ಬೆಂಗಳೂರು: ಆರ್ಸಿಬಿ ಸಂಭ್ರಮಾಚರಣೆ ವೇಳೆ ನಡೆದ ಕಾಲ್ತುಳಿತ ದುರಂತವನ್ನು ನೆನೆದು ಡಿಸಿಎಂ ಡಿಕೆ ಶಿವಕುಮಾರ್ ಕಣ್ಣೀರಿಟ್ಟರು. “ಇಂತಹ ಘಟನೆ ನಮ್ಮ ರಾಜ್ಯದಲ್ಲಿ ಸಂಭವಿಸಲಿದೆ ಎನ್ನುವುದನ್ನು ಊಹಿಸಿರಲಿಲ್ಲ. ಮೃತರು ಎಲ್ಲರೂ ಯುವಕರು, ಅವರ ನೋವು ನೋಡಲಾಗುತ್ತಿಲ್ಲ,” ಎಂದು ಭಾವುಕರಾದರು.
ಮಾಧ್ಯಮಗಳಿಂದಲೇ ಪ್ರಥಮ ಮಾಹಿತಿ ಲಭಿಸಿದ್ದು, ಬಳಿಕ ಕಮಿಷನರ್ ಮಾಹಿತಿ ನೀಡಿದರು ಎಂದರು. “ವಿರೋಧ ಪಕ್ಷದವರು ರಾಜಕೀಯ ಮಾಡುತ್ತಿದ್ದಾರೆ, ಮಾಡಲಿ. ಅವರು ಎಷ್ಟು ಮೃತದೇಹಗಳ ಮೇಲೆ ರಾಜಕೀಯ ಮಾಡಿದ್ದಾರೆ ಎನ್ನುವ ಪಟ್ಟಿ ನಾನು ಮಾಡುತ್ತೇನೆ,” ಎಂದು ಪ್ರತಿಕ್ರಿಯಿಸಿದರು.