ಮೈಸೂರು : ಮಾದಕ ವಸ್ತು ಸಾಗಿಸುತ್ತಿದ್ದ ನಾಲ್ವರನ್ನು ಬಂಧಿಸಿರುವ ಸಿಸಿಬಿ ಪೊಲೀಸರು, ಬಂಧಿತರಿಂದ 10.3 ಲಕ್ಷ ರೂ.ಮೌಲ್ಯದ 103 ಗ್ರಾಂ ಎಂಡಿಎಂಎ ಮಾದಕ ವಸ್ತು ಮತ್ತು ಸಾಗಣೆಗೆ ಬಳಸಿದ್ದ 8 ಲಕ್ಷ ರೂ. ಮೌಲ್ಯದ ಕಾರು ವಶಪಡಿಸಿಕೊಂಡಿದ್ದಾರೆ.
ಬೆಂಗಳೂರಿನ ನುಹೇದ್ ಖಾನ್, ಮೈಸೂರಿನ ಲಷ್ಕರ್ ಮೊಹಲ್ಲಾದ ಜಾವೀದ್ ಅಹಮ್ಮದ್, ಗೌಸಿಯಾ ನಗರದ ಜಿಯಾವುಲ್ಲಾ, ಸುಹೇಲ್ ಪಾಷ ಬಂಧಿತರಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಖಚಿತ ಮಾಹಿತಿ ಮೇರೆಗೆ ಮಂಡಿ ಮೊಹಲ್ಲಾ ಉಮರ ಖಯಾಂ ರಸ್ತೆಯಲ್ಲಿ ನಿಂತಿದ್ದ ಕಾರಿನ ಮೇಲೆ ಪೊಲೀಸರು ದಾಳಿ ನಡೆಸಿ, ಕಾರಿನಲ್ಲಿದ್ದ ನಾಲ್ವರನ್ನು ವಶಕ್ಕೆ ಪಡೆದು, 10 ಲಕ್ಷ ರೂ. ಮೌಲ್ಯದ ಮಾದಕ ವಸ್ತುವನ್ನು ಪತ್ತೆ ಮಾಡಿ, ಆರೋಪಿಗಳನ್ನು ಬಂಧಿಸಿದ್ದಾರೆ.
ಸಿಸಿಬಿ ಘಟಕದ ಎಸಿಪಿ ಮಹಮ್ಮದ್ ಶರೀಫ್ ರಾವುತರ್ ಅವರ ನೇತೃತ್ವದಲ್ಲಿ ಇನ್ಸ್ಪೆಕ್ಟರ್ ಶಬ್ಬೀರ್ ಹುಸೇನ್, ಎಸ್ಐ ಕೆ.ಲೇಪಾಕ್ಷ, ಸಿಬ್ಬಂದಿಗಳಾದ ಆರ್.ಜೋಸ್ನಾ ರಾಜ್, ರೇವಣ್ಣ ಸಿದ್ದಪ್ಪ, ಮಧುಕುಮಾರ್, ಚೇತನ್, ಆಧಾಮ್, ಕಿರಣ್ ರಾಥೋಡ್, ಸಂತೋಷ್ ಪವಾರ್, ಹಜ್ರತ್ ಅಲಿ, ರಾಜಾ ಸಾಬ್, ಸಮೀರ್, ಯಶ್ವಂತ್, ದೇವರಾಜು, ಎನ್.ಜಿ.ಮಮತ ಪತ್ತೆ ಕಾರ್ಯಚರಣೆಯಲ್ಲಿಇದ್ದರು. ಈ ಸಂಬಂಧ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



