ರಾಷ್ಟ್ರೀಯ ಸ್ವಯಂಸೇವಕ ಸಂಘ ಮುಖ್ಯಸ್ಥ ಮೋಹನ್ ಭಾಗವತ್, ಭಾನುವಾರ ಭಾರತೀಯ ಸಂಸ್ಕೃತಿಯ ಮಹತ್ವವನ್ನು ಎತ್ತಿ ತೋರಿಸಿದ್ದಾರೆ. ಭಾರತ “ಹಿಂದೂ ರಾಷ್ಟ್ರ” ಇದೇ ಸತ್ಯ ಎಂದು ಹೇಳಿ ಅದು ಸತ್ಯವಾಗಿರುವುದರಿಂದ ಅದಕ್ಕೆ ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ ಎಂದು ಗುಡುಗಿದ್ದಾರೆ.
ಆರ್ಎಸ್ಎಸ್ನ 100 ವರ್ಷಗಳನ್ನು ಆಚರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತೀಯ ಸಂಸ್ಕೃತಿಯನ್ನು ದೇಶದಲ್ಲಿ ಗೌರವಿಸುವವರೆಗೆ ಭಾರತ ಹಿಂದೂ ರಾಷ್ಟ್ರವಾಗಿ ಉಳಿಯುತ್ತದೆ ಎಂದು ಈ ಬಗ್ಗೆ ಕೋಲ್ಕತ್ತಾದಲ್ಲಿ ನಡೆದ ಆರ್ಎಸ್ಎಸ್ನ ‘100 ವ್ಯಾಖ್ಯಾನ ಮಾಲಾ’ ಕಾರ್ಯಕ್ರಮದಲ್ಲಿ ಮಾತನಾಡಿದ್ದು, ಭಾರತ ಹಿಂದೂ ದೇಶ, ಅದಕ್ಕೆ ಸಾಂವಿಧಾನಿಕ ಅನಮೋದನೆ ಅಗತ್ಯವಿಲ್ಲ ಎಂದು ಒತ್ತಿ ಹೇಳಿದ್ದಾರೆ.
ಭಾರತ ಹಿಂದೂ ರಾಷ್ಟ್ರ ಎಂದ ಮೋಹನ್ ಭಾಗವತ್!
ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮಾತನಾಡಿದ್ದು, ಸೂರ್ಯ ಪೂರ್ವದಲ್ಲಿ ಉದಯಿಸುತ್ತಾನೆ. ಇದು ಯಾವಾಗ ನಡೆಯುತ್ತಿದೆ ಎಂದು ನಮಗೆ ತಿಳಿದಿಲ್ಲ. ಹಾಗಾದರೆ, ಅದಕ್ಕೆ ನಮಗೆ ಸಾಂವಿಧಾನಿಕ ಅನುಮೋದನೆ ಬೇಕೇ? ಹಿಂದೂಸ್ತಾನ್ ಒಂದು ಹಿಂದೂ ರಾಷ್ಟ್ರ. ಭಾರತವನ್ನು ತಮ್ಮ ಮಾತೃಭೂಮಿ ಎಂದು ಪರಿಗಣಿಸುವ ಯಾರಾದರೂ ಭಾರತೀಯ ಸಂಸ್ಕೃತಿಯನ್ನು ಗೌರವಿಸುತ್ತಾರೆ, ಹಿಂದೂಸ್ತಾನ್ ಭೂಮಿಯಲ್ಲಿ ಭಾರತೀಯ ಪೂರ್ವಜರ ವೈಭವವನ್ನು ನಂಬುವ ಮತ್ತು ಪಾಲಿಸುವ ಒಬ್ಬ ವ್ಯಕ್ತಿ ಜೀವಂತವಾಗಿರುವವರೆಗೆ, ಭಾರತವು ಹಿಂದೂ ರಾಷ್ಟ್ರವಾಗಿದೆ. ಇದು ಸಂಘದ ಸಿದ್ಧಾಂತ ಎಂದು ಹೇಳಿದರು.
ಮುಂದುವರಿದು, ಸಂಸತ್ತು ಎಂದಾದರೂ ಸಂವಿಧಾನವನ್ನು ತಿದ್ದುಪಡಿ ಮಾಡಲು ಮತ್ತು ಆ ಪದವನ್ನು ಸೇರಿಸಲು ನಿರ್ಧರಿಸಿದರೆ, ಅವರು ಅದನ್ನು ಮಾಡಲಿ ಅಥವಾ ಮಾಡದಿರಲಿ, ಅದು ಸರಿ. ನಾವು ಆ ಪದದ ಬಗ್ಗೆ ಕಾಳಜಿ ವಹಿಸುವುದಿಲ್ಲ ಏಕೆಂದರೆ ನಾವು ಹಿಂದೂಗಳು ಮತ್ತು ನಮ್ಮ ರಾಷ್ಟ್ರವು ಹಿಂದೂ ರಾಷ್ಟ್ರವಾಗಿದೆ. ಅದು ಸತ್ಯ. ಹುಟ್ಟನ್ನು ಆಧರಿಸಿದ ಜಾತಿ ವ್ಯವಸ್ಥೆಯು ಹಿಂದುತ್ವದ ಲಕ್ಷಣವಲ್ಲ ಎಂದು ಹೇಳಿದರು.
ಇನ್ನೂ ಆರ್ಎಸ್ಎಸ್ ಮುಸ್ಲಿಂ ವಿರೋಧಿ ಎಂಬ ಸಾಮಾನ್ಯ ಗ್ರಹಿಕೆಯನ್ನು ಭಾಗವತ್ ನಿರಾಕರಿಸಿದ್ದು, ಆರ್ಎಸ್ಎಸ್ ಮುಸ್ಲಿಂ ವಿರೋಧಿಗಳು ಎಂಬ ಗ್ರಹಿಕೆ ಇದ್ದರೆ, ನಾನು ಹೇಳಿದಂತೆ, ಆರ್ಎಸ್ಎಸ್ ಕೆಲಸ ಪಾರದರ್ಶಕವಾಗಿರುತ್ತದೆ. ನೀವು ಯಾವಾಗ ಬೇಕಾದರೂ ಬಂದು ನೋಡಬಹುದು ಮತ್ತು ಅಂತಹದ್ದೇನಾದರೂ ನಡೆಯುತ್ತಿರುವುದನ್ನು ನೀವು ನೋಡಿದರೆ, ನೀವು ನಿಮ್ಮ ಅಭಿಪ್ರಾಯಗಳನ್ನು ಇಟ್ಟುಕೊಳ್ಳುತ್ತೀರಿ ಮತ್ತು ನೀವು ಅದನ್ನು ನೋಡದಿದ್ದರೆ, ನಿಮ್ಮ ಅಭಿಪ್ರಾಯಗಳನ್ನು ಬದಲಾಯಿಸುತ್ತೀರಿ. ಆರ್ಎಸ್ಎಸ್ ಬಗ್ಗೆ ಅರ್ಥಮಾಡಿಕೊಳ್ಳಲು ಬಹಳಷ್ಟಿದೆ, ಆದರೆ ನೀವು ಅರ್ಥಮಾಡಿಕೊಳ್ಳಲು ಬಯಸದಿದ್ದರೆ, ಯಾರೂ ನಿಮ್ಮ ಮನಸ್ಸನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಅಲ್ಲದೆ ಭಾಗವತ್ ಅವರು ಆರ್ಎಸ್ಎಸ್ನ ಸೈದ್ಧಾಂತಿಕ ನಿಲುವನ್ನು ವಿವರಿಸಿದ್ದು, ಆರ್ಎಸ್ಎಸ್ ಭಾರತವನ್ನು ಹಿಂದೂ ರಾಷ್ಟ್ರ ಎಂದು ಬಹಳ ಹಿಂದಿನಿಂದ ನಂಬಿಕೊಂಡು ಬಂದಿದೆ ಏಕೆಂದರೆ ದೇಶದ ಸಂಸ್ಕೃತಿ ಮತ್ತು ಬಹುಪಾಲು ಜನರು ಅನುಸರಿಸುವ ಧಾರ್ಮಿಕ ಸಂಪ್ರದಾಯಗಳು ಹಿಂದೂತ್ವಕ್ಕೆ ಸಂಬಂಧಿಸಿವೆ ಎಂದರು ಹಾಗೂ ಜಾತ್ಯತೀತ ಪದ ಸಂವಿಧಾನದ ಮೂಲ ಪೀಠಿಕೆಯ ಭಾಗವಾಗಿರಲಿಲ್ಲ. ನಂತರ 1976ರಲ್ಲಿ ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರು ತುರ್ತು ಪರಿಸ್ಥಿತಿ ಹೇರಿದಾಗ ಸಂವಿಧಾನ (42ನೇ ತಿದ್ದುಪಡಿ) ಕಾಯಿದೆಯ ಮೂಲಕ ಸಮಾಜವಾದಿ ಪದದೊಂದಿಗೆ ಸೇರಿಸಲಾಯಿತು ಎಂದು ಈ ವೇಳೆ ಗಮನಸೆಳೆದರು.
ಈ ನಡುವೆ ಭಾಗವತ್ ಅವರ ಹೇಳಿಕೆಯು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದ್ದು, ಕೆಲವರು ಇದನ್ನು ಹಿಂದೂತ್ವದ ಸಿದ್ಧಾಂತದ ಪುನರುಚ್ಚಾರವೆಂದು ಕಂಡರೆ, ವಿಪಕ್ಷದಿಂದ ಜಾತ್ಯತೀತತೆಗೆ ಧಕ್ಕೆಯೆಂದು ಟೀಕೆ ಬಂದಿದೆ. ಆರ್ಎಸ್ಎಸ್ 100 ವರ್ಷಗಳ ಆಚರಣೆಯಲ್ಲಿ ಈ ಹೇಳಿಕೆ ನೀಡಿರುವುದು ಸಂಘಟನೆಯ ನಿಲುವನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದೆ ಎನ್ನಲಾಗಿದೆ.



