ಬೆಂಗಳೂರು: ಸೆಪ್ಟೆಂಬರ್ ಕ್ಷಿಪ್ರಕ್ರಾಂತಿಯ ಸದ್ದು ಜೋರಾಗುತ್ತಿರುವ ಹೊತ್ತಿನಲ್ಲೇ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಇಂದು ಅಸಮಾಧಾನಗೊಂಡಿರುವ ಶಾಸಕರ ಜೊತೆ ಪ್ರತ್ಯೇಕ ಸಭೆ ನಡೆಸಲಿದ್ದಾರೆ.
ಈ ಸಭೆಗಳಿಗೆ ಕಾರಣವಾಗಿರುವು, ಇತ್ತೀಚೆಗಿನ ಬಿ.ಆರ್. ಪಾಟೀಲ್ ಹಾಗೂ ರಾಜು ಕಾಗೆಯ ಹೇಳಿಕೆಗಳು ಸರ್ಕಾರದ ಧೃಡತೆಗೆ ಧಕ್ಕೆಯುಂಟುಮಾಡಿದ್ದು, ಇದು ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಹೀಗಾಗಿ, ಹೈಕಮಾಂಡ್ ಎಚ್ಚೆತ್ತಿದ್ದು, ತೀವ್ರ ರಾಜಕೀಯ ಲೆಕ್ಕಾಚಾರಗಳ ನಡುವೆ ಈ ಸಭೆ ಮಹತ್ವ ಪಡೆದಿದೆ.
1. ಬಿ.ಆರ್. ಪಾಟೀಲ್, ಆಳಂದ ಶಾಸಕ, 2. ರಾಜು ಕಾಗೆ, ಕಾಗವಾಡ ಶಾಸಕ, 3. ನಂಜೇಗೌಡ, ಮಾಲೂರು ಶಾಸಕ, 4. ಪ್ರದೀಪ್ ಈಶ್ವರ್, ಚಿಕ್ಕಬಳ್ಳಾಪುರ, ಶಾಸಕ, 5. ರೂಪಕಲಾ, ಕೆಜಿಎಫ್ ಶಾಸಕಿ, 6. ಸುಬ್ಬಾರೆಡ್ಡಿ, ಬಾಗೇಪಲ್ಲಿ ಶಾಸಕ, 7. ನಾರಾಯಣಸ್ವಾಮಿ, ಬಂಗಾರಪೇಟೆ ಶಾಸಕ, 8. ಕೊತ್ತೂರು ಮಂಜುನಾಥ್, ಕೋಲಾರ ಶಾಸಕ ಇವರುಗಳನ್ನು ಇಂದು ಮಧ್ಯಾಹ್ನ ಶಾಸಕರು ತಮ್ಮ ಸಮಸ್ಯೆ ಹೇಳಿಕೊಳ್ಳಲು ಒನ್ ಟು ಒನ್ ಭೇಟಿಗೆ ಸಮಯ ಮೀಸಲಿಟ್ಟಿದ್ದಾರೆ.
ಒಟ್ಟು 40 ಶಾಸಕರ ಶಾರ್ಟ್ ಲಿಸ್ಟ್ ಮಾಡಿದ್ದು ಇಂದು 8 ಶಾಸಕರಿಗೆ ಬುಲಾವ್ ನೀಡಲಾಗಿದೆ. ಇಂದು ಮಧ್ಯಾಹ್ನ 1:30ಕ್ಕೆ ಬಿ.ಆರ್ ಪಾಟೀಲ್, 2 ಗಂಟೆಗೆ ರಾಜು ಕಾಗೆಗೂ ಭೇಟಿಗೆ ಟೈಂ ಫಿಕ್ಸ್ ಮಾಡಲಾಗಿದೆ. ಶಾಸಕರನ್ನು ಕರೆಸಿ ಸುರ್ಜೇವಾಲಾ ಎಚ್ಚರಿಕೆ ನೀಡುವ ಸಾಧ್ಯತೆ ಇದೆ. ಮೂರು ದಿನ ಠಿಕಾಣಿ ಹೂಡಲಿರುವ ಸುರ್ಜೇವಾಲಾ ಪಕ್ಷದಲ್ಲಿನ ಅಸಮಾಧಾನ ಶಮನಗೊಳಿಸುವ ಯತ್ನ ಮಾಡಲಿದ್ದಾರೆ.