Friday, June 13, 2025
Google search engine

Homeರಾಜ್ಯಮರು ಜಾತಿ ಗಣತಿ ನಿರ್ಧಾರಕ್ಕೆ ದಿನೇಶ್ ಗೂಳಿಗೌಡ ಸ್ವಾಗತ

ಮರು ಜಾತಿ ಗಣತಿ ನಿರ್ಧಾರಕ್ಕೆ ದಿನೇಶ್ ಗೂಳಿಗೌಡ ಸ್ವಾಗತ

ಬೆಂಗಳೂರು: ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಅವರು ಮರು ಜಾತಿ ಗಣತಿ ನಡೆಸುವ ಸರ್ಕಾರದ ನಿರ್ಧಾರವನ್ನು ಹರ್ಷದಿಂದ ಸ್ವಾಗತಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು, ಈ ನಿರ್ಧಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಮತ್ತು ಕಾಂಗ್ರೆಸ್ ಹೈಕಮಾಂಡ್‌ಗೆ ಅಭಿನಂದನೆ ಸಲ್ಲಿಸಿದ್ದಾರೆ.

ಹಿಂದುಳಿದ ವರ್ಗಗಳ ಆಯೋಗದ ಹಿಂದಿನ ಸಮೀಕ್ಷೆ ಬಗ್ಗೆ ಗೊಂದಲಗಳಿದ್ದವು. ಮಠಾಧೀಶರು, ಧಾರ್ಮಿಕ ನಾಯಕರು ಮತ್ತು ವಿವಿಧ ಜಾತಿ ಸಂಘಟನೆಗಳು ಮರು ಗಣತಿಗೆ ಒತ್ತಾಯಿಸಿದ್ದು, ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಹೊಸ ನಿರ್ಧಾರ ಪ್ರಕಟವಾಗಿದೆ. ಈ ಸಮೀಕ್ಷೆ ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳಲಿ ಮತ್ತು ಎಲ್ಲ ಗೊಂದಲಗಳು ಸ್ಪಷ್ಟವಾಗಲಿ ಎಂಬುದು ನಮ್ಮ ಆಶಯ ಎಂದು ಅವರು ಹೇಳಿದ್ದಾರೆ.

RELATED ARTICLES
- Advertisment -
Google search engine

Most Popular