Saturday, May 2, 2026
Google search engine

Homeದೇಶನಿಮ್ಮ ಫೋನ್‌ಗೂ ಅಲರ್ಟ್‌ ಮೆಸೇಜ್‌ ಬಂತಾ..?

ನಿಮ್ಮ ಫೋನ್‌ಗೂ ಅಲರ್ಟ್‌ ಮೆಸೇಜ್‌ ಬಂತಾ..?

ಬೆಂಗಳೂರು: ಇಂದು ನಿಮ್ಮ ಮೊಬೈಲ್‌ ಫೋನ್‌ ಜೋರಾಗಿ ಬೀಪ್ ಸೌಂಡ್‌ ಮಾಡಿದ್ರೆ ಅಥವಾ ಅನಿರೀಕ್ಷಿತ ಅಲರ್ಟ್ ಮೆಸೇಜ್‌ ಬಂದರೆ ಭಯಪಡಬೇಡಿ. ಅದು ಬೇರೇನು ಅಲ್ಲ ತುರ್ತು ಎಚ್ಚರಿಕೆಯ ಸಂದೇಶ. ಹೊಸ ತುರ್ತು ಎಚ್ಚರಿಕೆ ವ್ಯವಸ್ಥೆಯನ್ನು ಸರ್ಕಾರ ಪರೀಕ್ಷಿಸುತ್ತಿದ್ದು, ಈ ಕಾರಣದಿಂದ ಮೊಬೈಲ್ ಗಳಲ್ಲಿ ಅಲರ್ಟ್ ಸಂದೇಶ ಹಾಗೂ ಸೈರನ್ ಮೊಳಗಲಿದೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (NDMA) ಮೇ 2ರಂದು ದೇಶವ್ಯಾಪಿ ಹೊಸ ವಿಪತ್ತು ಎಚ್ಚರಿಕಾ ವ್ಯವಸ್ಥೆಯನ್ನು ಪರೀಕ್ಷಿಸುತ್ತಿದೆ. ಹೀಗಾಗಿ ಇಂದು ನಿಮ್ಮ ಮೊಬೈಲ್‌ನಲ್ಲಿ ಜೋರಾಗಿ ಸೈರನ್ ಶಬ್ದದೊಂದಿಗೆ ಅಲರ್ಟ್ ಸಂದೇಶ ಕಾಣಿಸಬಹುದು.

ಪ್ರಕೃತಿ ವಿಕೋಪ ಅಥವಾ ಇತರೆ ಯಾವುದೇ ವಿಪತ್ತು ಬಂದಾಗ ತನ್ನ ನಾಗರಿಕರನ್ನು ರಕ್ಷಿಸಲು ಭಾರತ ತನ್ನದೇ ಆದ ಎಚ್ಚರಿಕೆ ವ್ಯವಸ್ಥೆಯನ್ನು ನಿರ್ಮಿಸುತ್ತಿದೆ. ಸೆಲ್ ಬ್ರಾಡ್‌ಕಾಸ್ಟ್ ಅಲರ್ಟ್ ಹೆಸರಿನ ಈ ಸಿಸ್ಟಮ್ ಪ್ರಸ್ತುತ ದೇಶಾದ್ಯಂತ ಪರೀಕ್ಷೆಯಲ್ಲಿದೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತುರ್ತು ಸಂದರ್ಭಗಳಲ್ಲಿ ನಾಗರಿಕರ ಮೊಬೈಲ್‌ಗಳಿಗೆ ನೇರವಾಗಿ ಸಂದೇಶ ಬಿತ್ತರಿಸುವ ಸೆಲ್‌ ಬ್ರಾಡ್‌ಕಾಸ್ಟ್‌ ಸೇವೆ ಆರಂಭಕ್ಕೆ ಸಿದ್ಧತೆ ನಡೆಸಲಾಗಿದೆ. ಅದರ ಭಾಗವಾಗಿ ಇಂದು (ಮೇ 2) ನಾಗರಿಕರ ಮೊಬೈಲ್‌ಗಳಿಗೆ NDMAನಿಂದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಫ್ಲ್ಯಾಶ್ SMS ಸಂದೇಶ ಬರಬಹುದು. ಹೀಗಾಗಿ ಯಾರೂ ಆತಂಕಪಡಬಾರದು.

ಪ್ರಕೃತಿ ವಿಕೋಪ ಮತ್ತು ತುರ್ತು ಸಂದರ್ಭಗಳಲ್ಲಿ ಸರ್ಕಾರವು ಕೆಲವು ಮಾಹಿತಿಯನ್ನು ಒದಗಿಸಲು ಬಯಸುತ್ತಿದ್ದು, ಮೊಬೈಲ್ ಫೋನ್‌ಗಳಲ್ಲಿ ನೇರ ಎಚ್ಚರಿಕೆಗಳಿಗಿಂತ ಉತ್ತಮವಾದ ಆಯ್ಕೆ ಇನ್ನೊಂದಿಲ್ಲ. ಹೀಗಾಗಿ ತುರ್ತು ಪರಿಸ್ಥಿತಿಗಳನ್ನು ಎದುರಿಸಲು ಅದರ ಸನ್ನದ್ಧತೆಯ ಭಾಗವಾಗಿ, ಸರ್ಕಾರವು ಸ್ಥಳೀಯ ಸೆಲ್ ಪ್ರಸಾರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ. ಪ್ರಸ್ತುತ ದೇಶಾದ್ಯಂತ ಈ ವ್ಯವಸ್ಥೆಯನ್ನು ಪರೀಕ್ಷಿಸುತ್ತಿದೆ.

ಸರ್ಕಾರವು ಈ ವ್ಯವಸ್ಥೆಯನ್ನು ಈ ಹಿಂದೆಯೂ ಕೆಲವು ಬಾರಿ ಪರೀಕ್ಷಿಸಿದೆ. ಆದರೆ, ಇದನ್ನು ರಾಷ್ಟ್ರವ್ಯಾಪಿ ಜಾರಿಗೆ ತರುವ ಮೊದಲು ವ್ಯವಸ್ಥೆಯ ಕಾರ್ಯಕ್ಷಮತೆ ಮತ್ತು ವಿಶ್ವಾಸಾರ್ಹತೆಯನ್ನು ನಿರ್ಣಯಿಸುವ ಸಲುವಾಗಿ ಮತ್ತೊಂದು ಪರೀಕ್ಷೆ ನಡೆಸುತ್ತಿದೆ.

RELATED ARTICLES
- Advertisment -
Google search engine

Most Popular