Friday, September 26, 2025
Google search engine

Homeರಾಜ್ಯಸುದ್ದಿಜಾಲಬೆಳಗಾವಿಗೀಗ ಟೂರಿಸ್ಟ್‌ ಹಬ್‌ ಕಿರೀಟ: ತ್ರಿಕೂಟೇಶ್ವರ, ರಾಜವಾಡಾ, ಕೋಳಿಗುಡ್ಡ ಪ್ರವಾಸಿ ತಾಣ ಲಿಸ್ಟ್‌ಗೆ ಸೇರ್ಪಡೆ

ಬೆಳಗಾವಿಗೀಗ ಟೂರಿಸ್ಟ್‌ ಹಬ್‌ ಕಿರೀಟ: ತ್ರಿಕೂಟೇಶ್ವರ, ರಾಜವಾಡಾ, ಕೋಳಿಗುಡ್ಡ ಪ್ರವಾಸಿ ತಾಣ ಲಿಸ್ಟ್‌ಗೆ ಸೇರ್ಪಡೆ

ವರದಿ: ಸ್ಟೀಫನ್ ಜೇಮ್ಸ್

  • ವರ್ಷದಿಂದ ವರ್ಷಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಳ
  • ನೂತನ ನೀತಿಯಲ್ಲಿಮತ್ತೆ 3 ಸ್ಥಳ ಸೇರ್ಪಡೆ
  • ರಾಯಬಾಗದ ರಾಜವಾಡಾ ಮತ್ತು ಕೋಳಿಗುಡ್ಡ ಮಾನ್ಯತೆ

ಬೆಳಗಾವಿ: ರಾಜ್ಯ ಸರಕಾರ ಜಾರಿಗೆ ತಂದಿರುವ ಪ್ರವಾಸೋದ್ಯಮ ನೀತಿ 2024-29ರಲ್ಲಿಗಡಿ ಜಿಲ್ಲೆ ಬೆಳಗಾವಿಯ ಬರೋಬ್ಬರಿ ನೂರು ಪ್ರವಾಸಿ ತಾಣಗಳಿಗೆ ಅಧಿಕೃತ ಮಾನ್ಯತೆ ಸಿಕ್ಕಿದ್ದು, ರಾಜ್ಯದಲ್ಲಿಯೇ ಅತಿ ಹೆಚ್ಚು ಪ್ರವಾಸಿತಾಣಗಳನ್ನು ಹೊಂದಿರುವ ಎರಡನೆಯ ಜಿಲ್ಲೆಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಐತಿಹಾಸಿಕ, ನೈಸರ್ಗಿಕ ಹಾಗೂ ಧಾರ್ಮಿಕ ಕ್ಷೇತ್ರಗಳ ಗಣಿಯಾಗಿರುವ ಬೆಳಗಾವಿ ಜಿಲ್ಲೆಪ್ರವಾಸಿಗರಿಗೆ ಒಂದೇ ಸ್ಥಳದಲ್ಲಿಅನೇಕ ದೃಶ್ಯ ವೈಭವಗಳನ್ನು ಒದಗಿಸುತ್ತಿದೆ. ಪ್ರವಾಸದ ಪ್ರತಿ ಹಾದಿಯಲ್ಲೂ ವಿಶೇಷ ಅನುಭವ ನೀಡುವ ಇಲ್ಲಿನ ತಾಣಗಳು ಕ್ಯಾಮೆರಾ ಕಣ್ಣಿಗೆ ಮಾತ್ರವಲ್ಲದೇ, ಪ್ರವಾಸಿಗರ ಹೃದಯಕ್ಕಿಳಿಯುತ್ತವೆ. ಎಲ್ಲವಯಸ್ಸಿನವರೂ ಕಣ್ತುಂಬಿಕೊಳ್ಳುವಂತಹ ಪರಿಪೂರ್ಣ ಪ್ರವಾಸಿತಾಣಗಳ ಪ್ಯಾಕೇಜ್‌ನಂತಿರುವ ಬೆಳಗಾವಿ ಜಿಲ್ಲೆಯು ರಾಜ್ಯದ ಪ್ರಮುಖ ಪ್ರವಾಸೋದ್ಯಮ ಕೇಂದ್ರಗಳಲ್ಲಿಒಂದಾಗಿದೆ. ಈ ಹಿಂದೆ ಜಿಲ್ಲೆಯ 97 ಪ್ರವಾಸಿತಾಣಗಳಿಗೆ ಅಧಿಕೃತ ಮಾನ್ಯತೆ ನೀಡಲಾಗಿತ್ತು. ಇದೀಗ ಈ ಸಂಖ್ಯೆ ಶತಕ ತಲುಪಿದ್ದು, ಕೋಟೆಗಳು ಮತ್ತು ಪುರಾತನ ಶಿಲ್ಪಕಲೆಗಳು, ಐತಿಹಾಸಿಕ ಯುದ್ಧ ಸ್ಮಾರಕ, ಸಂಸ್ಥಾನ, ಸಾಮ್ರಾಜ್ಯಗಳ ಕುರುಹುಗಳು, ಸಾಂಸ್ಕೃತಿಕ ಪರಂಪರೆ ಜತೆಗೆ ಜಲಪಾತ ಮತ್ತು ಪಶ್ಚಿಮ ಘಟ್ಟಗಳ ಮಡಿಲಿನ ನೈಸರ್ಗಿಕ ಸೊಬಗನ್ನೇ ಮೈದುಂಬಿ ನಿಂತಿರುವ ಬೆಳಗಾವಿ ಜಿಲ್ಲಾಪ್ರವಾಸೋದ್ಯಮ ಕಳೆದ ಮೂರ್ನಾಲ್ಕು ವರ್ಷಗಳಲ್ಲಿಸಾಕಷ್ಟು ಸುಧಾರಿಸಿದೆ.

ಆದರೂ, ಜಿಲ್ಲೆಯ ಅನೇಕ ತಾಣಗಳು ಸೌಕರ್ಯಗಳ ಕೊರತೆಯಿಂದ ಬಳಲುತ್ತಿವೆ. ರಸ್ತೆ, ವಸತಿ, ಶೌಚಾಲಯ, ಮಾಹಿತಿ ಕೇಂದ್ರಗಳಂತಹ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ. ಇದೆಲ್ಲದರ ನಡುವೆಯೂ ಅರಣ್ಯ ಪ್ರದೇಶದಲ್ಲಿನ ಚಾರಣದ ಮೂಲಕ ನೈಸರ್ಗಿಕ ಸೊಬಗು ಸೂಸುವ ಸ್ಥಳಗಳ ಆಕರ್ಷಣೆ ಹಾಗೂ ಮಂಜಿನ ಮುದ ನೀಡುವ ಬೆಳಗಾವಿ ಪ್ರವಾಸಕ್ಕೆ ಮನಸೋಲದವರೇ ಇಲ್ಲ. ಹೀಗಾಗಿ, ವರ್ಷದಿಂದ ವರ್ಷಕ್ಕೆ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗುತ್ತಿದ್ದು, 2020ರಲ್ಲಿ61, 61,069 ಜನ ಭೇಟಿ ನೀಡಿದ್ದರೆ, 2020ರ ಕರೋನಾ ನಿರ್ಬಂಧದ ಬಳಿಕ ಆ ಸಂಖ್ಯೆ ದುಪ್ಪಟ್ಟಾಗಿದ್ದು, 2022ರಲ್ಲಿ2,87 ಕೋಟಿ, 3.50 ಕೋಟಿ, 2024ರಲ್ಲಿ3.10 ಕೋಟಿ ಜನ ಭೇಟಿ ನೀಡಿದ್ದಾರೆ.

ದೇಶೀಯ ಹಾಗೂ ವಿದೇಶಿ ಪ್ರವಾಸಿಗರ ಆಕರ್ಷಣೆ, ಸ್ಥಳೀಯ ಸಂಸ್ಕೃತಿ, ಆಹಾರ ಪದ್ಧತಿ, ಕರಕುಶಲತೆ, ಮತ್ತು ಸಾಂಸ್ಕೃತಿಕ ವೈಭವವನ್ನು ಜಗತ್ತಿಗೆ ಪರಿಚಯಿಸುವುದು. ಪ್ರವಾಸಿಗರ ಮೂಲಕ ಸ್ಥಳೀಯರಿಗೆ ಉದ್ಯೋಗಾವಕಾಶ, ಉದ್ಯಮಶೀಲತೆ ಮತ್ತು ಆರ್ಥಿಕ ಚಟುವಟಿಕೆಗಳ ವಿಸ್ತರಣೆಯನ್ನು ಈ ನೂತನ ಪ್ರವಾಸೋದ್ಯಮ ನೀತಿಯಲ್ಲಿನಿರೀಕ್ಷಿಸಲಾಗಿದೆ. ಹೊಸದಾಗಿ ಮಾನ್ಯತೆ ಪಡೆದ 3 ತಾಣ


1.ತ್ರಿಕೂಟೇಶ್ವರ ದೇವಾಲಯ :
ಬೈಲಹೊಂಗಲ ತಾಲೂಕಿನ ಒಕ್ಕುಂದ ಗ್ರಾಮದ ವ್ಯಾಪ್ತಿಯಲ್ಲಿಮಲಪ್ರಭಾ ನದಿಯ ನಡುಗಡ್ಡೆಯಂತೆ ಆವೃತವಾಗಿರುವ ಮೂರು ಜಿನಾಲಯಗಳನ್ನೇ ತ್ರಿಕೂಟೇಶ್ವರ ದೇವಾಲಯ(ಕಲ್ಲಗುಡಿ) ಎಂದು ಕರೆಯಲಾಗುತ್ತಿದೆ. ಮಲಪ್ರಭೆ ನದಿಯಲ್ಲಿಪ್ರಾಚೀನ ಊರು ಮುಳುಗಡೆಯಾದರೂ, ಈ ತ್ರಿಕೂಟೇಶ್ವರ ದೇವಾಲಯ ದ್ವೀಪದಂತೆ ಕಾಣಸಿಗುತ್ತದೆ. ತೀರ್ಥಂಕರ ಮೂರ್ತಿ ಇಲ್ಲದ್ದರಿಂದ ದೇವಾಲಯದಂತೆ ಕಂಡರೂ ಹೊರ ಹಾಗೂ ಒಳ ಮಗ್ಗಲುಳಲ್ಲಿಜಿನ ಬಿಂಬಗಳು ತಮ್ಮ ಬಸದಿಯ ಲಕ್ಷಣವನ್ನು ಕಾಯ್ದುಕೊಂಡಿರುವುದು ಇಂದಿಗೂ ಧಾರ್ಮಿಕ ಪರಂಪರೆ ಸಾರುತ್ತಿವೆ.

2.ರಾಯಬಾಗದ ರಾಜವಾಡಾ
ರಾಯಬಾಗ ಪಟ್ಟಣದಲ್ಲಿ1904ರಿಂದ 1911ರ ಅವಧಿಯಲ್ಲಿನಿರ್ಮಿಸಿರುವ ರಾಜವಾಡಾ ಅಥವಾ ಶಿವತೀರ್ಥ ಮಹಲ್‌ ಕೊಲ್ಲಾಪುರ ಛತ್ರಪತಿ ಶಾಹು ಮಹಾರಾಜರ ಬೇಸಿಗೆ ಅರಮನೆಯಾಗಿದೆ. ಇಲ್ಲಿ26 ಎಕರೆ ವಿಸ್ತೀರ್ಣದ ಸುಂದರ ಸರೋವರ, ಅಂಬಾ ಭವಾನಿ ಹಾಗೂ ಮಹದೇವ ದೇವಸ್ಥಾನವಿದ್ದು, ಮಹಾರಾಜರ ಕಾಲದಲ್ಲಿಕೊಲ್ಲಾಪುರದ ಇಡೀ ಕಚೇರಿ ಈ ಅರಮನೆಗೆ ಸ್ಥಳಾಂತರವಾಗುತ್ತಿತ್ತು. ನಿರ್ವಹಣೆ ಕೊರತೆಯಿಂದ ಇದೀಗ ರಾಜವಾಡಾ ಅವಸಾನದ ಹಂತ ತಲುಪುತ್ತಿದೆ.

3.ಕೋಳಿಗುಡ್ಡ:
ರಾಯಬಾಗ ತಾಲೂಕಿನ ಕೋಳ್ಗಿಡ್ಡ ಗ್ರಾಮವು ಜಿಲ್ಲಾಕೇಂದ್ರದಿಂದ 123 ಕಿಮೀ ದೂರದಲ್ಲಿದೆ. ಇಲ್ಲಿನ ಆನಂದ ಆಶ್ರಮದಲ್ಲಿದಸರಾ ವೇಳೆ ಪಲ್ಲಕ್ಕಿ ಉತ್ಸವ ಹಾಗೂ ಕಾಳಿಕಾದೇವಿ ದೇವಸ್ಥಾನದ ಬಳಿ ಬೆಟ್ಟದ ಮೇಲೆ 18 ಅಡಿ ಎತ್ತರದ ಕಪ್ಪು ಗ್ರಾನೈಟ್‌ನಲ್ಲಿಪ್ರತಿಷ್ಠಾಪಿಸಿರುವ 18 ಅಡಿ ಎತ್ತರದ ಕಾಳಿಕಾ ದೇವಿ ಮೂರ್ತಿ ಪ್ರಮುಖ ಆಕರ್ಷಣೆಯಾಗಿದೆ. ಬೆಳಗಾವಿ ಜಿಲ್ಲೆಯಲ್ಲಿರುವಷ್ಟು ಸಂಖ್ಯೆಯ ಪ್ರವಾಸಿತಾಣಗಳು ಬೇರಾವ ಜಿಲ್ಲೆಯಲ್ಲೂಇಲ್ಲ. ಎಲ್ಲತಾಣಗಳಲ್ಲಿಮೂಲಸೌಕರ್ಯಗಳ ಅಭಿವೃದ್ಧಿ ಮಾಡಲಾಗುತ್ತಿದೆ. ಜಲಪಾತ, ದೇವಸ್ಥಾನ, ಶಿಲ್ಪಕಲೆ ಹಾಗೂ ಪ್ರಾಕೃತಿಕ ತಾಣಗಳು ಸಾಕಷ್ಟಿವೆ. ಅವುಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲಾಗುತ್ತಿದೆ.

RELATED ARTICLES
- Advertisment -
Google search engine

Most Popular