ಹುಣಸೂರು: ನಗರದ ನಡು ಬೀದಿ ನಿವಾಸಿ ಸುಬ್ರಮಣಿ.ಜಿ ಹಾಗೂ ಶರ್ಮಿಳ ದಂಪತಿಗಳ ಸುಪುತ್ರಿ ಕುಮಾರಿ ಚಂದನರವರು ಆಂಧ್ರಪ್ರದೇಶದ ವಿಶ್ವವಿದ್ಯಾನಿಲಯದಲ್ಲಿ ಬಿ.ಎಸ್.ಸಿ ಫಾರೆಸ್ಟ್ರಿಯಲ್ಲಿ ಪ್ರಥಮ ರಾಂಕ್ ಪಡೆದು ಚಿನ್ನದ ಪದಕಗಳಿಸುವ ಮೂಲಕ ತಾಲ್ಲೂಕಿಗೆ ಹೆಮ್ಮೆ ತಂದಿದ್ದಾರೆ .
ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರ್ ಅಂಡ್ ರಿಸರ್ಚ್ ಎಂ.ಎಸ್ಸಿ (ICAF) ಫಾರೆಸ್ಟ್ರೀ ಪ್ರವೇಶ ಪರೀಕ್ಷೆಯಲ್ಲಿ ಆಲ್ ಇಂಡಿಯಾ ರಾಂಕಿಂಗ್ ನಲ್ಲಿ ೩೩ನೇ ರಾಂಕ್ ಪಡೆಯುವ ಮೂಲಕ ಉತ್ತರ ಪ್ರದೇಶದ ಅಯೋಧ್ಯದಲ್ಲಿ ಎಂ ಎಸ್ ಸಿ ಫಾರೆಸ್ಟ್ರಿ ಪ್ರವೇಶ ಪಡೆದಿದ್ದಾರೆ.