ವರದಿ: ಎಡತೊರೆ ಮಹೇಶ್
ಎಚ್ ಡಿ ಕೋಟೆ: ಎಚ್ ಡಿ ಕೋಟೆ ತಾಲೂಕು ಕೆ ಎಡತೊರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2025-2026ನೇ ಸಾಲಿನಲ್ಲಿ ಮಂತ್ರಿಮಂಡಲ ರಚನೆಯ ಚುನಾವಣೆ ದಿನಾಂಕ ಘೋಷಣೆಯಾಗಿದ್ದು, ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿದ್ದು ಕಾರಣ ವಿದ್ಯಾರ್ಥಿಗಳು ನಾಮಪತ್ರ ಸಲ್ಲಿಸಲು ಸರದಿ ಸಾಲಿನಲ್ಲಿ ಚುನಾವಣಾ ಅಧಿಕಾರಿ ಮೇಘನಾ ರವರಿಗೆ ನಾಮಪತ್ರ ಸಲ್ಲಿಸಿದರು.

ಇಲ್ಲಿ ಈಗಾಗಲೇ ನನಗೆ ಮತ ನೀಡುವಂತೆ ಅಭ್ಯರ್ಥಿಗಳು ವಿದ್ಯಾರ್ಥಿಗಳನ್ನು ಮತ ಕೇಳುತ್ತಿದ್ದು ವಿಶೇಷವಾಗಿತ್ತು . ಈ ಒಂದು ಚುನಾವಣೆಯಲ್ಲಿ 12 ಜನ ಮಾತ್ರ ಆಯ್ಕೆ ಬೇಕಾಗಿರುತ್ತದೆ. ಇಲ್ಲಿ 26 ವಿದ್ಯಾರ್ಥಿಗಳು ನಾಮಪತ್ರ ಸಲ್ಲಿಸಿದ್ದು ಇಲ್ಲಿ ಯಾರು ಕೂಡ ನಾಮಪತ್ರ ವಾಪಸ್ ಪಡೆಯದ ಕಾರಣ ಚುನಾವಣೆ ನಡೆಯುತ್ತಿದೆ.

ಅವಿರೋಧ ಆಯ್ಕೆ ಮಾಡಲು ಶಾಲೆಯ ಎಸ್ ಟಿ ಎಮ್ ಸಿ ಯ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಹಾಗೂ ಶಾಲಾ ಶಿಕ್ಷಕರು ಮನವಿ ಮಾಡಿದರು. ಆದರೆ ಅಭ್ಯರ್ಥಿಗಳು ಇದಕ್ಕೆ ಒಪ್ಪದ ಕಾರಣ ಚುನಾವಣೆ ನಡೆಯುತ್ತಿದೆ .
SDMC ಅಧ್ಯಕ್ಷರಾದ ಮಹೇಂದ್ರ, ಸದಸ್ಯರಾದ ಮಹೇಶ್ ಮತ್ತು ನಾಗರಾಜ್, ಮುಖ್ಯ ಶಿಕ್ಷಕರಾದ ದೇವಮಣಿ, ಶ್ರೀಮತಿ ಮಂಗಳ, ಜ್ಯೋತಿ, ಮೇಘನಾ ಈ ಸಂದರ್ಭದಲ್ಲಿ ಹಾಜರಿದ್ದರು.