃಷ್ಣ, ಲಕ್ಷ್ಮೀಶ, ಸೈಯದ್ ರಿಜ್ವಾನ್, .ಎಸ್.ನಾಗರಾಜು, ಮಂಜುನಾಥ, ಟಿ.ಎಸ್.ಮೋಹನ್ ಕುಮಾರ್, ಮಂಜುರಾಜು, ವೀರಭದ್ರಶೆಟ್ಟಿ, ಕಲಾವಿದ ಮಹದೇವ, ಸಿ.ಎನ್.ಸ್ವಾಮಿ, ಮುತ್ತೇಶಾಚಾರ್, ಭೋಜೇಗೌಡ, ವಿಷ್ಣುಶೆಟ್ಟಿ, ಶಿವಮೂರ್ತಿ, ಜಯಮ್ಮ, ನಾರಾಯಣಶೆಟ್ಟಿ, ತಾರಾ, ಶ್ವೇತಾ, ಶೋಭಾ, ವಿಜಯಲಕ್ಷ್ಮಿ, ಪುಷ್ಪಾವತಾಮ್ಮ, ಗೋಪಿಕಾಂಭ, ಶಿವಮ್ಮ, ಡಿ.ಅನಿತಾ, ಕೃಷ್ಣನಾಯಕ, ಪ್ರಕಾಶ್, ರಾಮಕೃಷ್ಣ, ಕೆ.ಎನ್.ಕೃಷ್ಣ ಮತ್ತಿತರರು ಹಾಜರಿದ್ದರು.