Tuesday, July 1, 2025
Google search engine

Homeರಾಜ್ಯಸುದ್ದಿಜಾಲರಾಷ್ಟ್ರೀಯ ಬಾಲ್ಯ ಸ್ವಸ್ಥ ಕಾರ್ಯಕ್ರಮದ ಅಡಿಯಲ್ಲಿ ಮಕ್ಕಳ ಉಚಿತ ಆರೋಗ್ಯ ತಪಾಸಣೆ ಶಿಬಿರ

ರಾಷ್ಟ್ರೀಯ ಬಾಲ್ಯ ಸ್ವಸ್ಥ ಕಾರ್ಯಕ್ರಮದ ಅಡಿಯಲ್ಲಿ ಮಕ್ಕಳ ಉಚಿತ ಆರೋಗ್ಯ ತಪಾಸಣೆ ಶಿಬಿರ

ವರದಿ: ಎಡತೊರೆ ಮಹೇಶ್

ಹೆಚ್. ಡಿ ಕೋಟೆ: ತಾಲ್ಲೂಕು ಆರೋಗ್ಯಾಧಿಕಾರಿ ಗಳ ಕಚೇರಿ ಸಭಾಂಗಣದಲ್ಲಿ,ರಾಷ್ಟೀಯ ಬಾಲ್ಯ ಸ್ವಸ್ಥ ಕಾರ್ಯಕ್ರಮ ದ ಅಡಿಯಲ್ಲಿ( RBSK) ತಾಲ್ಲೂಕು ಆರೋಗ್ಯಾಧಿಕಾರಿಗಳಾದ ಡಾ” ರವಿಕುಮಾರ್ ಮತ್ತು ಸಾರ್ವಜನಿಕ ಆಸ್ಪತ್ರೆ,ಮಕ್ಕಳ ತಜ್ಞ ರಾದ ಡಾ” ಶಾಂತ ಕುಮಾರ್ ರವರ ಅಧ್ಯಕ್ಷತೆಯಲ್ಲಿ ಮಕ್ಕಳ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.

ತಾಲ್ಲೂಕು ಆರೋಗ್ಯಾಧಿಕಾರಿಗಳಾದ ಡಾ” ರವಿಕುಮಾರ್ ರವರು ಮಾತನಾಡಿ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ ಅಡಿಯಲ್ಲಿ ಗುರುತಿಸಲಾದ ಅಪೌಷ್ಠಿಕ ಮಕ್ಕಳು ಹಾಗೂ ಇತರೆ ಪೌಷ್ಟಿಕತೆ ಕೊರತೆ ಇರುವ ಮಕ್ಕಳಿಗೆ (RBSK) ಮಕ್ಕಳ ತಜ್ಞರಿಂದ ತಪಾಸಣೆ ನಡೆಸಿ ಸೂಕ್ತ ಸಲಹೆ ಸೂಚನೆ ಚಿಕಿತ್ಸೆ ನೀಡಲಾಯಿತು.

CFTRI ವತಿಯಿಂದ SAM ,MAM ಮಕ್ಕಳ ರಕ್ತ ಮಾದರಿಯನ್ನು ಹಂಪಾಪುರ, ಸರಗೂರು, HD ಕೋಟೆ ಕ್ಲಸ್ಟರ್ ಗಳಲ್ಲಿ ಪಡೆದು ಪರೀಕ್ಷೆ ಗೆ ಒಳಪಡಿಸಲಾಯಿತು. RBSK ಕಾರ್ಯಕ್ರಮವು ಸುಧಾರಿಸಲು ಮತ್ತು ಸಮಗ್ರ ಆರೈಕೆಯನ್ನು ಒದಗಿಸುವುದು ಭಾರತ ಸರ್ಕಾರದ ಉಪಕ್ರಮವಾಗಿದೆ. ಇದು 0-18 ವರ್ಷ ವಯಸ್ಸಿನ ಮಕ್ಕಳಲ್ಲಿನ ದೋಷಗಳು, ರೋಗಗಳು, ನ್ಯೂನತೆಗಳು ಮತ್ತು ಬೆಳವಣಿಗೆಯ ವಿಳಂಬಗಳನ್ನು ಪತ್ತೆಹಚ್ಚಿ ಚಿಕಿತ್ಸೆ ನೀಡುವುದರ ಮೇಲೆ ಕೇಂದ್ರೀಕರಿಸುತ್ತದೆ.

ಈ ಕಾರ್ಯಕ್ರಮದ ಮುಖ್ಯ ಅಂಶಗಳು:
ಆರಂಭಿಕ ಪತ್ತೆ:
ಹುಟ್ಟಿನಿಂದಲೇ 18 ವರ್ಷ ವಯಸ್ಸಿನ ಮಕ್ಕಳಲ್ಲಿನ ದೋಷಗಳು, ರೋಗಗಳು, ನ್ಯೂನತೆಗಳು ಮತ್ತು ಬೆಳವಣಿಗೆಯ ವಿಳಂಬಗಳನ್ನು ಪತ್ತೆಹಚ್ಚುವುದು, ರಾಷ್ಟ್ರೀಯ ಆರೋಗ್ಯ ಮಿಷನ್ ಪ್ರಕಾರ.
ಉಚಿತ ಚಿಕಿತ್ಸೆ:
ಸರ್ಕಾರವು ಸಾಮಾನ್ಯ ಆರೋಗ್ಯ ಪರಿಸ್ಥಿತಿಗಳಿಗೆ ಉಚಿತ ಚಿಕಿತ್ಸೆ ನೀಡುತ್ತದೆ, ಇದರಲ್ಲಿ ತೃತೀಯ ಹಂತದ ಚಿಕಿತ್ಸೆಗಳು, ಶಸ್ತ್ರಚಿಕಿತ್ಸೆಗಳು ಸೇರಿವೆ.
ಸಮುದಾಯ ಆಧಾರಿತ ಆರೈಕೆ:
ಶಾಲೆಗಳು, ಅಂಗನವಾಡಿಗಳು ಮತ್ತು ಸಮುದಾಯದ ಆರೋಗ್ಯ ಕೇಂದ್ರಗಳ ಮೂಲಕ ಮಕ್ಕಳನ್ನು ತಲುಪುವುದು.

RBSK ತಂಡಗಳು:
ಪ್ರತಿ ಬ್ಲಾಕ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಂಚಾರಿ ಆರೋಗ್ಯ ತಂಡಗಳನ್ನು ನಿಯೋಜಿಸುವುದು, ಇವುಗಳಲ್ಲಿ ವೈದ್ಯರು, ಸ್ಟಾಫ್ ನರ್ಸ್, ನೇತ್ರ ಸಹಾಯಕರು ಮತ್ತು ಚಾಲಕರು ಇರುತ್ತಾರೆ. ಎಂದರು ನಂತರ ಮಕ್ಕಳ ತಜ್ಞ ವೈದ್ಯರಾದ ಡಾ” ಶಾಂತಕುಮಾರ್ ರವರು ಮಾತನಾಡಿ ಈ ಕಾರ್ಯಕ್ರಮವು ಮಕ್ಕಳ ಆರೋಗ್ಯ ಮತ್ತು ಜೀವನದ ಗುಣಮಟ್ಟವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ.

ಈ ಶಿಬಿರದಲ್ಲಿ ಒಟ್ಟು 89 ಮಕ್ಕಳಿಗೆ ತಜ್ಞ ವೈದ್ಯರಿಂದ ತಪಾಸಣೆ ಮಾಡಿಸಿ ಸೂಕ್ತ ಸಲಹೆ ಸೂಚನೆ ಚಿಕಿತ್ಸೆ ನೀಡಲಾಯಿತು ಎಂದರು.

ಈ ಸಂದರ್ಭದಲ್ಲಿ RBSK ವೈದ್ಯಾಧಿಕಾರಿಗಳಾದ ಡಾ. ಮೋಹನ್ ಡಾ” ಹೇಮಲತಾ ಡಾ” ರಮ್ಯಾ , ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ, ನಾಗೇಂದ್ರ, ಸಿಬ್ಬಂದಿ ವರ್ಗದವರಾದ ಬ್ರಿಜಿಟ್ , ಅನುಪಮಾ, ಮಹೇಶ್ ,ರೇಖಾ , ಅರ್ಚನಾ ರೇಖಾ, ರವಿರಾಜ್, ಮಕ್ಕಳು ಮಕ್ಕಳ ಪೋಷಕರು ಇನ್ನಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular